ಆ್ಯಪ್ನಗರ

ದೇವೇಗೌಡರ ಕುಟುಂಬ ಎಲ್ಲ ಅಧಿಕಾರ ಅನುಭವಿಸಿದೆ: ವಿಶ್ವನಾಥ್‌

ಕಳೆದ ಒಂದು ವಾರದಂದ ನಡೆಯುತ್ತಿರುವ ರಾಜಕೀಯ ನಾಟಕಕ್ಕೆ 'ಮಂಗಳ' ಹಾಡುವ ಸಮಯ ಬಂದಿದೆ. ಕ್ಲೈಮ್ಯಾಕ್ಸ್ ಹಂತದಲ್ಲಿ ಅತೃಪ್ತರ ಮನವೊಲಿಕೆ, ಹೇಳಿಕೆ, ಪ್ರತಿ ಹೇಳಿಕೆ ಜೋರಾಗಿ ಸಾಗಿದೆ.

Vijaya Karnataka Web 14 Jul 2019, 5:22 pm
ಮುಂಬಯಿ: ರಾಜ್ಯದಲ್ಲಿ ಎಚ್‌ಡಿ ದೇವೇಗೌಡ ಕುಟುಂಬ ಎಲ್ಲ ಅಧಿಕಾರ ಅನುಭವಿಸಿದೆ. ಪ್ರಧಾನಮಂತ್ರಿ ಹುದ್ದೆ, ಮುಖ್ಯಮಂತ್ರಿ ಹುದ್ದೆ, ಸಚಿವ ಸ್ಥಾನ, ಶಾಸಕ ಸ್ಥಾನ, ಸಂಸದ ಸ್ಥಾನ ಎಲ್ಲವನ್ನೂ ಅನುಭವಿಸಿದ್ದಾರೆ. ಆದರೂ ಇನ್ನೂ ಅಧಿಕಾರದ ಆಸೆ ಇದೆ ಎಂದು ಶಾಸಕ ಎಚ್‌. ವಿಶ್ವನಾಥ್‌ ಹೇಳಿದ್ದಾರೆ.
Vijaya Karnataka Web ಎಚ್‌ ವಿಶ್ವನಾಥ್‌
ಎಚ್‌ ವಿಶ್ವನಾಥ್‌


ಮುಂಬಯಿಯಲ್ಲಿ ಶಾಸಕ ಎಚ್‌. ವಿಶ್ವನಾಥ್‌ ಈ ವಿಷಯವನ್ನು ತಿಳಿಸಿದರು.

ರಾಜ್ಯದಲ್ಲಿ ಈಗ ಸಾಂವಿಧಾನಿಕ ಬಿಕ್ಕಟ್ಟು ನಿರ್ಮಾಣವಾಗಿದೆ. ಇಂಥ ಸಮಯದಲ್ಲಿ ದೇವೇಗೌಡರು ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ವಿಶ್ವನಾಥ್‌ ಸಲಹೆ ನೀಡಿದರು.

ನಾವು ಅತೃಪ್ತ ಶಾಸಕರಲ್ಲ ರಾಜ್ಯದ ಜನತೆಗೆ ಮೈತ್ರಿ ಸರಕಾರದ ಮೇಲಿನರುವ ಅತೃಪ್ತ, ಅಸಮಾಧಾನದ ಪ್ರತಿನಿಧಿಗಳಾಗಿ ರಾಜೀನಾಮೆ ನೀಡಿದ್ದೇವೆ ಎಂದು ವಿಶ್ವನಾಥ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ