ಬೆಂಗಳೂರು: ಅಕ್ರಮ ಹಣಕಾಸು ವರ್ಗಾವಣೆ ಆರೋಪದಡಿಯಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಯಿಂದ ಬಂಧನಕ್ಕೆ ಒಳಗಾಗಿ ತಿಹಾರ್ ಜೈಲಿನಲ್ಲಿ 48 ದಿನಗಳನ್ನು ಕಳೆದ ಮಾಜಿ ಸಚಿವ ಡಿಕೆ ಶಿವಕುಮಾರ್ ಜೈಲಿನಲ್ಲಿ ಹೇಗಿದ್ದರು ಎಂಬ ವಿಚಾರವನ್ನು ಸ್ವತಃ ಅವರು ಬಿಚ್ಚಿಟ್ಟಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಜೈಲುವಾಸದ ಕೆಲವೊಂದು ಕುತೂಹಲಕಾರಿ ಅಂಶಗಳನ್ನು ತೆರೆದಿಟ್ಟರು.
ಡಿಕೆಶಿಯನ್ನು ಭೇಟಿಯಾದ ಬಿಜೆಪಿ ಮುಖಂಡ ಎಸ್ಎಂ ಕೃಷ್ಣ;ಕುತೂಹಲ ಕೆರಳಿಸಿದ ಮಾತುಕತೆ
ಬಿಗಿ ಪಹರೆಯ ದೆಹಲಿ ತಿಹಾರ್ ಜೈಲಿನಲ್ಲಿ ಡಿಕೆ ಶಿವಕುಮಾರ್ ಅವರನ್ನು ಆರ್ಥಿಕ ಅಪರಾಧದ ಆರೋಪಿಗಳನ್ನು ಬಂಧನದಲ್ಲಿರುವ ವಿಶೇಷ ಸೆಲ್ ನಲ್ಲಿ ಇಡಲಾಗಿತ್ತು. ಜೈಲಿನ ಸೆಲ್ ನಂಬರ್ 7 ರಲ್ಲಿ ಬಂಧನದಲ್ಲಿದ್ದ ಡಿಕೆಶಿಗೆ ಯಾವುದೇ ವಿಶೇಷ ಸೌಲಭ್ಯಗಳು ಇರಲಿಲ್ಲ. ಓದಲು ಲೈಬ್ರೆರಿ ಹಾಗೂ ನೋಡಲು ಟಿವಿ ಹೊರತಾಗಿ ಬೇರೆ ಸೌಲಭ್ಯಗಳನ್ನು ನೀಡಿರಲಿಲ್ಲ.
ತಿಹಾರ್ ಜೈಲಿನ ಸೆಲ್ ನಂ. 7ರಲ್ಲಿ ಡಿಕೆಶಿ - ಚಿದಂಬರಂ ಉಭಯಕುಶಲೋಪರಿ !
ಆದರೆ ಡಿಕೆ ಶಿವಕುಮಾರ್ ಅವರಿಗೆ ಪ್ರತಿನಿತ್ಯ ಅವರ ಕುಟುಂಬದ ಸದಸ್ಯರ ಜೊತೆಗೆ ಫೋನ್ ಮೂಲಕ ಮಾತನಾಡಲು ಅವಕಾಶ ನೀಡಲಾಗಿತ್ತಂತೆ. ಪ್ರತಿದಿನ ಮೂರು ನಿಮಿಷಗಳ ಕಾಲ ಮನೆಮಂದಿ ಜೊತೆಗೆ ಡಿಕೆ ಶಿವಕುಮಾರ್ ಮಾತನಾಡುತ್ತಿದ್ದರಂತೆ. ಅಷ್ಟೇ ಅಲ್ಲದೆ ಜೈಲಿನಲ್ಲಿದ್ದಾಗ ನಂಜನಗೂಡಿನ ನಂಜುಂಡೇಶ್ವರನ ನೆನೆದು ತಲೆಮೇಲೆ ನಿತ್ಯ ಮಣ್ಣನ್ನು ಹಾಕಿಕೊಂಡು ಪ್ರಾರ್ಥಿಸುತ್ತಿದ್ದರಂತೆ.
ಡಿಕೆಶಿ ಭೇಟಿಮಾಡಲು ಬಂದಿದ್ದ ವ್ಯಕ್ತಿಯೊಬ್ಬರು ಮಣ್ಣನ್ನು ತಂದು ಕೊಟ್ಟಿದ್ದರಂತೆ. ಅವರು ಹೇಳಿದ ಹಾಗೆ ನಿತ್ಯ ಮಣ್ಣನ್ನು ತಲೆಗೆ ಹಾಕಿಕೊಂಡು ಪ್ರಾರ್ಥನೆ ಸಲ್ಲಿಸುತ್ತಿದ್ದರಂತೆ. ಇಷ್ಟೇ ಅಲ್ಲದೆ ತಿಹಾರ್ ಜೈಲಿನ ಆವರಣದೊಳಗೆ ಇದ್ದ ಈಶ್ವರನ ದೇವಸ್ಥಾನಕ್ಕೂ ಡಿಕೆಶಿ ನಿತ್ಯ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಜೈಲಿಂದ ಬಿಡುಗಡೆಗೊಂಡ ಬಳಿಕ ಮೈಸೂರು ಪ್ರವಾಸ ಕೈಗೊಂಡಿರುವ ಡಿಕೆಶಿ ಇದೇ ಮೊದಲ ಬಾರಿಗೆ ತಮ್ಮ ಜೈಲಿನ ನಿತ್ಯದ ಚಟುವಟಿಕೆಗಳು ಹೀಗಿದ್ದವು ಎಂಬುವುದನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.
ಡಿಕೆಶಿಯನ್ನು ಭೇಟಿಯಾದ ಬಿಜೆಪಿ ಮುಖಂಡ ಎಸ್ಎಂ ಕೃಷ್ಣ;ಕುತೂಹಲ ಕೆರಳಿಸಿದ ಮಾತುಕತೆ
ಬಿಗಿ ಪಹರೆಯ ದೆಹಲಿ ತಿಹಾರ್ ಜೈಲಿನಲ್ಲಿ ಡಿಕೆ ಶಿವಕುಮಾರ್ ಅವರನ್ನು ಆರ್ಥಿಕ ಅಪರಾಧದ ಆರೋಪಿಗಳನ್ನು ಬಂಧನದಲ್ಲಿರುವ ವಿಶೇಷ ಸೆಲ್ ನಲ್ಲಿ ಇಡಲಾಗಿತ್ತು. ಜೈಲಿನ ಸೆಲ್ ನಂಬರ್ 7 ರಲ್ಲಿ ಬಂಧನದಲ್ಲಿದ್ದ ಡಿಕೆಶಿಗೆ ಯಾವುದೇ ವಿಶೇಷ ಸೌಲಭ್ಯಗಳು ಇರಲಿಲ್ಲ. ಓದಲು ಲೈಬ್ರೆರಿ ಹಾಗೂ ನೋಡಲು ಟಿವಿ ಹೊರತಾಗಿ ಬೇರೆ ಸೌಲಭ್ಯಗಳನ್ನು ನೀಡಿರಲಿಲ್ಲ.
ತಿಹಾರ್ ಜೈಲಿನ ಸೆಲ್ ನಂ. 7ರಲ್ಲಿ ಡಿಕೆಶಿ - ಚಿದಂಬರಂ ಉಭಯಕುಶಲೋಪರಿ !
ಆದರೆ ಡಿಕೆ ಶಿವಕುಮಾರ್ ಅವರಿಗೆ ಪ್ರತಿನಿತ್ಯ ಅವರ ಕುಟುಂಬದ ಸದಸ್ಯರ ಜೊತೆಗೆ ಫೋನ್ ಮೂಲಕ ಮಾತನಾಡಲು ಅವಕಾಶ ನೀಡಲಾಗಿತ್ತಂತೆ. ಪ್ರತಿದಿನ ಮೂರು ನಿಮಿಷಗಳ ಕಾಲ ಮನೆಮಂದಿ ಜೊತೆಗೆ ಡಿಕೆ ಶಿವಕುಮಾರ್ ಮಾತನಾಡುತ್ತಿದ್ದರಂತೆ. ಅಷ್ಟೇ ಅಲ್ಲದೆ ಜೈಲಿನಲ್ಲಿದ್ದಾಗ ನಂಜನಗೂಡಿನ ನಂಜುಂಡೇಶ್ವರನ ನೆನೆದು ತಲೆಮೇಲೆ ನಿತ್ಯ ಮಣ್ಣನ್ನು ಹಾಕಿಕೊಂಡು ಪ್ರಾರ್ಥಿಸುತ್ತಿದ್ದರಂತೆ.
ಡಿಕೆಶಿ ಭೇಟಿಮಾಡಲು ಬಂದಿದ್ದ ವ್ಯಕ್ತಿಯೊಬ್ಬರು ಮಣ್ಣನ್ನು ತಂದು ಕೊಟ್ಟಿದ್ದರಂತೆ. ಅವರು ಹೇಳಿದ ಹಾಗೆ ನಿತ್ಯ ಮಣ್ಣನ್ನು ತಲೆಗೆ ಹಾಕಿಕೊಂಡು ಪ್ರಾರ್ಥನೆ ಸಲ್ಲಿಸುತ್ತಿದ್ದರಂತೆ. ಇಷ್ಟೇ ಅಲ್ಲದೆ ತಿಹಾರ್ ಜೈಲಿನ ಆವರಣದೊಳಗೆ ಇದ್ದ ಈಶ್ವರನ ದೇವಸ್ಥಾನಕ್ಕೂ ಡಿಕೆಶಿ ನಿತ್ಯ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಜೈಲಿಂದ ಬಿಡುಗಡೆಗೊಂಡ ಬಳಿಕ ಮೈಸೂರು ಪ್ರವಾಸ ಕೈಗೊಂಡಿರುವ ಡಿಕೆಶಿ ಇದೇ ಮೊದಲ ಬಾರಿಗೆ ತಮ್ಮ ಜೈಲಿನ ನಿತ್ಯದ ಚಟುವಟಿಕೆಗಳು ಹೀಗಿದ್ದವು ಎಂಬುವುದನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.