ಆ್ಯಪ್ನಗರ

ಡಿಕೆಶಿಗೆ ಬಂಧನ ಭೀತಿ: ಮಧ್ಯಂತರ ರಕ್ಷಣೆ ಕೋರಿ ಹೈಕೋರ್ಟ್ ಮೊರೆ

ಇಂದು ಡಿ ಕೆ ಶಿವಕುಮಾರ್ ಇಡಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗುತ್ತಿದ್ದಾರೆ.

Vijaya Karnataka Web 30 Aug 2019, 12:43 pm
ಬೆಂಗಳೂರು: ಶುಕ್ರವಾರ ಜಾರಿ ನಿರ್ದೇಶನಾಲಯಲ್ಲಿ ವಿಚಾರಣೆಗೆ ಹಾಜರಾಗಲಿರುವ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಡಿ ಕೆ ಶಿವಕುಮಾರ್‌ಗೆ ಬಂಧನದ ಭೀತಿ ಶುರುವಾಗಿದ್ದು , ಮುಂಜಾಗ್ರತೆಯಾಗಿ ಮಧ್ಯಂತರ ರಕ್ಷಣೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Vijaya Karnataka Web DKS 1


ಅರ್ಜಿಯನ್ನು ಸ್ವೀಕರಿಸಿರುವ ಹೈಕೋರ್ಟ್ ಮಧ್ಯಾಹ್ನ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ವಿಚಾರಣೆಗೆ ಮುಗಿದ ಬಳಿಕ ಬಂಧನದ ಸಾಧ್ಯತೆ ಇರುರುವುದರಿಂದ ಮಧ್ಯಂತರ ರಕ್ಷಣೆ ನೀಡಬೇಕೆಂಬುದು ಅವರ ಪರ ವಕೀಲರ ಕೋರಿಕೆ. ಅದಕ್ಕೆ ಕೇಂದ್ರ ಸರಕಾರಿ ವಕೀಲರು ಆಕ್ಷೇಪ ವ್ಯಕ್ತ ಪಡಿಸಿದ್ದು, ಈ ಕುರಿತು ಇಡಿ ಮುಂದೆ ಮನವಿ ಸಲ್ಲಿಸಲು ಆಗ್ರಹಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ದಿಲ್ಲಿಯ ಇ.ಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಡಿ ಕೆ ಶಿವಕುಮಾರ್ ಅವರಿಗೆ ಗುರುವಾರ ರಾತ್ರಿ 9.40 ಕ್ಕೆ ಇ.ಡಿ ಅಧಿಕಾರಿಗಳು ಸಮನ್ಸ್‌ ನೀಡಿದ್ದಾರೆ. ಏಕಾಏಕಿ ವಿಚಾರಣೆ ನಿಗದಿ ಪಡಿಸಿರುವುದು ದುರುದ್ದೇಶಪೂರಿತವಾಗಿದ್ದರೂ, ಈ ದೇಶದ ಕಾನೂನನ್ನು ನಂಬುತ್ತೇನೆ ಮತ್ತು ಅದಕ್ಕೆ ಬದ್ಧನಾಗಿರುವ ನಾನು, ನಿಗದಿತ ವಿಚಾರಣೆಗೆ ಹಾಜರಾಗಿ ಸಹಕರಿಸುತ್ತೇನೆ ಎಂದವರು ಟ್ವೀಟ್‌ ಮೂಲಕ ಹೇಳಿದ್ದರು.

ಇಡಿ ಉರುಳಲ್ಲಿ ಡಿಕೆಶಿ, ಎಸ್‌ಐಟಿ ಕುಣಿಕೆಯಿಂದ ಪಾರಾದ ಎಚ್‌ಡಿಕೆಇಡಿ ಉರುಳಲ್ಲಿ ಡಿಕೆಶಿ, ಎಸ್‌ಐಟಿ ಕುಣಿಕೆಯಿಂದ ಪಾರಾದ ಎಚ್‌ಡಿಕೆ

ಇಡಿ ವಿಚಾರಣೆಗೆ ಹಾಜರಾಗಿ ಸಹಕರಿಸುವೆ: ಮಾಜಿ ಸಚಿವ ಡಿ.ಕೆ ಶಿವಕುಮಾರ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ