ಆ್ಯಪ್ನಗರ

ಸಿದ್ದು ವಿರುದ್ಧ ಸೋನಿಯಾಗೆ ದೂರಿದ ಎಚ್‌ಡಿಡಿ

ದೋಸ್ತಿ ಸರಕಾರದ ಪತನ ನಿಶ್ಚಿತವಾಗುತ್ತಿದ್ದಂತೆ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರಿಗೆ ಕರೆ ಮಾಡಿದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರಿದ್ದಾರೆ.

Vijaya Karnataka 7 Jul 2019, 5:00 am
ಬೆಂಗಳೂರು : ದೋಸ್ತಿ ಸರಕಾರದ ಪತನ ನಿಶ್ಚಿತವಾಗುತ್ತಿದ್ದಂತೆ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರಿಗೆ ಕರೆ ಮಾಡಿದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರಿದ್ದಾರೆ.
Vijaya Karnataka Web devegowda complaint against siddaramaiah
ಸಿದ್ದು ವಿರುದ್ಧ ಸೋನಿಯಾಗೆ ದೂರಿದ ಎಚ್‌ಡಿಡಿ


ಸಿದ್ದು ಅಸಹಾಕಾರದ ಬಗ್ಗೆ ಲೋಕಸಭೆ ಚುನಾವಣೆ ಸಂದರ್ಭದಲ್ಲೆ ಕಾಂಗ್ರೆಸ್‌ ವರಿಷ್ಠರಿಗೆ ಗೌಡರು ಪತ್ರ ಬರೆದಿದ್ದರು. ಚುನಾವಣೆ ಬಳಿಕವೂ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಸಿದ್ದು ವಿರುದ್ಧ ದೂರು ನೀಡಿದ್ದರು. ಸೋನಿಯಾ ಅವರನ್ನು ಸಂಪರ್ಕಿಸಿ ಈ ಎಲ್ಲ ಸಂಗತಿ ನೆನಪಿಸಿದ ಗೌಡರು ತಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹಾಗಾಗಿ ಇಂಥ ಪರಿಸ್ಥಿತಿ ನಿರ್ಮಾಣವಾಯಿತು ಎಂದರೆನ್ನಲಾಗಿದೆ.

ರಾಜೀನಾಮೆ ಕೊಟ್ಟಿರುವ ಶಾಸಕರಲ್ಲಿ ಹೆಚ್ಚಿನವರು ಸಿದ್ದು ಬೆಂಬಲಿಗರು. ಇದರಿಂದಲೇ ಸಿದ್ದು ಮನಸ್ಸಿನಲ್ಲಿ ಏನಿದೆಯೆಂದು ಅರ್ಥವಾಗುತ್ತದೆ. ಸಿದ್ದು ನಡೆಯಿಂದ ಕಾಂಗ್ರೆಸ್‌ಗೂ ಹಾನಿಯಾಗಲಿದೆ ಎಂದೂ ಗೌಡರು ಪ್ರಸ್ತಾಪಿಸಿರುವುದಾಗಿ ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ