ಆ್ಯಪ್ನಗರ

ಬೇಜವಾಬ್ದಾರಿ ಮಾತು ಆಡದಂತೆ ನಿಮ್ಮವರಿಗೆ ಹೇಳಿ: ರಾಹುಲ್ ಗಾಂಧಿಗೆ ದೇವೇಗೌಡ

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಒತ್ತಾಯದ ಮೇರೆಗೆ ಈ ಸರಕಾರ ರಚನೆ ಆಗಿದೆ. ನಾನು ಅವತ್ತೇ ಕಾಂಗ್ರೆಸ್ ನಾಯಕರಿಗೆ ಸರಕಾರ ರಚನೆ ಬೇಡ ಅಂತ ಹೇಳಿದ್ದೆ. ಆದರೆ ಗುಲಾಂ ನಬಿ ಅಜಾದ್ ಕೈ ಹಿಡಿದು ಕುಮಾರಸ್ವಾಮಿ ಸಿಎಂ ಆಗಬೇಕು ಅಂತ ಹೇಳಿದ್ರು ಎಂದು ಮೈತ್ರಿ ಸರಕಾರಕ್ಕೆ ಕಾಂಗ್ರೆಸ್ಸೇ ಒತ್ತಾಯ ಹೇರಿತ್ತೆಂಬುದನ್ನು ದೇವೇಗೌಡರು ನೆನಪಿಸಿದ್ದಾರೆ.

Vijaya Karnataka Web 20 Jun 2019, 1:00 pm
ಬೆಂಗಳೂರು: ತಮ್ಮ ಪಕ್ಷದ ಮುಖಂಡರು ಅಥವಾ ಕಾಂಗ್ರೆಸ್-ಜೆಡಿಎಸ್ ಸರಕಾರದ ವಿರುದ್ಧ "ಬೇಜವಾಬ್ದಾರಿಯುತ" ಹೇಳಿಕೆಗಳನ್ನು ನೀಡದಂತೆ ಕರ್ನಾಟಕದ ಕಾಂಗ್ರೆಸ್ ಮುಖಂಡರಿಗೆ ಸೂಚಿಸುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಮಾಜಿ ಪ್ರಧಾನಿ, ಜೆಡಿಎಸ್ ನಾಯಕ ಹೆಚ್.ಡಿ.ದೇವೇಗೌಡರು ಕೇಳಿಕೊಂಡಿದ್ದಾರೆ.
Vijaya Karnataka Web H D Deve Gowda


ಇದರೊಂದಿಗೆ, ಲೋಕಸಭೆ ಚುನಾವಣೆಗಳಲ್ಲಿ ಎದುರಾದ ಹೀನಾಯ ಸೋಲಿನ ನಂತರ ರಾಜ್ಯದ ಕಾಂಗ್ರೆಸ್ - ಜೆಡಿಎಸ್ ಮೈತ್ರಿಕೂಟದಲ್ಲಿ ಎದ್ದ ಬಿರುಕು ಮತ್ತಷ್ಟು ಅಗಲವಾಗುತ್ತಿರುವ ಕುರಿತು ಸೂಚನೆಗಳು ದೊರೆತಿದೆ.

ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ದೇವೇಗೌಡರು, ಮೊನ್ನೆ ರಾಹುಲ್ ಭೇಟಿಯಾಗಿದ್ದೆ. ಆದರೆ ರಾಜಕೀಯದ ಬಗ್ಗೆ ಮಾತಾಡಿಲ್ಲ. ನಾಯಕರು ಬಹಿರಂಗ ಹೇಳಿಕೆ ಕೊಡದಂತೆ ಸೂಚನೆ ನೀಡಲು ರಾಹುಲ್‌ಗೆ ತಿಳಿಸಿದ್ದೇನೆ. ಪಕ್ಷದ ಬಗ್ಗೆ ಯಾರೂ ಮಾತಾಡದಂತೆ ಕ್ರಮ ವಹಿಸಲು ಹೇಳಿದ್ದೇನೆ. ಇದು ಬಿಟ್ಟು ಏನೂ ರಾಹುಲ್ ಜೊತೆ ಮಾತಾಡಿಲ್ಲ. ಬಹಿರಂಗವಾಗಿ ಮಾತಾಡಿದ್ರೆ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತೆ. ಹೀಗಾಗಿ ಅದನ್ನ ಕಂಟ್ರೋಲ್ ಮಾಡಲು ಹೇಳಿದ್ದೇನೆ ಎಂದು ವಿವರಿಸಿದರು.

ಜೆಡಿಎಸ್ ಜತೆಗಿನ ಮೈತ್ರಿ ತಮ್ಮ ಪಕ್ಷಕ್ಕೆ ದೊಡ್ಡ ಸಮಸ್ಯೆಯಾಗಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಿದ ರಾಜ್ಯದ ಮಾಜಿ ಮುಖ್ಯಮಂತ್ರಿ ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿರುವ ಕುರಿತು ಕೇಳಲಾದ ಪ್ರಶ್ನೆಗೆ ಮಾಜಿ ಪ್ರಧಾನಿ ವಿವರಣೆ ನೀಡಿದರು. "ಮೈತ್ರಿ ಸರಕಾರ ನಡೆಸಿದ್ರೆ ಕಾಂಗ್ರೆಸ್‌ಗೆ ಡ್ಯಾಮೇಜ್ ಆಗುತ್ತೆ ಅಂತ ಕೆಲವು ನಾಯಕರು ಹೇಳಿದ್ದಾರೆ. ಈ ಬಗ್ಗೆ ನಾನೇನೂ ಹೇಳೊಲ್ಲ. ಮೈತ್ರಿ ಸರಕಾರ ನಾನು ಮಾಡಿದ್ದಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಒತ್ತಾಯದ ಮೇರೆಗೆ ಈ ಸರಕಾರ ರಚನೆ ಆಗಿದೆ. ನಾನು ಅವತ್ತೇ ಕಾಂಗ್ರೆಸ್ ನಾಯಕರಿಗೆ ಸರಕಾರ ರಚನೆ ಬೇಡ ಅಂತ ಹೇಳಿದ್ದೆ. ಆದರೆ ಗುಲಾಂ ನಬಿ ಅಜಾದ್ ಕೈ ಹಿಡಿದು ಕುಮಾರಸ್ವಾಮಿ ಸಿಎಂ ಆಗಬೇಕು ಅಂತ ಹೇಳಿದ್ರು. ನಾನು ಆಗೊಲ್ಲ ಅಂತ ಹೇಳಿ ಬಂದೆ. ಆದ್ರೆ ಬೆಳಗ್ಗೆ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡಬೇಕು ಅಂತ ಹೇಳಿದ್ರು. ಅಲ್ಲಿಂದ ಇಲ್ಲಿಯವರೆಗೂ ಸರ್ಕಾರ ಬಂದಿದೆ. ನಮ್ಮಿಂದ ಸರಕಾರಕ್ಕೆ ಡ್ಯಾಮೇಜ್ ಆಗೋ ರೀತಿ ನಾನು, ನಮ್ಮ ಪಕ್ಷದವರು ಮಾತಾಡೊಲ್ಲ. ನಮ್ಮಿಂದ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲದಂತೆ ನಡೆದುಕೊಳ್ತೀವಿ" ಎಂದು ದೇವೇಗೌಡ ನುಡಿದರು.

ಮುಂದಿನ ಚುನಾವಣೆಗಳಿಗೆ ಪಕ್ಷ ರೆಡಿ ಮಾಡೋ ಕೆಲಸ ನಾನು ಮಾಡ್ತೀನಿ ಅಷ್ಟೆ. ಇನ್ಯಾವುದೇ ವಿಷಯಕ್ಕೆ ನಾನು ಪ್ರತಿಕ್ರಿಯೆ ನೀಡೊಲ್ಲ ಎಂದು ಗೌಡರು ಹೇಳಿದರು.

ವಿಶ್ವನಾಥ್ ಮನವೊಲಿಕೆಗೆ ಮತ್ತೆ ಪ್ರಯತ್ನ
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರು ತಮ್ಮ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಹಿಂಪಡೆಯುವಂತೆ ಮತ್ತೊಮ್ಮೆ ಮನವೊಲಿಸಲಾಗುತ್ತದೆ ಎಂದು ದೇವೇಗೌಡರು ಹೇಳಿದರು.

ಪಕ್ಷದ ಅಧ್ಯಕ್ಷರು ಪಕ್ಷ ಬಿಡಲ್ಲ, ಆದ್ರೆ ಅಧ್ಯಕ್ಷ ಸ್ಥಾನದಲ್ಲಿ ಇರಲ್ಲ ಎಂದಿದ್ದಾರೆ. ಹಿಂದುಳಿದ ವರ್ಗದ ಮುಖಂಡರ ಸಭೆ ಇಂದು ಮಾಡ್ತೀನಿ. ಮತ್ತೊಮ್ಮ ಹಿಂದುಳಿದ ವರ್ಗದ ನಾಯಕರು ಸೇರಿ ವಿಶ್ವನಾಥ್ ಮನವೊಲಿಕೆಗೆ ಪ್ರಯತ್ನ ಮಾಡ್ತೀವಿ ಎಂದು ದೇವೇಗೌಡರು ತಿಳಿಸಿದ್ದಾರೆ.

ಒಂದು ಸ್ಥಾನ ಹೋಯ್ತು ಅಂತ ನಾನು ಚಿಂತೆ ಮಾಡೊಲ್ಲ. ಸಿದ್ದರಾಮಯ್ಯ ಸಲಹೆ ‌ಮೇರೆಗೆ ಒಂದು ಸ್ಥಾನ ಕಾಂಗ್ರೆಸ್‌ನವರಿಗೇ ನೀಡಿದ್ದೇವೆ. ಒಳ್ಳೆ ಕೆಲಸ ಮಾಡಿದ್ರೆ ಮಾಧ್ಯಮಗಳು ಏನೂ ಹೇಳುತ್ತಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ