ಆ್ಯಪ್ನಗರ

ಡಿಕೆಶಿಗೆ ವರ ನೀಡಲಿಲ್ಲವೇ ತಾಯಿ ಚಾಮುಂಡೇಶ್ವರಿ?!

ಡಿಕೆಶಿಗೆ ಜಾಮೀನು ಅರ್ಜಿ ವಿಚಾರಣೆ ಆರಂಭವಾಗುವ ಮೊದಲು ಅವರ ಅಭಿಮಾನಿಗಳು ದೇವಾಲಯಗಳಲ್ಲಿ ಪೂಜೆಗಳಲ್ಲಿ ತೊಡಗಿದ್ದರು. ಡಿಕೆಶಿ ಅವರ ಆರಾಧ್ಯ ದೈವವಾದ ಮೈಸೂರಿನ ಚಾಮುಂಡೇಶ್ವ ದೇವಾಲಯದ ಬಳಿ ಈಡುಗಾಯಿ ಒಡೆದು ದೇವಿ ವಿಗ್ರಹಕ್ಕೆ ಹೂವಿನ ಅಲಂಕಾರ ಮಾಡಿದ್ದರು. ಆದರೂ, ಡಿಕೆಶಿಗೆ ತಾಯಿ ಚಾಮುಂಡಿಯ ರಕ್ಷೆ ಸಿಕ್ಕಿಲ್ಲ. ಅಂತಿಮವಾಗಿ ಜಾಮೀನು ಅರ್ಜಿ ವಾಜಾಗೊಂಡಿದೆ.

Vijaya Karnataka Web 25 Sep 2019, 6:24 pm
ಬೆಂಗಳೂರು: ಅಕ್ರಮ ಆಸ್ತಿ ಪತ್ತೆ ಪ್ರಕರಣ ಸಂಬಂಧ ಮಾಜಿ ಸಚಿವ ಡಿಕೆ ಶಿವಕುಮಾರ್‌ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಇದು ಡಿಕೆಶಿ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಬುಧವಾರ ಡಿಕೆಶಿ ಜಾಮೀನು ಅರ್ಜಿ ವಿಚಾರಣ ಆರಂಭವಾಗುತ್ತಿದ್ದಂತೆಯೇ ಡಿಕೆಶಿ ಅಭಿಮಾನಿಗಳು ಪೂಜೆಯಲ್ಲಿ ತೊಡಗಿದ್ದರು. ಡಿಕೆಶಿಗೆ ಜಾಮೀನು ದೊರೆಯಲೆಂದು ಹಾರೈಸಿ ಅಭಿಮಾನಿಗಳು ವಿವಿಧ ದೇವಾಲಯಗಳಲ್ಲಿ ಪೂಜೆ ಪುರಸ್ಕಾರ ನೆರವೇರಿಸಿದ್ದರು.
Vijaya Karnataka Web dk shivkumar


ಡಿಕೆ ಶಿವಕುಮಾರ್‌ಗೆ ಜಾಮೀನು ನಿರಾಕರಣೆ: ಇನ್ನೂ ಒಂದು ವಾರ ತಿಹಾರ್‌ ಜೈಲೇ ಗತಿ

ಮೈಸೂರಿನ ಚಾಮುಂಡೇಶ್ವರಿ ತಪ್ಪಲಲ್ಲಿ ಡಿಕೆ ಶಿವಕುಮಾರ್ ಅಭಿಮಾನಿಗಳು ಈಡುಕಾಯಿ ಒಡೆದು, ಚಾಮುಂಡೇಶ್ವರಿ ವಿಗ್ರಹಕ್ಕೆ ಹೂಮಾಲೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಾಮೀನು ಸಿಗುವಂತೆ ಪ್ರಾರ್ಥನೆಯನ್ನೂ ಸಲ್ಲಿಸಿದ್ದರು. ಆದರೆ ಕೊನೆಗೂ ಚಾಮುಂಡೇಶ್ವರಿ ತಾಯಿಯ ಅನುಗ್ರಹ ಡಿಕೆಶಿಗೆ ದೊರೆತಿಲ್ಲ ಎನಿಸುತ್ತದೆ.

ಡಿಕೆಶಿ ಜಾಮೀನು ತೀರ್ಪಿಗೆ ಕ್ಷಣಗಣನೆ - ಅಭಿಮಾನಿಗಳಿಂದ ಪೂಜೆ!

ಚಾಮುಂಡಿಗೆ ಎರಡು ಬೆಳ್ಳಿ ಆನೆಗಳನ್ನು ನೀಡಿದ್ದ ಡಿಕೆಶಿ:
ಜಾರಿ ನಿರ್ದೇಶನಾಲಯ ಡಿಕೆಶಿ ಅವರನ್ನು ವಿಚಾರಣೆಗೆ ಒಳಪಡಿಸಿದ ನಂತರ ಕುಟುಂಬಸಮೇತರಾಗಿ ಮೈಸೂನ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಹರಕೆ ಕಾಣಿಕೆಯಾಗಿ ಎರಡು ದೊಡ್ಡ ಗಾತ್ರದ ಬೆಳ್ಳಿ ಆನೆಗಳ ವಿಗ್ರಹವನ್ನು ಚಾಮುಂಡೇಶ್ವರಿ ದೇವಾಲಯಕ್ಕೆ ನೀಡಿದ್ದರು. ಅಕ್ರಮ ಆಸ್ತಿ ಪತ್ತೆ ಪ್ರಕರಣದಲ್ಲಿ ಜಯ ಸಿಗುವಂತೆ ಹರಕೆ ಹೊತ್ತು ಈ ಬೆಳ್ಳಿ ಆನೆಗಳ ವಿಗ್ರಹವನ್ನು ನೀಡಲಾಗಿದೆ ಎಂಬ ಮಾತುಗಳು ಹರಿದಾಡಿದ್ದವು. ಆದರೆ ಡಿಕೆಶಿ ಕುಟುಂಬವು ದಸರಾ ಹಬ್ಬ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ ಎಂದು ಹೇಳಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ