ಆ್ಯಪ್ನಗರ

ಶ್ರೀರಾಮುಲು ಹೇಳಿಕೆಗೆ ಡಿಕೆಶಿ 'ಟಾಂಗ್‌' ಹೇಗಿದೆ ನೋಡಿ...

ನಾನಂತೂ ಏನೂ ಮಾತಾಡಲು ಹೋಗುವುದಿಲ್ಲ. ಬಳ್ಳಾರಿ ಚುನಾವಣೆ ಸಂದರ್ಭದಲ್ಲೂ ನಾನೇದರೂ ಮಾತನಾಡಿದ್ದು ನೋಡಿದಿರಾ? ನನ್ನ ಪಾಡಿಗೆ ನಾನು ಶಾಂತಕ್ಕ, ಶ್ರೀರಾಮುಲು ಅಣ್ಣ ಅಂತಂದುಕೊಂಡಿದ್ದೇನೆ ಎಂದು ಡಿಕೆ ಶಿವಕುಮಾರ್‌ ಹೇಳಿಕೆ ನೀಡಿದ್ದಾರೆ.

Vijaya Karnataka Web 15 Nov 2018, 7:04 pm
ಬೆಂಗಳೂರು: ನನ್ನ ಪಾಡಿಗೆ ನಾನು ಶಾಂತಕ್ಕ, ಶ್ರೀರಾಮುಲು ಅಣ್ಣ ಅಂತಂದುಕೊಂಡು ಇದ್ದೇನೆ ಎಂದು ಹೇಳಿದವರು ಯಾರು ಗೊತ್ತೇ?
Vijaya Karnataka Web DKS-2


ಸಮ್ಮಿಶ್ರ ಸರಕಾರದ ರೂವಾರಿ ಎಂದೇ ಪರಿಗಣಿಸಲ್ಪಡುವ ವೈದ್ಯಕೀಯ ಶಿಕ್ಷಣ ಹಾಗೂ ಜಲಸಂಪನ್ಮೂಲ ಸಚಿವರಾಗಿರುವ ಡಿ.ಕೆ ಶಿವಕುಮಾರ್‌ ಅವರು ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪರಿ ಇದು.

‘ಶಾಂತಕ್ಕ ದಿಲ್ಲಿಗೆ, ಶಿವಕುಮಾರ್ ಜೈಲಿಗೆ’ಎಂದು ಶ್ರೀರಾಮುಲು ಹೇಳಿದ್ದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಅವರೇನೋ ನ. 6 ರಂದು ನಾನು ಜೈಲಿಗೆ ಹೋಗುತ್ತೇನೆ ಅಂತ ಡೇಟ್ ಫಿಕ್ಸ್ ಮಾಡಿದ್ದರು. ಈಗ ಹೊಸ ಡೇಟ್ ಯಾವಾಗ ಕೊಡುತ್ತಾರೋ ಗೊತ್ತಿಲ್ಲ, ಜಡ್ಜ್ ಸಾಹೇಬರು. ಆದರೆ ನಾನಂತೂ ಏನೂ ಮಾತಾಡಲು ಹೋಗುವುದಿಲ್ಲ. ಬಳ್ಳಾರಿ ಚುನಾವಣೆ ಸಂದರ್ಭದಲ್ಲೂ ನಾನೇದರೂ ಮಾತನಾಡಿದ್ದು ನೋಡಿದಿರಾ? ನನ್ನ ಪಾಡಿಗೆ ನಾನು ಶಾಂತಕ್ಕ, ಶ್ರೀರಾಮುಲು ಅಣ್ಣ ಅಂತಂದುಕೊಂಡಿದ್ದೇನೆ ಎಂದರು.

ಜನಾರ್ದನ ರೆಡ್ಡಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದೊಡ್ಡವರ ಕತೆ ನಮಗೆ ಬೇಡ. ದೊಡ್ಡ ಜನ, ದೊಡ್ಡ ಶಕ್ತಿಗಳಿಗೆ ದೇವರು ಒಳ್ಳೆಯದು ಮಾಡಲಿ ಎಂದರು. ರೆಡ್ಡಿ ಪ್ರಕರಣದ ಕುರಿತು ಪ್ರತಿಕ್ರಿಯಿಸಲು ನಾನು ಗೃಹ ಸಚಿವನೂ ಅಲ್ಲ, ಪೊಲೀಸ್ ಕಮೀಷನರೂ ಅಲ್ಲ. ಸುಖಾಸುಮ್ಮನೆ ಈ ವಿಚಾರದಲ್ಲಿ ನನ್ನನ್ನು ಎಳೆಯಬೇಡಿ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ