ಆ್ಯಪ್ನಗರ

ಸುಪ್ರೀಂ ಆದೇಶಕ್ಕೆ ಸಡ್ಡು: ಅವಧಿಗೆ ಮುನ್ನವೇ ಪಟಾಕಿ ಸದ್ದು

ರಾಜ್ಯದ ಹಲವೆಡೆ ನಾಗರಿಕರಿಂದ ಪಟಾಕಿ ಸಿಡಿತ

Vijaya Karnataka Web 7 Nov 2018, 8:02 pm
ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ್ದ ಗಡುವಿಗೆ ನಾಗರಿಕರು ಹೆಚ್ಚು ಗಮನ ಕೊಟ್ಟಿಲ್ಲ ಎಂದು ಕಂಡುಬಂದಿದೆ.
Vijaya Karnataka Web ದೀಪಾವಳಿ
ದೀಪಾವಳಿ


ರಾಜ್ಯದ ಬಹುತೇಕ ಕಡೆಗಳಲ್ಲಿ ಬುಧವಾರ ಪಟಾಕಿಯ ಸದ್ದು ಕೇಳಿಬಂದಿತ್ತು.

ಸಂಜೆಯಾಗುತ್ತಲೇ ಪಟಾಕಿ ಅಬ್ಬರ ಜೋರಾಗಿ ಕಂಡುಬಂದಿತು. ರಾತ್ರಿ 8 ಗಂಟೆ ಬಳಿಕ ಪಟಾಕಿ ಸಿಡಿಸಬೇಕು ಎಂಬ ಆದೇಶವಿದ್ದರೂ ಜನರು ಆದೇಶಕ್ಕೆ ಕ್ಯಾರೇ ಎನ್ನಲಿಲ್ಲ. ಸಂಜೆ ಅಂಗಡಿ, ಮಳಿಗೆಗಳಲ್ಲಿ ಲಕ್ಷ್ಮಿ ಪೂಜೆ ಮುಗಿಸಿದ ವರ್ತಕರು ನೇರವಾಗಿ ರಸ್ತೆಗೆ ಬಂದು ಪಟಾಕಿ ಸಿಡಿಸುವುದರಲ್ಲಿ ನಿರತರಾದದ್ದು ಕಂಡುಬಂದಿತು.

ಸಂಜೆ 8 ಗಂಟೆಗೆ ಮುಂಚಿತವಾಗಿಯೇ ಪಟಾಕಿ ಅಬ್ಬರ ಕಂಡುಬಂದಿತು. ರಾತ್ರಿ 8 ರಿಂದ 10 ಗಂಟೆ ಒಳಗಾಗಿ ಪಟಾಕಿ ಸಿಡಿಸಬೇಕು ಎಂಬ ಸುಪ್ರೀಂ ಆದೇಶವನ್ನು ಜನರು ಪಾಲಿಸುವಂತೆ ಕ್ರಮ ಕೈಗೊಳ್ಳವ ಬಗ್ಗೆ ಹಾಗೂ ಆ ಕುರಿತು ಜನಜಾಗೃತಿ ಮೂಡಿಸುವ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಆಸಕ್ತಿ ಹಾಗೂ ಕ್ರಮ ವಹಿಸಿರಲಿಲ್ಲ.

ಹೀಗಾಗಿ ಸಾರ್ವಜನಿಕರು ಕೂಡ ನ್ಯಾಯಾಲಯದ ಆದೇಶಕ್ಕೆ ಸಡ್ಡು ಹೊಡೆದು ಪಟಾಕಿ ಸಿಡಿಸುವ ಮೂಲಕ ದೀಪಾವಳಿ ಆಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ