ಆ್ಯಪ್ನಗರ

ಪಕ್ಷ ಸೇರಿದರೂ ಶಂಕರ್‌ಗೆ ಸಿಕ್ಕಿಲ್ಲ ಟಿಕೆಟ್‌; ಸಿಎಂ ನಿವಾಸದಲ್ಲಿ ಕುಟುಂಬದೊಂದಿಗೆ ಠಿಕಾಣಿ

ಅನರ್ಹಗೊಂಡರೂ ಸುಪ್ರೀಂ ಕೋರ್ಟ್‌ನಿಂದ ಚುನಾವಣೆ ಸ್ಪರ್ಧೆಗೆ ಅವಕಾಶ ಪಡೆದುಕೊಂಡ ರಾಣೆಬೆನ್ನೂರು ಅನರ್ಹ ಶಾಸಕ ಆರ್.ಶಂಕರ್‌ಗೆ ನಿರಾಸೆಯಾಗಿದೆ. ಬಿಜೆಪಿ ಸೇರ್ಪಡೆಗೊಂಡರೂ ಶಂಕರ್ ಅವರಿಗೆ ಇನ್ನೂ ಟಿಕೆಟ್ ಸಿಕ್ಕಿಲ್ಲ

Vijaya Karnataka 14 Nov 2019, 11:07 pm
ಬೆಂಗಳೂರು: ಬಿಜೆಪಿ ಸೇರಿದರೂ ರಾಣೆಬೆನ್ನೂರು ಕ್ಷೇತ್ರದ ಅನರ್ಹ ಶಾಸಕ ಆರ್‌.ಶಂಕರ್‌ಗೆ ಉಪ ಚುನಾವಣೆ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್‌ ಸಿಗದೇ ನಿರಾಸೆಗೆ ಒಳಗಾಗಿದ್ದಾರೆ. ಟಿಕೆಟ್‌ ಗಿಟ್ಟಿಸಲು ಗುರುವಾರ ಮಧ್ಯಾಹ್ನದಿಂದ ಹರಸಾಹಸ ಪಡುತ್ತಿರುವ ಶಂಕರ್‌ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸಕ್ಕೆ ಪತ್ನಿ, ಪುತ್ರನ ಸಮೇತ ತೆರಳಿ ಟಿಕೆಟ್‌ ನೀಡುವಂತೆ ದುಂಬಾಲು ಬಿದ್ದರು.
Vijaya Karnataka Web disqualified mla r shankar dint get bjp ticket
ಪಕ್ಷ ಸೇರಿದರೂ ಶಂಕರ್‌ಗೆ ಸಿಕ್ಕಿಲ್ಲ ಟಿಕೆಟ್‌; ಸಿಎಂ ನಿವಾಸದಲ್ಲಿ ಕುಟುಂಬದೊಂದಿಗೆ ಠಿಕಾಣಿ


ಜತೆಗೆ ತಮಗೆ ಆತ್ಮೀಯರಾ ಗಿರುವ ಬಿಜೆಪಿ ನಾಯಕರಲ್ಲಿ ಟಿಕೆಟ್‌ಗೆ ನೆರವಾಗುವಂತೆ ಕೋರಿದರು. ಗಂಟೆಗೂ ಹೆಚ್ಚು ಕಾಲ ಸಿಎಂ ನಿವಾಸದಲ್ಲೇ ಇದ್ದ ಶಂಕರ್‌ಗೆ ಸಿಎಂ ಯಡಿಯೂರಪ್ಪ ಯಾವ ಭರವಸೆ ನೀಡಲಿಲ್ಲಎನ್ನಲಾಗಿದೆ. ಬದಲಿಗೆ ಅಭ್ಯರ್ಥಿ ಆಯ್ಕೆಗೆ ಸಚಿವ ಜಗದೀಶ್‌ ಶೆಟ್ಟರ್‌ ನೇತೃತ್ವದಲ್ಲಿ ಮೂವರ ಸಮಿತಿ ರಚಿಸಿದ್ದಾರೆ. ಆ ಸಮಿತಿಯಲ್ಲಿ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಸಿ.ಎಂ.ಉದಾಸಿ ಇದ್ದಾರೆ. ಈ ಸಮಿತಿಗೆ ಶುಕ್ರವಾರವೇ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಸಮಿತಿ ಸಲ್ಲಿಸುವ ವರದಿ ಆಧಾರದ ಮೇಲೆ ಟಿಕೆಟ್‌ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.

ಈ ಮಧ್ಯೆ ತಾವು ಸಹ ಟಿಕೆಟ್‌ ಆಕಾಂಕ್ಷಿಯೆಂದು ಹೇಳಿಕೊಂಡಿರುವ ಮಾಜಿ ಶಾಸಕ ಶಿವರಾಜ್‌ ಸಜ್ಜನ್‌ ಸಿಎಂ ನಿವಾಸಕ್ಕೆ ಆಗಮಿಸಿ ಯಡಿಯೂರಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿದರು. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಪುತ್ರ ಕಾಂತೇಶ್‌ ಕೂಡ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಈ ಮೂವರೊಳಗೆ ಯಾರಿಗೆ ಟಿಕೆಟ್‌ ಸಿಗುತ್ತದೆ ಎಂಬುದು ನಿಗೂಢವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ