ಬೆಂಗಳೂರು: ಮೇಕೆದಾಟು ಯೋಜನೆ ಜಾರಿ ಕುರಿತಾಗಿ ಸಚಿವ ವಿ. ಸೋಮಣ್ಣ ನೀಡಿರುವ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಮೇಕೆದಾಟು ಯೋಜನೆ ವಿಚಾರವಾಗಿ ಮಾತನಾಡಿದ್ದ ವಿ. ಸೋಮಣ್ಣ, ನಾವೇ ಯೋಜನೆ ಜಾರಿ ಮಾಡೋದು ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ನಾನು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಡಬಲ್ ಇಂಜಿನ್ ಸರಕಾರ ಇದೆ. ಬೇಗ ಶಂಕುಸ್ಥಾಪನೆ ಮಾಡಲಿ. ನಾನೇ ಭವ್ಯ ಸ್ವಾಗತ ಮಾಡ್ತೇನೆ ಎಂದರು.
ಬಿಜೆಪಿ ಸಚಿವರು ಡಿಕೆಶಿ ಸಂಪರ್ಕಿಸಿ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ ಅನ್ನೋ ಯತ್ನಾಳ ಹೇಳಿಕೆ ವಿಚಾರವಾಗಿ, ನಾವು ಅದನ್ನೆಲ್ಲಾ ಹೇಳೋಕ್ಕಾಗಲ್ಲ. ಯಾರು ಮಾತಾಡಿದ್ರು ಅನ್ನೋದನ್ನು ಬಹಿರಂಗ ಮಾಡಲು ಆಗಲ್ಲ ಎಂದರು.
ಬೇಕಾದಾಗ ಕರ್ಫ್ಯೂ ಮಾಡ್ತಾರೆ, ಬೇಡದೆ ಇದ್ದಾಗ ತಗೀತಾರೆ! ಡಿಕೆ ಶಿವಕುಮಾರ್ ಆಕ್ರೋಶ
ಸಚಿವರನ್ನೇ ಈ ಬಗ್ಗೆ ಕೇಳ್ಕೊಳ್ಳಿ. ಯಾರು ಯಾರ ಭವಿಷ್ಯ ಎನು ಅನ್ನೋದನ್ನು ಜನರೇ ತಿರ್ಮಾನ ಮಾಡುತ್ತಾರೆ. ನಾನು ಕೆಲವು ವಿಚಾರವನ್ನು ಬಹಿರಂಗ ಮಾಡಲ್ಲ ಎಂದರು.
ಮುಂದಿನ ಚುನಾವಣೆಯಲ್ಲಿ ರಾಮನಗರದಲ್ಲಿ ಸ್ಪರ್ಧಿಸುವಿರಾ ಎಂಬ ಪ್ರಶ್ನೆಗೆ, 224 ಕ್ಷೇತ್ರಗಳನ್ನೂ ನಾವು ಗೆಲ್ಲಿಸಬೇಕು. ಅಷ್ಟರಲ್ಲೂ ನಾವು ಕೆಲಸ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.
ವಿದ್ಯುತ್ ದರ ಏರಿಕೆ ಪ್ರಸ್ತಾವ; ರಾಜ್ಯ ಸರ್ಕಾರದ ವಿರುದ್ಧ ಡಿಕೆ ಶಿವಕುಮಾರ್ ಕಿಡಿ
ಸದಸ್ಯತ್ವ ನೋಂದಣಿ
ಸದಸ್ಯತ್ವ ನೋಂದಣಿಯನ್ನು ಆನ್ಲೈನ್ ಮೂಲಕ ಮಾಡಲು ತೀರ್ಮಾನಿಸಿದ್ದು, 26ರ ಒಳಗಾಗಿ ಮುಖ್ಯ ನೋಂದಣಿದಾರರನ್ನು ನೇಮಕ ಮಾಡಬೇಕಾಗಿದೆ. ಪ್ರತಿ ಜಿಲ್ಲಾ ಪಂಚಾಯ್ತಿ ಹಾಗೂ ಮುನ್ಸಿಪಾಲಿಟಿ ವ್ಯಾಪ್ತಿಗೆ ಇಬ್ಬರ ನೇಮಕಕ್ಕೆ ಚರ್ಚಿಸುತ್ತಿದ್ದೇವೆ. ಸದಸ್ಯತ್ವ ನೋಂದಣಿ ವಿಚಾರವಾಗಿ ಜನರ ಬಳಿ ಫೋಟೋ ಕೇಳುವಾಗ ಗಂಡಸರು ಹೆಣ್ಣು ಮಕ್ಕಳ ಫೋಟೋ, ಹೆಂಗಸರು ಗಂಡು ಮಕ್ಕಳ ಫೋಟೋ ಕೇಳಲು ಆಗುವುದಿಲ್ಲ. ಹೀಗಾಗಿ ಇಂತಹ ವಿಚಾರಗಳನ್ನೆಲ್ಲಾ ಚರ್ಚಿಸಿ ಆನ್ಲೈನ್ ಮೂಲಕ ಸದಸ್ಯತ್ವ ನೋಂದಣಿ ಮಾಡಲು ತೀರ್ಮಾನಿಸಲಾಗಿದೆ. ಯಾವುದೇ ಕಾರಣಕ್ಕೂ ಸದಸ್ಯತ್ವ ನೋಂದಣಿ ದಿನಾಂಕ ವಿಸ್ತರಣೆಯಾಗುವುದಿಲ್ಲ. ಪ್ರತಿಯೊಂದು ಚುನಾವಣೆ ಬ್ಲಾಕ್ ಅಧ್ಯಕ್ಷರಿಂದ ಹಿಡಿದು ಜಿಲ್ಲಾ ಕಾಂಗ್ರೆಸ್, ಪ್ರದೇಶ ಕಾಂಗ್ರೆಸ್, ಎಐಸಿಸಿ ಮಟ್ಟದ ಚುನಾವಣೆಗಳು ನಡೆಯಲಿದ್ದು, ಅಲ್ಲಿ ಸದಸ್ಯರಿಗೆ ಮತದಾನ ಮಾಡುವ ಹಕ್ಕಿದೆ. ಪಕ್ಷವನ್ನು ಕಾರ್ಯಕರ್ತರ ಪಕ್ಷವಾಗಿ (ಕೇಡರ್ ಬೇಸ್) ಮಾಡುವ ಬಗ್ಗೆ ನಾನು ಪ್ರತಿಜ್ಞಾ ಕಾರ್ಯಕ್ರಮದಲ್ಲೇ ಹೇಳಿದ್ದೇನೆ’ ಎಂದು ಹೇಳಿದರು.
ಮೇಕೆದಾಟು ಯೋಜನೆ ವಿಚಾರವಾಗಿ ಮಾತನಾಡಿದ್ದ ವಿ. ಸೋಮಣ್ಣ, ನಾವೇ ಯೋಜನೆ ಜಾರಿ ಮಾಡೋದು ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ನಾನು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಡಬಲ್ ಇಂಜಿನ್ ಸರಕಾರ ಇದೆ. ಬೇಗ ಶಂಕುಸ್ಥಾಪನೆ ಮಾಡಲಿ. ನಾನೇ ಭವ್ಯ ಸ್ವಾಗತ ಮಾಡ್ತೇನೆ ಎಂದರು.
ಬಿಜೆಪಿ ಸಚಿವರು ಡಿಕೆಶಿ ಸಂಪರ್ಕಿಸಿ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ ಅನ್ನೋ ಯತ್ನಾಳ ಹೇಳಿಕೆ ವಿಚಾರವಾಗಿ, ನಾವು ಅದನ್ನೆಲ್ಲಾ ಹೇಳೋಕ್ಕಾಗಲ್ಲ. ಯಾರು ಮಾತಾಡಿದ್ರು ಅನ್ನೋದನ್ನು ಬಹಿರಂಗ ಮಾಡಲು ಆಗಲ್ಲ ಎಂದರು.
ಬೇಕಾದಾಗ ಕರ್ಫ್ಯೂ ಮಾಡ್ತಾರೆ, ಬೇಡದೆ ಇದ್ದಾಗ ತಗೀತಾರೆ! ಡಿಕೆ ಶಿವಕುಮಾರ್ ಆಕ್ರೋಶ
ಸಚಿವರನ್ನೇ ಈ ಬಗ್ಗೆ ಕೇಳ್ಕೊಳ್ಳಿ. ಯಾರು ಯಾರ ಭವಿಷ್ಯ ಎನು ಅನ್ನೋದನ್ನು ಜನರೇ ತಿರ್ಮಾನ ಮಾಡುತ್ತಾರೆ. ನಾನು ಕೆಲವು ವಿಚಾರವನ್ನು ಬಹಿರಂಗ ಮಾಡಲ್ಲ ಎಂದರು.
ಮುಂದಿನ ಚುನಾವಣೆಯಲ್ಲಿ ರಾಮನಗರದಲ್ಲಿ ಸ್ಪರ್ಧಿಸುವಿರಾ ಎಂಬ ಪ್ರಶ್ನೆಗೆ, 224 ಕ್ಷೇತ್ರಗಳನ್ನೂ ನಾವು ಗೆಲ್ಲಿಸಬೇಕು. ಅಷ್ಟರಲ್ಲೂ ನಾವು ಕೆಲಸ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.
ವಿದ್ಯುತ್ ದರ ಏರಿಕೆ ಪ್ರಸ್ತಾವ; ರಾಜ್ಯ ಸರ್ಕಾರದ ವಿರುದ್ಧ ಡಿಕೆ ಶಿವಕುಮಾರ್ ಕಿಡಿ
ಸದಸ್ಯತ್ವ ನೋಂದಣಿ
ಸದಸ್ಯತ್ವ ನೋಂದಣಿಯನ್ನು ಆನ್ಲೈನ್ ಮೂಲಕ ಮಾಡಲು ತೀರ್ಮಾನಿಸಿದ್ದು, 26ರ ಒಳಗಾಗಿ ಮುಖ್ಯ ನೋಂದಣಿದಾರರನ್ನು ನೇಮಕ ಮಾಡಬೇಕಾಗಿದೆ. ಪ್ರತಿ ಜಿಲ್ಲಾ ಪಂಚಾಯ್ತಿ ಹಾಗೂ ಮುನ್ಸಿಪಾಲಿಟಿ ವ್ಯಾಪ್ತಿಗೆ ಇಬ್ಬರ ನೇಮಕಕ್ಕೆ ಚರ್ಚಿಸುತ್ತಿದ್ದೇವೆ. ಸದಸ್ಯತ್ವ ನೋಂದಣಿ ವಿಚಾರವಾಗಿ ಜನರ ಬಳಿ ಫೋಟೋ ಕೇಳುವಾಗ ಗಂಡಸರು ಹೆಣ್ಣು ಮಕ್ಕಳ ಫೋಟೋ, ಹೆಂಗಸರು ಗಂಡು ಮಕ್ಕಳ ಫೋಟೋ ಕೇಳಲು ಆಗುವುದಿಲ್ಲ. ಹೀಗಾಗಿ ಇಂತಹ ವಿಚಾರಗಳನ್ನೆಲ್ಲಾ ಚರ್ಚಿಸಿ ಆನ್ಲೈನ್ ಮೂಲಕ ಸದಸ್ಯತ್ವ ನೋಂದಣಿ ಮಾಡಲು ತೀರ್ಮಾನಿಸಲಾಗಿದೆ. ಯಾವುದೇ ಕಾರಣಕ್ಕೂ ಸದಸ್ಯತ್ವ ನೋಂದಣಿ ದಿನಾಂಕ ವಿಸ್ತರಣೆಯಾಗುವುದಿಲ್ಲ. ಪ್ರತಿಯೊಂದು ಚುನಾವಣೆ ಬ್ಲಾಕ್ ಅಧ್ಯಕ್ಷರಿಂದ ಹಿಡಿದು ಜಿಲ್ಲಾ ಕಾಂಗ್ರೆಸ್, ಪ್ರದೇಶ ಕಾಂಗ್ರೆಸ್, ಎಐಸಿಸಿ ಮಟ್ಟದ ಚುನಾವಣೆಗಳು ನಡೆಯಲಿದ್ದು, ಅಲ್ಲಿ ಸದಸ್ಯರಿಗೆ ಮತದಾನ ಮಾಡುವ ಹಕ್ಕಿದೆ. ಪಕ್ಷವನ್ನು ಕಾರ್ಯಕರ್ತರ ಪಕ್ಷವಾಗಿ (ಕೇಡರ್ ಬೇಸ್) ಮಾಡುವ ಬಗ್ಗೆ ನಾನು ಪ್ರತಿಜ್ಞಾ ಕಾರ್ಯಕ್ರಮದಲ್ಲೇ ಹೇಳಿದ್ದೇನೆ’ ಎಂದು ಹೇಳಿದರು.