ಆ್ಯಪ್ನಗರ

ಕಾಂಗ್ರೆಸ್‌ ನಂತರ ಜೆಡಿಎಸ್‌ನಲ್ಲೂ ಶಾಸಕರ ಅತೃಪ್ತಿ ಜೋರು

ಅಧಿವೇಶನದ ನೆಪದಲ್ಲಿ ಅಧಿಕಾರ ಹಂಚದೆ ಮುಂದೂಡುತ್ತಿರುವುದು ಜೆಡಿಎಸ್‌ ಪಾಳಯದಲ್ಲಿ ಅಸಹನೆ ಹೆಚ್ಚಿಸಿದೆ. ಬಂಡಾಯ ನಿರ್ಣಾಯಕ ಘಟ್ಟ ತಲುಪಿದರೆ, ಅದಕ್ಕೆ ಜೆಡಿಎಸ್‌ನ ಕೆಲವು ಶಾಸಕರಿಂದಲೂ ಸಾಥ್‌ ಸಿಗುವ ಸಾಧ್ಯತೆಗಳಿವೆ.

Vijaya Karnataka 6 Feb 2019, 10:30 pm
ಬೆಂಗಳೂರು : ಕಾಂಗ್ರೆಸ್‌ ಶಾಸಕರ ಅತೃಪ್ತಿಯ ಬೇಗುದಿ ಹೊರಬರುತ್ತಿರುವ ಬೆನ್ನಲ್ಲೇ, ಜೆಡಿಎಸ್‌ನಲ್ಲೂ ಅಸಮಾಧಾನ ಹೊಗೆಯಾಡುತ್ತಿದ್ದು ಯಾವುದೇ ಸಂದರ್ಭದಲ್ಲಿ ಸ್ಫೋಟಗೊಳ್ಳುವ ಸಾಧ್ಯತೆಯಿದೆ.
Vijaya Karnataka Web ದೇವೇಗೌಡ, ಕುಮಾರಸ್ವಾಮಿ
ದೇವೇಗೌಡ, ಕುಮಾರಸ್ವಾಮಿ


ಮಿತ್ರಪಕ್ಷ ಕಾಂಗ್ರೆಸ್‌ ತನ್ನ ಪಾಲಿನ ಸಚಿವ ಸ್ಥಾನಗಳನ್ನು ಭರ್ತಿ ಮಾಡಿ, ಕೆಲವರಿಗೆ ಪ್ರಮುಖ ನಿಗಮ -ಮಂಡಳಿ ಅಧ್ಯಕ್ಷಗಾದಿ ಹಂಚಿದೆ. ಸಂಸದೀಯ ಕಾರ್ಯದರ್ಶಿ ಹುದ್ದೆಗಳ ಮೂಲಕವೂ ತನ್ನ ಶಾಸಕರಿಗೆ ಸ್ಥಾನಮಾನ ಕಲ್ಪಿಸಿದೆ. ಆದರೆ, ಸಮ್ಮಿಶ್ರ ಸರಕಾರದ ಭಾಗವಾಗಿ ತಮಗೆ ಅಧಿಕಾರ ಮತ್ತು ಸ್ಥಾನಮಾನ ಮರೀಚಿಕೆಯಾಗೇ ಮುಂದುವರಿದಿರುವುದು ಜೆಡಿಎಸ್‌ ಶಾಸಕರಲ್ಲಿ ಒಳಬೇಗುದಿಯಾಗಿ ಕಾಡುತ್ತಿದೆ.

ಬೆಳಗಾವಿ ಅಧಿವೇಶನದ ಬಳಿಕ 2 ಸಚಿವ ಸ್ಥಾನಗಳ ಭರ್ತಿ, ಸಂಸದೀಯ ಮತ್ತು ರಾಜಕೀಯ ಕಾರ್ಯದರ್ಶಿಗಳ ನೇಮಕ ಹಾಗೂ ನಿಗಮ -ಮಂಡಳಿ ನೇಮಕ ಮಾಡುವುದಾಗಿ ಜೆಡಿಎಸ್‌ ನಾಯಕರು ಭರವಸೆ ನೀಡಿದ್ದರು. ಬಳಿಕ, ಧನುರ್ಮಾಸ ಮುಗಿದ ಬಳಿಕ ಸಂಕ್ರಾಂತಿ ವೇಳೆಗೆ ಅಧಿಕಾರ ಹಂಚುವ ಭರವಸೆ ನೀಡಲಾಗಿತ್ತು.

ಈಗ ಅಧಿವೇಶನದ ನೆಪದಲ್ಲಿ ಅಧಿಕಾರ ಹಂಚದೆ ಮುಂದೂಡುತ್ತಿರುವುದು ಜೆಡಿಎಸ್‌ ಪಾಳಯದಲ್ಲಿ ಅಸಹನೆ ಹೆಚ್ಚಿಸಿದೆ. ಹೀಗಾಗಿ, ಕಾಂಗ್ರೆಸ್‌ನಲ್ಲಿ ಹೆಚ್ಚಿರುವ ಬಂಡಾಯ ನಿರ್ಣಾಯಕ ಘಟ್ಟ ತಲುಪಿದರೆ, ಅದಕ್ಕೆ ಜೆಡಿಎಸ್‌ನ ಕೆಲವು ಶಾಸಕರಿಂದಲೂ ಸಾಥ್‌ ಸಿಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ