ಆ್ಯಪ್ನಗರ

Telangana election resultತೆಲಂಗಾಣದಲ್ಲಿ ನಡೆಯದ ಡಿಕೆಶಿ ಮ್ಯಾಜಿಕ್‌

ತೆಲಂಗಾಣ ಚುನಾವಣೆ ಉಸ್ತುವಾರಿಗೆ ದೋಸ್ತಿ ಸರಕಾರದ ಪ್ರಭಾವಿ ಸಚಿವ ಡಿಕೆಶಿವಕುಮಾರ್‌ ಅವರನ್ನು ಕಾಂಗ್ರೆಸ್‌ ಹೈಕಮಾಂಡ್‌ ನಿಯೋಜಿಸಿತ್ತು...

Vijaya Karnataka 12 Dec 2018, 5:00 am
ಬೆಂಗಳೂರು : ತೆಲಂಗಾಣ ಚುನಾವಣೆ ಉಸ್ತುವಾರಿಗೆ ದೋಸ್ತಿ ಸರಕಾರದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಕಾಂಗ್ರೆಸ್‌ ಹೈಕಮಾಂಡ್‌ ನಿಯೋಜಿಸಿತ್ತು. ಆದರೆ, ತೆಲಂಗಾಣದಲ್ಲಿ ಡಿಕೆಶಿ ಮ್ಯಾಜಿಕ್‌ ನಡೆಯಲಿಲ್ಲ ಎನ್ನುವುದನ್ನು ಈ ಚುನಾವಣೆ ಫಲಿತಾಂಶ ಹೇಳಿದೆ.
Vijaya Karnataka Web dks1


ಟಿಆರ್‌ಎಸ್‌ನ ಸುನಾಮಿ ಹೊಡೆತಕ್ಕೆ ಸಿಲುಕಿದ ಕಾಂಗ್ರೆಸ್‌ ತೆಲಂಗಾಣದಲ್ಲಿ ಕೊಚ್ಚಿ ಹೋಗಿದೆ. ಕಾಂಗ್ರೆಸ್‌ನ ಮಿತ್ರಪಕ್ಷ ತೆಲಗುದೇಶಂ ಪಕ್ಷಕ್ಕೂ ತೀವ್ರ ಮುಖಂಭಂಗವಾಗಿದೆ. ಹಾಗಾಗಿ ಬಳ್ಳಾರಿ ಉಪ ಚುನಾವಣೆ ಶ್ರೇಯಸ್ಸಿನೊಂದಿಗೆ ತೆಲಂಗಾಣದ ಅಖಾಡ ಪ್ರವೇಶಿಸಿದ್ದ ಡಿಕೆಶಿ ಅವರಿಗೂ ನಿರಾಸೆಯಾಗುವಂತಾಗಿದೆ.

ಬಳ್ಳಾರಿ ಉಪ ಚುನಾವಣೆಯೂ ಸೇರಿದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಹಲವು ಬಾರಿ ಡಿಕೆಶಿ 'ಟ್ರಬಲ್‌ ಶೂಟರ್‌' ಪಾತ್ರ ನಿರ್ವಹಿಸಿದ್ದರು. ಸೋನಿಯಾ ಗಾಂಧಿ ನಿಕಟವರ್ತಿ ಅಹ್ಮದ್‌ ಪಟೇಲ್‌ ಗುಜರಾತ್‌ನಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಬೇಲಿ ಜಿಗಿತದ ಹಾದಿಯಲ್ಲಿದ್ದ ಅಲ್ಲಿನ ಕಾಂಗ್ರೆಸ್‌ ಶಾಸಕರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ರಕ್ಷಿಸುವುದರಲ್ಲೂ ಡಿಕೆಶಿ ಯಶಸ್ವಿಯಾಗಿದ್ದರು. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ರಚನೆಯಾಗುವಾಗಲೂ ಶಾಸಕರನ್ನು ತಮ್ಮ ಸರ್ಪಗಾವಲಿನಲ್ಲಿ ಇರಿಸಿಕೊಂಡಿದ್ದರು.

ಇದೇ ಕಾರಣದಿಂದ ಡಿಕೆಶಿ ಇನ್ನಷ್ಟು ಪ್ರಭಾವಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ತೆಲಂಗಾಣ ಕದನ ಅವರ ಅದೃಷ್ಟಕ್ಕೆ ಕೈಕೊಡುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ