ಬೆಂಗಳೂರು : ಅನರ್ಹತೆಯ ಶಿಕ್ಷೆಗೊಳಗಾಗಿ ಅತಂತ್ರರಾಗಿರುವ ರೆಬಲ್ಗಳು ತಕ್ಷಣವೇ ಬೈ ಎಲೆಕ್ಷನ್ ಎದುರಾದರೆ ಪತ್ನಿ, ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರನ್ನು ಕಣಕ್ಕಳಿಸಲು ಯೋಚಿಸುತ್ತಿದ್ದಾರೆ.
ನಿಕಟಪೂರ್ವ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ನೀಡಿದ್ದ ತೀರ್ಪಿನಿಂದ 17 ಬಂಡಾಯ ಶಾಸಕರು ಅನರ್ಹಗೊಂಡಿದ್ದಾರೆ. ಈ ಆದೇಶ ಪ್ರಶ್ನಿಸಿರುವ ಅನರ್ಹರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ವಿಚಾರಣೆ ಬಾಕಿಯಿದೆ. ಸ್ಪೀಕರ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದರೆ ಬಂಡಾಯಗಾರರ ಭವಿಷ್ಯಕ್ಕೆ ಸಂಚಕಾರ ಬರುವುದು ನಿಶ್ಚಿತ. ಹಾಗಾಗಿ ಕುಟುಂಬ ಸದಸ್ಯರನ್ನೇ ಮುಂದಿಟ್ಟುಕೊಂಡು ಚುನಾವಣೆ ಸಿದ್ಧತೆ ನಡೆಸಲು ಅನರ್ಹ ಶಾಸಕರು ಮುಂದಾಗಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿರೇಕೆರೂರು ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿ.ಸಿ.ಪಾಟೀಲ್ ಅವರೂ ಅನರ್ಹತೆಯ ಅಸ್ತ್ರಕ್ಕೆ ಗುರಿಯಾಗಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭಾನುವಾರ ಭೇಟಿಯಾಗಿದ್ದ ಪಾಟೀಲ್ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚಿಸಿದರು. ಸಂದರ್ಭ ಬಂದರೆ ಉಪ ಚುನಾವಣೆಯಲ್ಲಿ ತಮ್ಮ ಪುತ್ರಿಯನ್ನು ಸ್ಪರ್ಧೆಗಿಳಿಸುವ ಇಂಗಿತವನ್ನೂ ಈ ವೇಳೆ ವ್ಯಕ್ತಪಡಿಸಿದರು ಎನ್ನಲಾಗಿದೆ.
ಪಾಟೀಲ್ ಅವರೊಂದಿಗೆ ಪುತ್ರಿ ಸೃಷ್ಟಿ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು. ಸಿಎಂ ಭೇಟಿ ಬಳಿಕ ಸುದ್ದಿಗಾರರಿಗೆ ಮುಖಾಮುಖಿಯಾದ ಬಿ.ಸಿ.ಪಾಟೀಲ್, ಮಗಳು ಸೃಷ್ಟಿ ಉಪ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಸ್ಪಷ್ಟ ಪಡಿಸಿದರು. ಈ ನಡುವೆಯೂ ಕುಟುಂಬ ಸದಸ್ಯರನ್ನೇ ಉಪ ಚುನಾವಣೆ ಅಖಾಡಕ್ಕೆ ಇಳಿಸುವ ಆಯ್ಕೆಯನ್ನು ಅನರ್ಹರು ಮುಕ್ತವಾಗಿಟ್ಟುಕೊಂಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿವೆ.
ಸ್ಪೀಕರ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದರೆ ಅನರ್ಹರು ನಿಟ್ಟುಸಿರು ಬಿಡಬಹುದು. ಇಲ್ಲದೇ ಹೊದರೆ ಬಂಡಾಯಗಾರರ ಹಾದಿ ದುರ್ಗಮವಾಗುತ್ತದೆ. ಇದೇ ಕಾರಣದಿಂದ ಕೆಲವರು ರಾಜಕೀಯ ನಿವೃತ್ತಿಯ ಮಾತಾಡಿದ್ದಾರೆ. ಹಳ್ಳಿ ಹಕ್ಕಿ ಖ್ಯಾತಿಯ ಎಚ್.ವಿಶ್ವನಾಥ್ ರಾಜಕೀಯ ಸಾಕಾಗಿದೆಯೆಂದು ನೇರವಾಗಿಯೇ ಹೇಳಿದ್ದಾರೆ. ಅನರ್ಹಗೊಂಡಿರುವ ಬೆಂಗಳೂರಿನ ಕೆಲವರೂ ನಿವೃತ್ತಿಯ ರಾಗವೆಳೆದಿದ್ದಾರೆ. ಇದರ ಹಿಂದೆ ಕುಟುಂಬ ಸದಸ್ಯರನ್ನು ಮುನ್ನೆಲೆಗೆ ತರುವ ಕಾರ್ಯಸೂಚಿ ಇದ್ದಂತಿದೆ.
ಕೋರ್ಟ್ ಮೇಲೆ ಭಾರ
ತಮ್ಮ ರಾಜಕೀಯ ಭವಿಷ್ಯವೇನಾಗಬಹುದು ಎಂಬ ಸ್ಪಷ್ಟತೆ ಈ ಪೈಕಿ ಯಾರಿಗೂ ಇಲ್ಲ. ಎಲ್ಲರೂ ಸದ್ಯಕ್ಕೆ ಸುಪ್ರೀಂಕೋರ್ಟ್ ಮೇಲೆ ಭಾರ ಹಾಕಿ ಕುಳಿತಿದ್ದಾರೆ. ಇದರ ಮಧ್ಯೆ ಕ್ಷೇತ್ರದ ಸಂಪರ್ಕ ತಪ್ಪಬಾರದು ಎಂಬ ಕಾರಣದಿಂದ ಪತ್ನಿ ಮತ್ತು ಮಕ್ಕಳನ್ನು ರಾಜಕೀಯವಾಗಿ ಮುಂದೆ ತರುವ ಸಂದೇಶವನ್ನು ಜನರ ನಡುವೆ ರವಾನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ನಿಕಟಪೂರ್ವ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ನೀಡಿದ್ದ ತೀರ್ಪಿನಿಂದ 17 ಬಂಡಾಯ ಶಾಸಕರು ಅನರ್ಹಗೊಂಡಿದ್ದಾರೆ. ಈ ಆದೇಶ ಪ್ರಶ್ನಿಸಿರುವ ಅನರ್ಹರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ವಿಚಾರಣೆ ಬಾಕಿಯಿದೆ. ಸ್ಪೀಕರ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದರೆ ಬಂಡಾಯಗಾರರ ಭವಿಷ್ಯಕ್ಕೆ ಸಂಚಕಾರ ಬರುವುದು ನಿಶ್ಚಿತ. ಹಾಗಾಗಿ ಕುಟುಂಬ ಸದಸ್ಯರನ್ನೇ ಮುಂದಿಟ್ಟುಕೊಂಡು ಚುನಾವಣೆ ಸಿದ್ಧತೆ ನಡೆಸಲು ಅನರ್ಹ ಶಾಸಕರು ಮುಂದಾಗಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿರೇಕೆರೂರು ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿ.ಸಿ.ಪಾಟೀಲ್ ಅವರೂ ಅನರ್ಹತೆಯ ಅಸ್ತ್ರಕ್ಕೆ ಗುರಿಯಾಗಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭಾನುವಾರ ಭೇಟಿಯಾಗಿದ್ದ ಪಾಟೀಲ್ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚಿಸಿದರು. ಸಂದರ್ಭ ಬಂದರೆ ಉಪ ಚುನಾವಣೆಯಲ್ಲಿ ತಮ್ಮ ಪುತ್ರಿಯನ್ನು ಸ್ಪರ್ಧೆಗಿಳಿಸುವ ಇಂಗಿತವನ್ನೂ ಈ ವೇಳೆ ವ್ಯಕ್ತಪಡಿಸಿದರು ಎನ್ನಲಾಗಿದೆ.
ಪಾಟೀಲ್ ಅವರೊಂದಿಗೆ ಪುತ್ರಿ ಸೃಷ್ಟಿ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು. ಸಿಎಂ ಭೇಟಿ ಬಳಿಕ ಸುದ್ದಿಗಾರರಿಗೆ ಮುಖಾಮುಖಿಯಾದ ಬಿ.ಸಿ.ಪಾಟೀಲ್, ಮಗಳು ಸೃಷ್ಟಿ ಉಪ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಸ್ಪಷ್ಟ ಪಡಿಸಿದರು. ಈ ನಡುವೆಯೂ ಕುಟುಂಬ ಸದಸ್ಯರನ್ನೇ ಉಪ ಚುನಾವಣೆ ಅಖಾಡಕ್ಕೆ ಇಳಿಸುವ ಆಯ್ಕೆಯನ್ನು ಅನರ್ಹರು ಮುಕ್ತವಾಗಿಟ್ಟುಕೊಂಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿವೆ.
ಸ್ಪೀಕರ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದರೆ ಅನರ್ಹರು ನಿಟ್ಟುಸಿರು ಬಿಡಬಹುದು. ಇಲ್ಲದೇ ಹೊದರೆ ಬಂಡಾಯಗಾರರ ಹಾದಿ ದುರ್ಗಮವಾಗುತ್ತದೆ. ಇದೇ ಕಾರಣದಿಂದ ಕೆಲವರು ರಾಜಕೀಯ ನಿವೃತ್ತಿಯ ಮಾತಾಡಿದ್ದಾರೆ. ಹಳ್ಳಿ ಹಕ್ಕಿ ಖ್ಯಾತಿಯ ಎಚ್.ವಿಶ್ವನಾಥ್ ರಾಜಕೀಯ ಸಾಕಾಗಿದೆಯೆಂದು ನೇರವಾಗಿಯೇ ಹೇಳಿದ್ದಾರೆ. ಅನರ್ಹಗೊಂಡಿರುವ ಬೆಂಗಳೂರಿನ ಕೆಲವರೂ ನಿವೃತ್ತಿಯ ರಾಗವೆಳೆದಿದ್ದಾರೆ. ಇದರ ಹಿಂದೆ ಕುಟುಂಬ ಸದಸ್ಯರನ್ನು ಮುನ್ನೆಲೆಗೆ ತರುವ ಕಾರ್ಯಸೂಚಿ ಇದ್ದಂತಿದೆ.
ಕೋರ್ಟ್ ಮೇಲೆ ಭಾರ
ತಮ್ಮ ರಾಜಕೀಯ ಭವಿಷ್ಯವೇನಾಗಬಹುದು ಎಂಬ ಸ್ಪಷ್ಟತೆ ಈ ಪೈಕಿ ಯಾರಿಗೂ ಇಲ್ಲ. ಎಲ್ಲರೂ ಸದ್ಯಕ್ಕೆ ಸುಪ್ರೀಂಕೋರ್ಟ್ ಮೇಲೆ ಭಾರ ಹಾಕಿ ಕುಳಿತಿದ್ದಾರೆ. ಇದರ ಮಧ್ಯೆ ಕ್ಷೇತ್ರದ ಸಂಪರ್ಕ ತಪ್ಪಬಾರದು ಎಂಬ ಕಾರಣದಿಂದ ಪತ್ನಿ ಮತ್ತು ಮಕ್ಕಳನ್ನು ರಾಜಕೀಯವಾಗಿ ಮುಂದೆ ತರುವ ಸಂದೇಶವನ್ನು ಜನರ ನಡುವೆ ರವಾನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.