ಆ್ಯಪ್ನಗರ

ಮಂತ್ರಿ ಸ್ಥಾನ ಸಿಕ್ಕದ್ದಕ್ಕೆ ಪಕ್ಷಕ್ಕೆ ತೊಂದರೆ ಕೊಟ್ಟರೆ ಜೋಕೆ: ದಿನೇಶ್‌ ಗುಂಡೂರಾವ್‌

ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದು ಪಕ್ಷಕ್ಕೆ ತೊಂದರೆ ಕೊಟ್ಟರೆ ಎಂದಿಗೂ ಸಹಿಸುವುದಿಲ್ಲ. ಪಕ್ಷಕ್ಕೆ ಕೆಡುಕು ಮಾಡುವವರಿಗೆ ಎಂದಿಗೂ ನಮ್ಮ ಬೆಂಬಲವೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಎಚ್ಚರಿಸಿದ್ದಾರೆ.

Vijaya Karnataka Web 11 Jul 2018, 5:06 pm
ಬೆಂಗಳೂರು: ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದು ಪಕ್ಷಕ್ಕೆ ತೊಂದರೆ ಕೊಟ್ಟರೆ ಎಂದಿಗೂ ಸಹಿಸುವುದಿಲ್ಲ. ಪಕ್ಷಕ್ಕೆ ಕೆಡುಕು ಮಾಡುವವರಿಗೆ ಎಂದಿಗೂ ನಮ್ಮ ಬೆಂಬಲವೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಎಚ್ಚರಿಸಿದ್ದಾರೆ.
Vijaya Karnataka Web dinesh


ಅರಮನೆ ಮೈದಾನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಮಂಗಳವಾರ ಅವರು ಮಾತನಾಡಿದರು.

ಉಪ ಮುಖ್ಯಮಂತ್ರಿ ಹಾಗೂ ನಿರ್ಗಮಿತ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಪಕ್ಷದ ಬಾವುಟ ಹಸ್ತಾಂತರಿಸುವ ಮೂಲಕ ದಿನೇಶ್‌ ಗುಂಡೂರಾವ್‌ ಹಾಗೂ ಈಶ್ವರ್‌ ಖಂಡ್ರೆ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಅಧಿಕಾರ ಹಸ್ತಾಂತರಿಸಿದರು.

ನಂತರ ಮಾತನಾಡಿದ ದಿನೇಶ್‌ ಗುಂಡೂರಾವ್‌, ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕಕ್ಕಾಗಿ ಭಾರೀ ಲಾಬಿ ನಡೆಯುತ್ತಿದೆ. ಪಕ್ಷ ನಿಷ್ಠೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದರು.

ಯಾರೋ ನಾಯಕರ ಹಿಂದೆ ಓಡಾಡಿ, ಅವರ ಕೆಲಸ ಕಾರ್ಯಗಳನ್ನು ಮಾಡಿ ಪಕ್ಷದಲ್ಲಿ ಹುದ್ದೆಗಿಟ್ಟಿಸಿಕೊಳ್ಳುವವರಿಗೆ ಇನ್ನು ಮುಂದೆ ಪಕ್ಷದಲ್ಲಿ ಅವಕಾಶ ಇರುವುದಿಲ್ಲ. ನಿಷ್ಠವಂತರನ್ನು ಗುರುತಿಸಿ ಪಕ್ಷದಲ್ಲಿ ಸ್ಥಾನ,ಮಾನ ನೀಡುತ್ತೇನೆ. ಪಕ್ಷವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಬೇಕಿದೆ. ಲೋಕಸಭೆ ಚುನಾವಣೇಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ. ದೇಶದಲ್ಲಿ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ಸೋತಿದೆ. ಕಾಂಗ್ರೆಸ್ ಭವಿಷ್ಯ ಇದೆ ಎಂದು ಅವರು ಹೇಳಿದರು.

37 ಸ್ಥಾನ ಪಡೆದ ಜೆಡಿಎಸ್ ಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದೇವೆ. ಹೈಕಮಾಂಡ್ ಯಾಕೆ ಮೈತ್ರಿ ಸರ್ಕಾರ ರಚನೆಗೆ ಆದೇಶ ನೀಡಿದೆ ಅನ್ನೋದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಮೈತ್ರಿ ಧರ್ಮವನ್ನ ಸರ್ಕಾರ ಕಾಪಾಡುವಲ್ಲಿಯೂ ಕೆಲಸ ಮಾಡಬೇಕು. ಸಮಾಜಿಕ ನ್ಯಾಯದ ಪರ ಈ ಸರ್ಕಾರ ನಿಲ್ಲಬೇಕಿದೆ ಎಂದು ಅವರು ಹೇಳಿದರು.

ಕಲ್ಬುರ್ಗಿ ಹತ್ಯೆ, ಗೌರೀ ಲಂಕೇಶ ಹತ್ಯೆ ಆಯ್ತು ,ಯಾಕಾಯ್ತು ಅನ್ನೋದು ಎಲ್ಲರಿಗೂ ಗೊತ್ತಿದೆ. ವಿರುದ್ಧ ಮಾತಾನಾಡಿದವರನ್ನು ಹತ್ತಿಕ್ಕುವ ಹಂತಕ್ಕೆ ಬಿಜೆಪಿ ತಲುಪಿದೆ. ಕೋಮು ಸೌಹಾರ್ಧತೆಗೆ ದೇಶದಲ್ಲಿ ಧಕ್ಕೆ ಉಂಟಾಗಿದೆ. ಇಂತಹ ದೊಡ್ಡ ಸವಾಲನ್ನು ನಾವು ಎದುರಿಸಬೇಕಿದೆ ಎಂದರು.

ನಾಯಕರಿಗೆ ಹೊಗಳಿಕೆ

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈಗಲೂ ಜನಪ್ರಿಯ ನಾಯಕರೇ. ನೀವು ಸೋತಿರಬಹುದು, ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರದೇ ಇರಬಹುದು. ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಸ್ವಲ್ಪ ದಿನಗಳು ಕಳೆದರೆ, ಜನರಿಗೆ ನೀವು ನೀಡಿದ ಕೆಲಸಗಳು ನೆನಪಿಗೆ ಬರುವುದು ಎಂದು ಹೇಳುವ ಮೂಲಕ ವೇದಿಕೆಯಿಂದಲೇ ಸಿದ್ದರಾಮಯ್ಯ ಅವರನ್ನು ಹೊಗಳಿದರು.

ಪರಮೇಶ್ಚರ್ ನನ್ನನ್ನ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದರು. ಇದೀಗ ಅವರೇ ನನಗೆ ಅಧ್ಯಕ್ಷ ಸ್ಥಾನ ಹಸ್ತಾಂತರಿಸಿದ್ದಾರೆ. ಇಂತಹ ಕ್ಷಣದಲ್ಲಿ ತಂದೆ ಆರ್ ಗುಂಡೂರಾವ್ ಅವರನ್ನು ಸ್ಮರಿಸಿದ ಅವರು, ಪತ್ನಿ ತಬು ಬೆಂಬಲವನ್ನೂ ಕೊಂಡಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ