ಆ್ಯಪ್ನಗರ

ಬಂಡೆ ಪ್ರಕೃತಿ, ಅದನ್ನು ಕಡಿದು ಮೂರ್ತಿಯಾಗಿಸುವುದು ಸಂಸ್ಕೃತಿ - ಆರ್‌ ಅಶೋಕ್‌ಗೆ ಡಿಕೆಶಿ ತಿರುಗೇಟು

"ಬಂಡೆ ಸ್ಫೋಟಿಸುವುದು ಗೊತ್ತು," ಎಂದು ಕಂದಾಯ ಸಚಿವ ಆರ್‌ ಅಶೋಕ್‌ ನೀಡಿದ್ದ ಹೇಳಿಕೆಗೆ ಕಾಂಗ್ರೆಸ್‌ ಅಭ್ಯರ್ಥಿ ಎಚ್‌ ಕುಸುಮಾ ಅವರ ನಾಮಪತ್ರ ಸಲ್ಲಿಕೆ ಬಳಿಕ ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

Vijaya Karnataka 14 Oct 2020, 9:55 pm
ಬೆಂಗಳೂರು: "ಬಂಡೆ ಪ್ರಕೃತಿ. ಅದನ್ನು ಕಡಿದು ಮೂರ್ತಿಯಾಗಿಸುವುದು ಸಂಸ್ಕೃತಿ. ಇವರೇನು ಬಂಡೆಯನ್ನು ಕುಟ್ಟಿ ಪುಡಿ ಪುಡಿ ಮಾಡುತ್ತಾರಂತಾ?" ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
Vijaya Karnataka Web DK Shivakumar Siddaramaiah H Kusuma


"ಬಂಡೆ ಸ್ಫೋಟಿಸುವುದು ಗೊತ್ತು" ಎಂದು ಕಂದಾಯ ಸಚಿವ ಆರ್‌.ಅಶೋಕ್‌ ನೀಡಿದ್ದ ಹೇಳಿಕೆಗೆ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಕುಸುಮಾ ನಾಮಪತ್ರ ಸಲ್ಲಿಕೆ ಬಳಿಕ ಶಿವಕುಮಾರ್‌ ತಿರುಗೇಟು ನೀಡಿ, ''ಅವರು ಏನನ್ನು ಬೇಕಾದರೂ ಪುಡಿಪುಡಿ ಮಾಡಲಿ. ನಮ್ಮನ್ನು ಬೆದರಿಸುವ ತಂತ್ರಕ್ಕೆ ಕಾಂಗ್ರೆಸ್‌ ಮಣಿಯುವುದಿಲ್ಲ. ಬೆಳಗ್ಗೆ ಎದ್ದ ತಕ್ಷಣ ಡೈನಾಮೆಟ್‌ ಇಡ್ತಾನೆ ಇದ್ದಾರಲ್ಲವೇ?" ಎಂದು ಪ್ರಶ್ನಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸಲು ಈ ಚುನಾವಣೆ, ಡಿ.ಕೆ ಶಿವಕುಮಾರ್
ಈ ಬಾರಿಯ ಉಪಚುನಾವಣೆಯನ್ನು ಬಿಎಸ್‌ ಯಡಿಯೂರಪ್ಪ ಅವರ ರಾಜ್ಯ ಸರಕಾರ ಅಥವಾ ಪ್ರಧಾನಿ ಮೋದಿಯವರ ಕೇಂದ್ರ ಸರಕಾರವನ್ನು ಬೀಳಿಸುವುದಕ್ಕಾಗಿ ಎದುರಿಸುತ್ತಿಲ್ಲ. ಬದಲಿಗೆ ಎರಡೂ ಸರಕಾರಗಳಿಗೆ ಒಂದು ಸಂದೇಶ ರವಾನಿಸಲು ಎದುರಿಸುತ್ತೇದ್ದೇವೆ. ರಾಜರಾಜೇಶ್ವರಿ ನಗರ ಕ್ಷೇತ್ರದ ಈ ಕ್ಷೇತ್ರದ ಮತದಾರರು ವಿದ್ಯಾವಂತ, ಪ್ರಜ್ಞಾವಂತ ಹಾಗೂ ಬುದ್ಧಿವಂತರಿದ್ದಾರೆ. ಇಲ್ಲಿನ ಮತದಾರರು ಎರಡು ಬಾರಿ ಸತತವಾಗಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ಈ ಬಾರಿಯೂ ನಮ್ಮನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೌದು, ನಾನು ಅಹಿಂದ ರಾಮಯ್ಯನೇ


''ಹೌದು, ನಾನು ಅಹಿಂದ ರಾಮಯ್ಯನೇ. ಸದಾ ಅಹಿಂದ ಪರವಾಗಿಯೇ ಇರುತ್ತೇನೆ,'' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಆರ್‌.ಆರ್‌ ನಗರ ಬೈ ಎಲೆಕ್ಷನ್: ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಬಳಿ ಇರುವ ಆಸ್ತಿ ಎಷ್ಟು?
ನಾಮಪತ್ರ ಸಲ್ಲಿಕೆ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ''ನನ್ನನ್ನು ಅಹಿಂದ ರಾಮಯ್ಯ ಎಂದು ಕರೆದಿದ್ದಾರೆ. ಹೌದು, ನಾನು ಅಹಿಂದ ರಾಮಯ್ಯನೇ. ಆ ವರ್ಗದ ಪರವಾಗಿ ಸದಾ ಇರುತ್ತೇನೆ,'' ಎಂದು ಹೇಳುವ ಮೂಲಕ ತಮ್ಮ ಬಗ್ಗೆ ಮಾಜಿ ಸಿಎಂ ಎಚ್‌ಡಿಕೆ ಮಾಡಿದ ಟೀಕೆಗೆ ತಿರುಗೇಟು ನೀಡಿದ್ದಾರೆ.

ನಾಮಪತ್ರ ಸಲ್ಲಿಕೆ ಬಳಿಕ ಸಭೆ: ಎಚ್‌ ಕುಸುಮ ನಾಮಪತ್ರ ಸಲ್ಲಿಕೆ ಬಳಿಕ ಆರ್‌.ಆರ್‌.ನಗರದ ಖಾಸಗಿ ಕಾಲೇಜು ಆವರಣದಲ್ಲಿ ಕಾಂಗ್ರೆಸ್‌ ನಾಯಕರು ಸಭೆ ನಡೆಸಿ ಚುನಾವಣಾ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ