ಆ್ಯಪ್ನಗರ

DK Shivakumar: ಮೇಕೆದಾಟು ಕುರಿತು ಚರ್ಚಿಸಲು ತಮಿಳುನಾಡು ಸಿಎಂ ಭೇಟಿ ಕೋರಿ ಡಿಕೆಶಿ ಪತ್ರ

ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ಸರಕಾರಕ್ಕೆ ಹಾಗೂ ಅಲ್ಲಿನ ಜನರಿಗೆ ಕೆಲ ತಪ್ಪು ಕಲ್ಪನೆಗಳಿರುವುದು ಗಮನಿಸಿದ್ದು, ಈ ಸಂಬಂಧ ಸಂಪೂರ್ಣ ವಿವರಣೆ ನೀಡಲು ಭೇಟಿಗೆ ಅವಕಾಶ ನೀಡುವಂತೆ ಪತ್ರದಲ್ಲಿ ಪಳನಿಸಾಮಿ ಅವರಿಗೆ ಡಿಕೆ ಶಿವಕುಮಾರ್‌ ಮನವಿ ಮಾಡಿದ್ದಾರೆ.

Vijaya Karnataka Web 6 Dec 2018, 1:36 pm
ಬೆಂಗಳೂರು: ಮೇಕೆದಾಟು ಯೋಜನೆ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡುವ ಸಂಬಂಧ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್‌ ತಮಿಳುನಾಡು ಸಿಎಂ ಪಳನಿಸ್ವಾಮಿ ಭೇಟಿಗೆ ಅವಕಾಶ ಕೇಳಿದ್ದಾರೆ.
Vijaya Karnataka Web DKS


ಗುರುವಾರ ಈ ಸಂಬಂಧ ಪಳನಿಸ್ವಾಮಿಗೆ ಪತ್ರದ ಮೂಲಕ ಯೋಜನೆ ಬಗ್ಗೆ ತಮಿಳುನಾಡು ಸರಕಾರ ಹಾಗೂ ಜನತಗೆ ಇರುವ ತಪ್ಪು ಅಭಿಪ್ರಾಯ ಮೂಡಿದೆ. ಈ ಸಂಬಂಧ ಯೋಜನೆ ಬಗ್ಗೆ ಮಾಹಿತಿ ನೀಡಲು ಭೇಟಿಗೆ ಅವಕಾಶ ನೀಡುವಂತೆ ಪತ್ರದಲ್ಲಿ ತಿಳಿಸಿದ್ದಾರೆ.

ತಮಿಳುನಾಡು ಹಾಗೂ ಕರ್ನಾಟಕಕ್ಕೆ ಕಾವೇರಿ ನದಿ ಜೀವನಾಡಿ. ನದಿ ನೀರಿನ ಹಂಚಿಕೆ ಸೇರಿ 2 ರಾಜ್ಯದ ನಡುವೆ ಇರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆಗೆ ಕರ್ನಾಟಕ ಮುಂದಾಗಿದೆ. ಈ ಯೋಜನೆಯಿಂದ ಕಾವೇರಿ ನದಿಯ ಮೂಲಕ ಹೆಚ್ಚುವರಿಯಾಗಿ ಸಮುದ್ರ ಸೇರುವ ನೀರನ್ನು ಮಾತ್ರ ಕರ್ನಾಟಕ ಕುಡಿಯುವ ನೀರಿನ ಯೋಜನೆಗಾಗಿ ಬಳಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.


ಯೋಜನೆ ಸಂಬಂಧ ತಮಿಳುನಾಡು ಸರಕಾರಕ್ಕೆ ಹಾಗೂ ಅಲ್ಲಿನ ಜನರಿಗೆ ಕೆಲ ತಪ್ಪು ಕಲ್ಪನೆಗಳಿರುವುದು ಗಮನಿಸಿದ್ದು, ಈ ಸಂಬಂಧ ಸಂಪೂರ್ಣ ವಿವರಣೆ ನೀಡಲು ಭೇಟಿಗೆ ಅವಕಾಶ ನೀಡುವಂತೆ ಪತ್ರದಲ್ಲಿ ಪಳನಿಸಾಮಿ ಅವರಿಗೆ ಡಿಕೆ ಶಿವಕುಮಾರ್‌ ಮನವಿ ಮಾಡಿದ್ದಾರೆ. ಇದರಿಂದ ಮೇಕೆದಾಟು ಯೋಜನೆಯ ಸತ್ಯಾಂಶ ಹಾಗೂ ವಾಸ್ತವತೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಅನುಕೂಲವಾಗಲಿದೆ ಎಂದು ಶಿವಕುಮಾರ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ