ಆ್ಯಪ್ನಗರ

ಎಂಎಲ್‌ಸಿ ಮಾಡಿ ಮಂತ್ರಿಗಿರಿ ; ಬಿಎಸ್‌ವೈ ಭರವಸೆಗೆ ತಣ್ಣಗಾದ ಶಂಕರ್

ಬಿಜೆಪಿಗೆ ಸೇರ್ಪಡೆಗೊಂಡರೂ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಅನರ್ಹ ಶಾಸಕ ಆರ್ ಶಂಕರ್ ಸದ್ಯ ತಣ್ಣಗಾಗಿದ್ದಾರೆ. ಎಂಎಲ್‌ಸಿ ಮಾಡಿ ಸಚಿವ ಸ್ಥಾನ ನೀಡುವ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಪಕ್ಷದ ಸೂಚಿಸಿದ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

Vijaya Karnataka Web 15 Nov 2019, 10:35 am
ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪು ಬಳಿಕ ಬಿಜೆಪಿಗೆ ಸೇರ್ಪಡೆಯಾದರೂ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಅನರ್ಹ ಶಾಸಕ ಆರ್.ಶಂಕರ್ ಸದ್ಯ ತಣ್ಣಗಾಗಿದ್ದಾರೆ. ಟಿಕೆಟ್ ನೀಡಿ ಎಂದು ಬಿಎಸ್‌ವೈ ನಿವಾಸದಲ್ಲಿ ಕುಟುಂಬದ ಸದಸ್ಯರು ಹಾಗೂ ಬೆಂಬಲಿಗರೊಂದಿಗೆ ಬೀಡುಬಿಟ್ಟಿದ್ದ ಶಂಕರ್‌ಗೆ ಎಂಎಲ್‌ಸಿ ಮಾಡಿ ಸಚಿವ ಸ್ಥಾನ ನೀಡುವ ಭರವಸೆಯನ್ನು ಸಿಎಂ ಯಡಿಯೂರಪ್ಪ ನೀಡಿದ ಹಿನ್ನೆಲೆಯಲ್ಲಿ ಸುಮ್ಮನಾಗಿದ್ದಾರೆ.
Vijaya Karnataka Web r shankar


ಟಿಕೆಟ್ ಸಿಗದಿರುವುದರಿಂದ ಆಕ್ರೋಶಗೊಂಡಿದ್ದ ಆರ್. ಶಂಕರ್ ಬೆಂಬಲಿಗರು ಸಿಎಂ ಬಿಎಸ್‌ವೈ ಧವಳಗಿರಿ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಬಂದಿದ್ದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿಗೆ ಮುತ್ತಿಗೆ ಹಾಕಿದ ಶಂಕರ್ ಬೆಂಬಲಿಗರು ಟಿಕೆಟ್ ಕೊಡಿಸುವಂತೆ ಒತ್ತಾಯಿಸಿದರು. ಇದಾದ ಬಳಿಕ ಸಿಎಂ ಭೇಟಿ ಮಾಡಿ ಹೊರಬಂದ ಆರ್. ಶಂಕರ್ ಉಲ್ಟಾ ಹೊಡೆದಿದ್ದು ಎಂಎಲ್‌ಸಿ ಮಾಡಿ ಸಚಿವ ಸ್ಥಾನ ನೀಡುವ ಕುರಿತಾಗಿ ಬಿಎಸ್‌ವೈ ಭರವಸೆ ನೀಡಿದ್ದಾರೆ ಎಂದಿದ್ದಾರೆ.

ಸಿಎಂ ನಿವಾಸದ ಮುಂದೆ ಮಾತನಾಡಿದ ಶಂಕರ್, ಪಕ್ಷದ ತೀರ್ಮಾನ ಕೈಗೊಂಡಿದೆ, ಪಕ್ಷದ ತೀರ್ಮಾನದಂತೆ ಕೆಲಸ ಮಾಡಬೇಕಾಗುತ್ತದೆ. ಹಿಂದೆ ಎರಡು ಮೂರು ಬಾರಿ ತ್ಯಾಗ ಮಾಡಿದ್ದೇನೆ. ಈಗ ತ್ಯಾಗ ಮಾಡೋದರಲ್ಲಿ ದೊಡ್ಡದೇನಲ್ಲ ಎಂದಿದ್ದಾರೆ.

ಶಂಕರ್ ವಿರುದ್ಧನೇ ತಿರುಗಿಬಿದ್ದ ಬೆಂಬಲಿಗರು!

ಅನರ್ಹ ಶಾಸಕ ಆರ್. ಶಂಕರ್ ಅವರಿಗೆ ರಾಣೆಬೆನ್ನೂರು ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸದ ಮುಂದೆ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಟಿಕೆಟ್‌ ನೀಡಲೇಬೇಕು ಎಂದು ಸಿಎಂಗೆ ದುಂಬಾಲು ಬಿದ್ದು ಬೆಂಬಲಿಗರ ಮೂಲಕ ಒತ್ತಡ ಹೇರುತ್ತಿದ್ದ ಆರ್. ಶಂಕರ್ ಇದೀಗ ಉಲ್ಟಾ ಹೊಡೆದಿದ್ದಾರೆ.

ಬಿಎಸ್‌ವೈ ನೀಡಿರುವ ಭರವಸೆಯಿಂದ ತಮ್ಮ ನಿಲುವನ್ನು ಬದಲಾಯಿಸಿದ್ದು ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸಿಎಂ ಜೊತೆಗೆ ಮಾತುಕತೆಗೆ ಹೋಗುವಾಗ ಒಂದು ಮಾತಾಡಿ, ಇವಾಗ ಹೊರಗೆ ಬಂದು ಇನ್ನೊಂದು ಮಾತನಾಡುತ್ತಾರೆ ಎಂದು ಗರಂ ಆಗಿದ್ದಾರೆ. ಆಕ್ರೋಶಗೊಂಡು ಮುತ್ತಿಗೆ ಹಾಕದ ಕಾರ್ಯಕರ್ತರನ್ನು ಶಂಕರ್ ಸಮಾಧಾನಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ