ಆ್ಯಪ್ನಗರ

ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜ್ ಎತ್ತಂಗಡಿ! ಪ್ರಾಣ ಹೋದ್ರೂ ಬಿಡಲ್ಲ ಅಂದ್ರು ಡಿಕೆಶಿ

'ಚಿಕ್ಕಬಳ್ಳಾಪುರದಲ್ಲಿ ಬೇಕಿದ್ರೆ ಸಾವಿರ ಮೆಡಿಕಲ್ ಕಾಲೇಜು ಮಾಡಿಕೊಳ್ಳಲಿ, ನಾನೇನೂ ಅವರಿಗೆ ಬೇಡವೆಂದು ಹೇಳುವುದಿಲ್ಲ. ನಾನು ಮಂತ್ರಿ ಆಗಿದ್ದೇ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಮಾಡಿಕೊಳ್ಳಬೇಕು ಅಂತಾ' - ಡಿ. ಕೆ. ಶಿವಕುಮಾರ್

Vijaya Karnataka Web 29 Oct 2019, 4:18 pm
ಬೆಂಗಳೂರು: ಕನಕಪುರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಲು ಸರ್ಕಾರ ನಿರ್ಧಾರ ಮಾಡಿರೋದಕ್ಕೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ನನ್ನ ಪ್ರಾಣ ಹೋದರೂ ಪರವಾಗಿಲ್ಲ, ಮೆಡಿಕಲ್ ಕಾಲೇಜು ಮಾತ್ರ ಬಿಟ್ಟು ಕೊಡಲ್ಲ ಎಂದಿದ್ದಾರೆ.

ವಿಡಿಯೋ: 'ಹೈಕಮಾಂಡ್ ಕೊಡುವ ಯಾವುದೇ ಜವಾಬ್ದಾರಿಗೂ ರೆಡಿ': ಹೊಸ ಹುರುಪಿನೊಂದಿಗೆ ಮತ್ತೆ ಅಖಾಡಕ್ಕೆ ಡಿಕೆಶಿ!

ಕನಕಪುರದಲ್ಲೇ ಮೆಡಿಕಲ್ ಕಾಲೇಜು ಆಗಬೇಕು ಎಂದು ಈಗಾಗಲೇ ನಮ್ಮ ಸರ್ಕಾರದ ಅವಧಿಯಲ್ಲೇ ತೀರ್ಮಾನ ಆಗಿದೆ. ಆದರೆ ಯಡಿಯೂರಪ್ಪ ಅದನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿದ್ದಾರೆ. ಯಡಿಯೂರಪ್ಪ ಧೋರಣೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಡಿ. ಕೆ ಶಿವಕುಮಾರ್, ಕನಕಪುರದಲ್ಲೇ ಮೆಡಿಕಲ್ ಕಾಲೇಜು ಆಗಬೇಕು ಎಂದು ಆಗ್ರಹಿಸಿದ್ದಾರೆ. ನಾನು ಈ ಬಗ್ಗೆ ಹೋರಾಟ ಮಾಡಲು ಸಿದ್ದನಿದ್ದೇನೆ ಎಂದಿರುವ ಡಿಕೆಶಿ, ನನ್ನ ಪ್ರಾಣ ಬೇಕಿದ್ರೆ ಹೋಗಲಿ, ಆದರೆ ಮೆಡಿಕಲ್ ಕಾಲೇಜನ್ನು ಮಾತ್ರ ಬಿಟ್ಟುಕೊಡುವುದಿಲ್ಲ ಎಂದು ಅಬ್ಬರಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬೇಕಿದ್ರೆ ಸಾವಿರ ಮೆಡಿಕಲ್ ಕಾಲೇಜು ಮಾಡಿಕೊಳ್ಳಲಿ, ನಾನೇನೂ ಅವರಿಗೆ ಬೇಡವೆಂದು ಹೇಳುವುದಿಲ್ಲ ಎಂದ ಡಿಕೆಶಿ, ನಾನು ಮಂತ್ರಿ ಆಗಿದ್ದೇ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಮಾಡಿಕೊಳ್ಳಬೇಕು ಅಂತಾ. ಕುಮಾರಸ್ವಾಮಿ ಕೂಡ ಬಜೆಟ್‌ನಲ್ಲಿ ಒಪ್ಪಿಗೆ ಕೊಟ್ಟಿದ್ದಾರೆ. ಅಲ್ಲದೆ ಯಡಿಯೂರಪ್ಪ ಕೂಡ ಇದಕ್ಕೆ ಅನುಮೋದನೆ ಕೊಟ್ಟಿದ್ದಾರೆ ಎಂದು ಡಿಕೆಶಿ ಹೇಳಿದ್ರು.

ಯಡಿಯೂರಪ್ಪ ಯಾವ ಕಾರಣಕ್ಕೂ ದ್ವೇಷ ಮಾಡಲ್ಲ ಎಂದು ಹೇಳಿದ್ದಾರೆ. ಇದು ಬಸವಣ್ಣನ ನಾಡು. ಆದ್ರೆ, ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ನಂತರ ಮೊದಲ ಕೆಲಸ ಮಾಡಿರೋದೇ ಈ ಮೆಡಿಕಲ್ ಕಾಲೇಜು ಸ್ಥಳಾಂತರ ಎಂದು ಕಿಡಿಕಾರಿದ ಡಿಕೆಶಿ, ಕಾಲೇಜಿಗೆ ಈ ಹಿಂದೆಯೇ ಕುಮಾರಸ್ವಾಮಿ ಫೈನಾನ್ಸ್ ಕ್ಲಿಯರ್ ಮಾಡಿದ್ದರು. ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ಸಿಕ್ಕಿತ್ತು. ಗುತ್ತಿಗೆದಾರರಿಗೂ ವರ್ಕಿಂಗ್ ಆರ್ಡರ್ ಕೊಡಲಾಗಿತ್ತು. ಕುಮಾರಸ್ವಾಮಿ ಅಮೇರಿಕಾಕ್ಕೆ ಹೋಗದೇ ಇದ್ದಿದ್ರೆ, ಅವರ ಕೈಯಲ್ಲಿ ಭೂಮಿ ಪೂಜೆ ಮಾಡಿಸ್ತಿದ್ದೆ ಎಂದು ಹಿಂದಿನ ಎಲ್ಲಾ ಬೆಳವಣಿಗೆಗಳನ್ನೂ ನೆನಪಿಸಿಕೊಂಡ ಡಿಕೆಶಿ, ಸೋಮಣ್ಣ ಮಂತ್ರಿ ಆಗಿದ್ದಾಗ ಜಾಗವನ್ನು ಕೊಟ್ಟಿದ್ದಾರೆ. ಮೆಡಿಕಲ್ ಕಾಲೇಜು ನನ್ನ ಕನಸಿನ ಯೋಜನೆ. ಆದ್ರೆ, ಅದನ್ನು ಈಗ ಏಕಾಏಕಿ ಕ್ಯಾನ್ಸಲ್ ಮಾಡಿದ್ದಾರೆ ಎಂದು ಸಿಟ್ಟಾದರು.

ಕನಕಪುರದ ಜನತೆಗಾಗಿ ನನ್ನ ಪ್ರಾಣ ಹೋದ್ರೂ ಚಿಂತೆಯಿಲ್ಲ ಎಂದು ಸಿಡಿದಿರುವ ಡಿಕೆಶಿ, ನನ್ನ ಹೋರಾಟ ಯಾವ ಸ್ವರೂಪ ಪಡೆದುಕೊಳ್ಳುತ್ತೋ ಗೊತ್ತಿಲ್ಲ, ಇನ್ನೆರಡು ದಿನಗಳಲ್ಲಿ ನಾನು ಸಿಎಂಗೆ ಪತ್ರ ಬರೆಯುತ್ತೇನೆ ಎಂದರು. ಈ ಹಿಂದೆ ಯಡಿಯೂರಪ್ಪ ನನ್ನ ಮನೆಗೆ ಬಂದು, ಯಾವುದೇ ಕೆಲಸ ಆಗಬೇಕು ಅಂದಾಗಲೂ ನಾನು ರಾಜಕಾರಣ ಮಾಡಿಲ್ಲ. ಎಷ್ಟೋ ಸಾವಿರ ಕೋಟಿ ರೂಪಾಯಿಯನ್ನು ಅವರಿಗೆ ಬಿಡುಗಡೆ ಮಾಡಿಕೊಟ್ಟಿದ್ದೇನೆ. ಅವಾಗ ಅವರು ವಿಪಕ್ಷ ನಾಯಕರಾಗಿದ್ರು. ಅವರಿಗೆ ಗೌರವ ಕೊಟ್ಟು, ಅವರು ಹೇಳಿದ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ. ಆದ್ರೆ, ಈಗ ಯಡಿಯೂರಪ್ಪ ರಾಜಕಾರಣ ಮಾಡಿದ್ದಾರೆ ಎಂದು ಡಿಕೆಶಿ ಬೇಸರ ವ್ಯಕ್ತಪಡಿಸಿದರು.

ಡಿಕೆಶಿ ರೋಡ್ ಶೋ ವೇಳೆ ಕರ್ತವ್ಯಕ್ಕೆ ಅಡ್ಡಿ; ಕೈ ಕಾರ್ಯಕರ್ತರ ವಿರುದ್ಧ ಎಫ್‌ಐಆರ್

ನಾನು ಕೆಂಪೇಗೌಡ ಹಾಗೂ ಗೌರಮ್ಮಗೆ ಹುಟ್ಟಿರಬಹುದು. ಆದರೆ ನನ್ನ ಕ್ಷೇತ್ರದ ಜನರು ನನ್ನ ಮಗ ಅಂತಾ ಸಾಕಿದ್ದಾರೆ. ಅವರಿಗೋಸ್ಕರ ನಾನು ಪ್ರಾಣ ಕೊಡೋಕೂ ಸಿದ್ದನಿದ್ದೇನೆ ಎಂದ ಡಿಕೆಶಿ, ನಾನೇ ಸ್ವಂತವಾಗಿ ಮೆಡಿಕಲ್ ಕಾಲೇಜು ಮಾಡಬಹುದಿತ್ತು, ಆದರೆ ‌ಸರ್ಕಾರದಿಂದ ಅಲ್ಲಿನ ಜನತೆಗೆ ಅನುಕೂಲ ಆಗುತ್ತೆ ಅನ್ನೋ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದೆ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.

ಯಡಿಯೂರಪ್ಪಗೆ ಕುಟುಕಿದ ಡಿಕೆಶಿ..!

ಡಿಕೆಶಿ ಎಲ್ಲಾ ಸಮಸ್ಯೆಯಿಂದ ಹೊರಗೆ ಬಂದ್ರೆ ಅತ್ಯಂತ ಖುಷಿ ಪಡೋದೇ ನಾನು ಎಂಬ ಸಿಎಂ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಯಡಿಯೂರಪ್ಪ ಬಗ್ಗೆ ನಾನು ಮಾತಾಡಲ್ಲ. ನಾನು ಯಡಿಯೂರಪ್ಪ ಬಗ್ಗೆ ಏನಾದ್ರೂ ಹೇಳೋದ್ರಿಂದ ಅವರಿಗೇ ಸಮಸ್ಯೆ ಆಗುತ್ತೆ. ಪಾಪ ನಾನು ಮಾತಾನಾಡೋದ್ರಿಂದ ಅವರ ಖುರ್ಚಿಗೆ ಸಮಸ್ಯೆ ಆಗೋದು ಬೇಡ, ಪಾಪ ಅವರ ಬಗ್ಗೆ ಯಾಕೆ ಮಾತನಾಡೋದು‌ ಎಂದು ಡಿಕೆಶಿ ಲೇವಡಿ ಮಾಡಿದ್ರು. ನನ್ನ ಜೊತೆ ಯಡಿಯೂರಪ್ಪ ಏನೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ ಡಿಕೆಶಿ, ಕೆಲ ಬಿಜೆಪಿ ಸ್ನೇಹಿತರು ನನಗೆ ಶುಭ ಕೋರಿದ್ದಾರೆ. ಅವರ ಹೆಸರು ಈಗ ಹೇಳೋದು ಬೇಡ ಬಿಡಿ ಎಂದು, ಸಿಎಂ ಯಡಿಯೂರಪ್ಪಗೆ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟರು.

ವಿಡಿಯೋ: ಮೀಡಿಯಾ ವಿರುದ್ಧ ಡಿಕೆಶಿ ಪುತ್ರಿ ಗರಂ!: ‘ನಮ್ಮಪ್ಪನ ವಿಡಿಯೋ ತೆಗೀರಿ, ಫ್ಯಾಮಿಲಿ ಏಕೆ’?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ