ಆ್ಯಪ್ನಗರ

ದೇವೇಗೌಡ ಪ್ರಧಾನಿಯಾಗಿದ್ದು ಯೋಗ್ಯತೆಯಿಂದಲ್ಲ, ಅದೃಷ್ಟದಿಂದ: ಆಯನೂರು ಮಂಜುನಾಥ್‌

ದಕ್ಷಿಣ ಭಾರತದ ಹೆಬ್ಬಾಗಿಲು ಮುಚ್ಚಲು ಮಾಜಿ ಪ್ರಧಾನಿಗೆ ಸಾಧ್ಯವಿಲ್ಲ

Vijaya Karnataka Web 23 Nov 2018, 9:00 pm
ಶಿವಮೊಗ್ಗ: ಎಚ್‌.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದು ಅದೃಷ್ಟದಿಂದಲೇ ಹೊರತು ಯೋಗ್ಯತೆಯಿಂದಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಹೇಳಿದ್ದಾರೆ.
Vijaya Karnataka Web ಆಯನೂರು ಮಂಜುನಾಥ್‌
ಆಯನೂರು ಮಂಜುನಾಥ್‌


ಶಿವಮೊಗ್ಗದ ದೈವಜ್ಞ ಕಲ್ಯಾಣ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜುನಾಥ್‌ ಮಾತನಾಡಿದರು.

ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲು ಬಂದ್ ಮಾಡುವುದಾಗಿ ದೇವೇಗೌಡ ಹೇಳಿದ್ದರು. ಆದರೆ, ವಾಸ್ತವದಲ್ಲಿ ಆಗಿದ್ದೇ ಬೇರೆ. ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಹಿಂಜರಿಯದಿದ್ದರೆ ಅವರ ಸೊಸೆಯೇ ಸೋಲುತಿದ್ದರು‌ ಎಂದರು.

ದೇವೇಗೌಡರು ರಾಷ್ಟ್ರದ ಪ್ರಧಾನಿಯಾಗಿದ್ದು, ಅದೃಷ್ಟದಿಂದಲೇ ವಿನಹ ಯೋಗ್ಯತೆಯಿಂದ ಅಲ್ಲ. ಲಾಲು ಪ್ರಸಾದ್ ಯಾದವ್ ಅವರು ದಿಲ್ಲಿಯಲ್ಲಿದ್ದಾಗ ಪ್ರಧಾನಿ ಆಯ್ಕೆ ಸಭೆಯಲ್ಲಿ "ದಹಿವಡಾ ಲಾವ್" ಅಂದಿದ್ರು. ಅದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದ ದೇವೇಗೌಡರು ತಮ್ಮ ಹೆಸರು ಸೂಚಿದ್ದಾರೆಂದು ಎದ್ದು ನಿಂತಿದ್ದರು. ಅವರಿಗೆ ಹಿಂದಿ ಬರಲ್ಲ, ಆದರೂ ದೇಶದ ಪ್ರಧಾನಿ ಆಗಿದ್ದಾರೆ. ಅದು ಅದೃಷ್ಟವಷ್ಟೆ ಎಂದು ಆಯನೂರು ಮಂಜುನಾಥ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ