ಆ್ಯಪ್ನಗರ

ಶಾಸಕರ ಅನರ್ಹತೆ: ಕಾನೂನು ಹೋರಾಟದ ಹಾದಿ

ಪಕ್ಷಾಂತರ ನಿಷೇಧ ಕಾಯಿದೆಯಡಿ ಅನರ್ಹಗೊಂಡಿರುವ ಶಾಸಕರು ಈಗ ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ. ಇವರ ಮುಂದೆ ಇರುವ ಆಯ್ಕೆಗಳೇನು?

Vijaya Karnataka 25 Jul 2019, 10:10 pm
ಬೆಂಗಳೂರು : ಪಕ್ಷಾಂತರ ನಿಷೇಧ ಕಾಯಿದೆ ಅಡಿ ಅನರ್ಹಗೊಂಡಿರುವ ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಠಳ್ಳಿ ಮತ್ತು ಆರ್‌.ಶಂಕರ್‌ ಕಾನೂನು ಹೋರಾಟ ನಡೆಸಲು ಅವರ ಮುಂದಿರುವುದು ಎರಡೇ ದಾರಿ.
Vijaya Karnataka Web ವಿಧಾನಸೌಧ
ವಿಧಾನಸೌಧ


ಒಂದು ಸ್ಪೀಕರ್‌ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಅರ್ಜಿ ಹೂಡುವುದು. ಇಲ್ಲವೇ ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಇವರು ಸಲ್ಲಿಸಿರುವ ಅರ್ಜಿಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಅಲ್ಲಿಯೇ ಮಧ್ಯಂತರ ಅರ್ಜಿ ಸಲ್ಲಿಸಿ ಸ್ಪೀಕರ್‌ ಕ್ರಮ ಪ್ರಶ್ನಿಸಬಹುದು.

ಅನರ್ಹಗೊಂಡಿರುವವರು ಮಧ್ಯಂತರ ಅರ್ಜಿ ಸಲ್ಲಿಸಿ ಸ್ಪೀಕರ್‌ ಆದೇಶ ರದ್ದು ಮಾಡುವಂತೆ ಕೋರಲು ಅವಕಾಶವಿದೆ. ಕಾನೂನು ಪಂಡಿತರ ಪ್ರಕಾರ ಶಾಸಕರ ಅನರ್ಹತೆ ಪ್ರಕರಣ ಸುಪ್ರಿಂಕೋರ್ಟ್‌ಗೆ ಹೋಗುವ ಸಾಧ್ಯತೆಗಳು ಹೆಚ್ಚಿವೆ. ಅವರು ಹೇಳುವಂತೆ ಸ್ಪೀಕರ್‌ ನಡೆ ಪಕ್ಷಪಾತವಾಗಿದೆ ಎಂಬ ವಾದವನ್ನು ಮುಂದಿಟ್ಟುಕೊಂಡು ಅನರ್ಹ ಶಾಸಕರು ತಮ್ಮ ಹಕ್ಕು ಮಂಡಿಸಬಹುದು.

ಅಲ್ಲದೆ, ಶಾಸಕರ ಅನರ್ಹತೆಗೆ ನೀಡಿರುವ ದೂರು, ಶಾಸಕರ ರಾಜೀನಾಮೆ ಮತ್ತು ಆನಂತರದ ಬೆಳವಣಿಗೆಗಳು, ಬದಲಾದ ರಾಜಕೀಯ ಪಕ್ಷಗಳ ನಡೆ ಇವುಗಳನ್ನು ಸರಿಯಾಗಿ ಗಮನಕ್ಕೆ ತೆಗೆದುಕೊಂಡು ಸ್ಪೀಕರ್‌ ನಿರ್ಧಾರ ಕೈಗೊಂಡಿಲ್ಲ ಎಂಬ ಮಾತೂ ನ್ಯಾಯವಾದಿಗಳಿಂದ ಕೇಳಿ ಬರುತ್ತಿದೆ.

ಪಕ್ಷಾಂತರ ನಿಷೇಧ ಕಾಯಿದೆ ಅಡಿ ಅನರ್ಹಗೊಂಡಿರುವ ಮೂವರು ಶಾಸಕರು ನೇರ ಸುಪ್ರೀಂಕೋರ್ಟ್‌ ಮೊರೆ ಹೋಗಬಹುದು. ಏಕೆಂದರೆ ಅವರ ಅರ್ಜಿಗಳು ಈಗಾಗಲೇ ಅಲ್ಲಿ ಬಾಕಿ ಇವೆ. ಸ್ಪೀಕರ್‌ 15ನೇ ವಿಧಾನಸಭೆಯ ಅವಧಿಯವರೆಗೆ ಅನರ್ಹಗೊಳಿಸಲಾಗಿದೆ ಎಂದು ಪ್ರಕಟಿಸಿರುವುದು ಸರಿಯಾದ ಕ್ರಮವಲ್ಲ
- ಅಶೋಕ್‌ ಹಾರನಹಳ್ಳಿ, ಮಾಜಿ ಅಡ್ವೊಕೇಟ್‌ ಜನರಲ್‌

ಅನರ್ಹಗೊಂಡಿರುವ ಶಾಸಕರು ಹೈಕೋರ್ಟ್‌, ಇಲ್ಲವೇ ಸುಪ್ರೀಂಕೋರ್ಟ್‌ ಮೊರೆ ಹೋಗಲು ಅವಕಾಶವಿದೆ. ಆದರೆ ವಿಷಯ ಸುಪ್ರೀಂಕೋರ್ಟ್‌ ಮುಂದಿರುವುದರಿಂದ ಅಲ್ಲಿಯೇ ಹೋಗುವುದು ಒಳ್ಳೆಯದು
- ಎ.ಎಸ್‌.ಪೊನ್ನಣ್ಣ, ಹಿರಿಯ ನ್ಯಾಯವಾದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ