ಆ್ಯಪ್ನಗರ

ಗರ್ವದ ಮಾತಿನಿಂದ ಗರ್ವಭಂಗ: ಪ್ರಧಾನಿಗೆ ಗೌಡರ ಎಚ್ಚರಿಕೆ

ಎಲ್ಲ ಕೆಲಸವನ್ನು ಮೋದಿಯವರೇ ಮಾಡಿದ್ದೇ ಆದಲ್ಲಿ ಸ್ವಾತಂತ್ರ್ಯ ನಂತರದಿಂದ ದೇಶವನ್ನಾಳಿದ ಪ್ರಧಾನಿಗಳು ಏನೂ ಮಾಡಿಲ್ಲವೇ, ಪ್ರಧಾನಿಯಾದವರು ತಮ್ಮ ಚೌಕಟ್ಟು ಮೀರಿ ಮಾತನಾಡಬಾರದು ಎಂಬ ಎಚ್ಚರಿಕೆ ಇಲ್ಲದಿದ್ದರೆ ಇಂತಹ ಗರ್ವದ ಮಾತಿನಿಂದ ಗರ್ವಭಂಗವಾಗುತ್ತದೆ, ಎಂದು ದೇವೇಗೌಡರು ಎಚ್ಚರಿಸಿದ್ದಾರೆ.

Vijaya Karnataka 10 Feb 2019, 8:02 am
ಹಾಸನ: ಕಳೆದ ಐದು ವರ್ಷದ ಅಧಿಕಾರಾವಧಿಯಲ್ಲಿ ಎಲ್ಲ ಸಾಧನೆಯನ್ನು ನಾನೇ ಮಾಡಿದ್ದೇನೆ ಎಂಬ ಪ್ರಧಾನಿ ನರೇಂದ್ರ ಮೋದಿಯ ಮಾತು ಅವರ ಆ ಸ್ಥಾನಕ್ಕೆ ತಕ್ಕದ್ದಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಿದರು.
Vijaya Karnataka Web DeveGowda


ಹೊಳೆನರಸೀಪುರದ ಸರಕಾರಿ ಮಹಿಳಾ ಕಾಲೇಜು, ಗೃಹವಿಜ್ಞಾನ ಕಾಲೇಜು ದಶಮಾನೋತ್ಸವ ಸಮಾರಂಭದಲ್ಲಿ ಶನಿವಾರ ಮಾತನಾಡಿ, ''ಎಲ್ಲ ಕೆಲಸವನ್ನು ಮೋದಿಯವರೇ ಮಾಡಿದ್ದೇ ಆದಲ್ಲಿ ಸ್ವಾತಂತ್ರ್ಯ ನಂತರದಿಂದ ದೇಶವನ್ನಾಳಿದ ಪ್ರಧಾನಿಗಳು ಏನೂ ಮಾಡಿಲ್ಲವೇ, ಪ್ರಧಾನಿಯಾದವರು ತಮ್ಮ ಚೌಕಟ್ಟು ಮೀರಿ ಮಾತನಾಡಬಾರದು ಎಂಬ ಎಚ್ಚರಿಕೆ ಇಲ್ಲದಿದ್ದರೆ ಇಂತಹ ಗರ್ವದ ಮಾತಿನಿಂದ ಗರ್ವಭಂಗವಾಗುತ್ತದೆ,''ಎಂದು ಎಚ್ಚರಿಸಿದರು.

''ಅನೇಕ ಪುಣ್ಯಾತ್ಮರು ಬಂದು ಹೋಗಿದ್ದಾರೆ ಅವರ ಸೇವೆ ಸ್ಮರಿಸಬೇಕು, ಬ್ರಿಟಿಷರಿಂದ ಭಾರತವನ್ನು ಉಳಿಸಿಕೊಳ್ಳಲಿಲ್ಲವೇ,'' ಎಂದು ಪ್ರಶ್ನಿಸಿದರು.

ರೇವಣ್ಣರಿಗೆ ಸಲಹೆ

''ಸಚಿವ ಎಚ್‌.ಡಿ.ರೇವಣ್ಣನಿಗೆ ಎಲ್ಲವನ್ನು ಮಾಡಿಬಿಡಬೇಕು ಎಂಬ ಹಠ. ಈ ವಿಷಯದಲ್ಲಿ ಮುಖ್ಯಮಂತ್ರಿ ಹಾಗೂ ರೇವಣ್ಣನ ನಡುವೆ ತರ್ಕವೂ ನಡೆಯುತ್ತದೆ. ಮುಖ್ಯಮಂತ್ರಿ ಎಷ್ಟು ಶ್ರಮವಹಿಸಿ ಬಜೆಟ್‌ ನೀಡಿದ್ದಾರೆ ಎಂಬುದನ್ನು ರೇವಣ್ಣ ಕೂಡ ಅರ್ಥಮಾಡಿಕೊಳ್ಳಬೇಕು,'' ಎಂದು ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ