ಬೆಂಗಳೂರು: ವಾಹನ ಸವಾರರು ತಾವು ಮಾಡದ ತಪ್ಪಿಗಾಗಿ ದಂಡದ ನೋಟಿಸ್ ಬಂದರೆ ಹೆದರುವ ಅಗತ್ಯವಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೆ ಸಾಕು. ಅವರು ಪರಿಶೀಲನೆ ನಡೆಸಿ ತಪ್ಪಿಲ್ಲದಿದ್ದರೆ ದಂಡದ ನೋಟಿಸನ್ನು ವಾಪಸ್ ಪಡೆಯುತ್ತಾರೆ.
ಸಿಗ್ನಲ್ಗಳಲ್ಲಿ ಮತ್ತು ರಸ್ತೆಗಳಲ್ಲಿ ಕರ್ತವ್ಯ ನಿರತ ಸಂಚಾರ ವಿಭಾಗದ ಸಿಬ್ಬಂದಿ ನಿಯಮ ಉಲ್ಲಂಘಿಸುವ ಸವಾರರ ವಾಹನಗಳ ಸಂಖ್ಯೆಯನ್ನು ಬರೆದುಕೊಳ್ಳುತ್ತಾರೆ. ಬಳಿಕ ಅವರ ವಿಳಾಸಕ್ಕೆ ದಂಡದ ನೋಟಿಸ್ ತಲುಪುತ್ತದೆ. ಈ ವ್ಯವಸ್ಥೆ ಪರಿಣಾಮಕಾರಿಯಾಗಿದೆಯಾದರೂ ಚಲಿಸುತ್ತಿರುವ ವಾಹನಗಳ ನಂಬರ್ ಬರೆದುಕೊಳ್ಳುವ ವೇಳೆಯಲ್ಲಿ ಸಿಬ್ಬಂದಿಯ ಕಣ್ತಪ್ಪಿನಿಂದ ಒಂದು ನಂಬರ್ ವ್ಯತ್ಯಾಸವಾದರೂ ಅದು ಬೇರೊಬ್ಬ ವಾಹನ ಮಾಲೀಕರಿಗೆ ಹೋಗುತ್ತದೆ. ಇಂಥ ಸಂದರ್ಭಗಳಲ್ಲಿ ತಾವು ಮಾಡದ ತಪ್ಪಿಗೆ ನೋಟಿಸ್ ಬಂದರೆ ವಾಹನ ಮಾಲೀಕರು ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಸಂಚಾರ ವಿಭಾಗದ ಬೆಂಗಳೂರು ಜಂಟಿ ಆಯುಕ್ತ ರವಿಕಾಂತೇಗೌಡ ಅವರು 'ವಿಜಯ ಕರ್ನಾಟಕ' ಜತೆ ವಿವರ ನೀಡಿದ್ದಾರೆ.
''ಇಂಥ ಪ್ರಕರಣ ವಿರಳ. ಸಾಮಾನ್ಯವಾಗಿ ನಂಬರ್ ವ್ಯತ್ಯಾಸವಾದರೆ ಆ ನಂಬರಿನ ವಾಹನಗಳೇ ಇರುವುದಿಲ್ಲ ಅಥವಾ ದ್ವಿಚಕ್ರ ವಾಹನದ ಬದಲಿಗೆ ಕಾರು, ಆಟೋಗಳ ನಂಬರ್ ಆಗಿರಬಹುದು. ಇಂಥ ಸಂದರ್ಭದಲ್ಲಿ ವಾಹನ ಸವಾರರು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಬಹುದು. ಆದರೆ ಈಗ ಜಾರಿಯಲ್ಲಿರುವ ವ್ಯವಸ್ಥೆಯಲ್ಲಿ ಇಂಥ ಲೋಪಕ್ಕೆ ಆಸ್ಪದ ಇಲ್ಲ. ಸೂಕ್ತ ಸಾಕ್ಷ್ಯ ಇಲ್ಲದೆ ದಂಡದ ನೋಟಿಸ್ ಹೋಗುವುದಿಲ್ಲ. ಸಿಗ್ನಲ್ಗಳಲ್ಲಿರುವ ಸಿಸಿ ಕ್ಯಾಮೆರಾಗಳಲ್ಲಿ ಈ ಬಗ್ಗೆ ಸಾಕ್ಷ್ಯ ಇರುತ್ತದೆ. ಅಲ್ಲದೆ ಸಂಚಾರ ವಿಭಾಗದ ಸಿಬ್ಬಂದಿ ಕೂಡ ಫೋಟೊ ತೆಗೆದಿರುತ್ತಾರೆ. ಫೋಟೊ ಆಧಾರದಲ್ಲಿ ನೋಟಿಸ್ ಹೋಗುತ್ತದೆ,'' ಎಂದು ರವಿಕಾಂತೇ ಗೌಡ ಹೇಳಿದರು.
ಸಿಗ್ನಲ್ಗಳಲ್ಲಿ ಮತ್ತು ರಸ್ತೆಗಳಲ್ಲಿ ಕರ್ತವ್ಯ ನಿರತ ಸಂಚಾರ ವಿಭಾಗದ ಸಿಬ್ಬಂದಿ ನಿಯಮ ಉಲ್ಲಂಘಿಸುವ ಸವಾರರ ವಾಹನಗಳ ಸಂಖ್ಯೆಯನ್ನು ಬರೆದುಕೊಳ್ಳುತ್ತಾರೆ. ಬಳಿಕ ಅವರ ವಿಳಾಸಕ್ಕೆ ದಂಡದ ನೋಟಿಸ್ ತಲುಪುತ್ತದೆ. ಈ ವ್ಯವಸ್ಥೆ ಪರಿಣಾಮಕಾರಿಯಾಗಿದೆಯಾದರೂ ಚಲಿಸುತ್ತಿರುವ ವಾಹನಗಳ ನಂಬರ್ ಬರೆದುಕೊಳ್ಳುವ ವೇಳೆಯಲ್ಲಿ ಸಿಬ್ಬಂದಿಯ ಕಣ್ತಪ್ಪಿನಿಂದ ಒಂದು ನಂಬರ್ ವ್ಯತ್ಯಾಸವಾದರೂ ಅದು ಬೇರೊಬ್ಬ ವಾಹನ ಮಾಲೀಕರಿಗೆ ಹೋಗುತ್ತದೆ. ಇಂಥ ಸಂದರ್ಭಗಳಲ್ಲಿ ತಾವು ಮಾಡದ ತಪ್ಪಿಗೆ ನೋಟಿಸ್ ಬಂದರೆ ವಾಹನ ಮಾಲೀಕರು ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಸಂಚಾರ ವಿಭಾಗದ ಬೆಂಗಳೂರು ಜಂಟಿ ಆಯುಕ್ತ ರವಿಕಾಂತೇಗೌಡ ಅವರು 'ವಿಜಯ ಕರ್ನಾಟಕ' ಜತೆ ವಿವರ ನೀಡಿದ್ದಾರೆ.
''ಇಂಥ ಪ್ರಕರಣ ವಿರಳ. ಸಾಮಾನ್ಯವಾಗಿ ನಂಬರ್ ವ್ಯತ್ಯಾಸವಾದರೆ ಆ ನಂಬರಿನ ವಾಹನಗಳೇ ಇರುವುದಿಲ್ಲ ಅಥವಾ ದ್ವಿಚಕ್ರ ವಾಹನದ ಬದಲಿಗೆ ಕಾರು, ಆಟೋಗಳ ನಂಬರ್ ಆಗಿರಬಹುದು. ಇಂಥ ಸಂದರ್ಭದಲ್ಲಿ ವಾಹನ ಸವಾರರು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಬಹುದು. ಆದರೆ ಈಗ ಜಾರಿಯಲ್ಲಿರುವ ವ್ಯವಸ್ಥೆಯಲ್ಲಿ ಇಂಥ ಲೋಪಕ್ಕೆ ಆಸ್ಪದ ಇಲ್ಲ. ಸೂಕ್ತ ಸಾಕ್ಷ್ಯ ಇಲ್ಲದೆ ದಂಡದ ನೋಟಿಸ್ ಹೋಗುವುದಿಲ್ಲ. ಸಿಗ್ನಲ್ಗಳಲ್ಲಿರುವ ಸಿಸಿ ಕ್ಯಾಮೆರಾಗಳಲ್ಲಿ ಈ ಬಗ್ಗೆ ಸಾಕ್ಷ್ಯ ಇರುತ್ತದೆ. ಅಲ್ಲದೆ ಸಂಚಾರ ವಿಭಾಗದ ಸಿಬ್ಬಂದಿ ಕೂಡ ಫೋಟೊ ತೆಗೆದಿರುತ್ತಾರೆ. ಫೋಟೊ ಆಧಾರದಲ್ಲಿ ನೋಟಿಸ್ ಹೋಗುತ್ತದೆ,'' ಎಂದು ರವಿಕಾಂತೇ ಗೌಡ ಹೇಳಿದರು.