ಆ್ಯಪ್ನಗರ

ನೋಟು ಅಮಾನ್ಯೀಕರಣದ ಅಕ್ರಮದಲ್ಲೂ ಸಚಿವ ಡಿಕೆಶಿ ಭಾಗಿ: ಇ.ಡಿ

ಜಲಸಂಪನ್ಮೂಲ ಸಚಿವ ಡಿಕೆ...

Vijaya Karnataka 13 Mar 2019, 5:00 am
ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ಆಪ್ತ ಸಚಿನ್‌ ನಾರಾಯಣ್‌ ಮತ್ತಿತರರ ವಿರುದ್ಧ ಅಪರಾಧಿಕ ಪಿತೂರಿ ಕುರಿತು ಸಾಕಷ್ಟು ಸಾಕ್ಷ್ಯವಿದೆ ಎಂದು ಜಾರಿ ನಿರ್ದೇಶನಾಲಯ ಹೈಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದೆ.
Vijaya Karnataka Web dkshivkumar


ಸಮನ್ಸ್‌ ಜಾರಿಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಸಚಿವ ಡಿ.ಕೆ. ಶಿವಕುಮಾರ್‌ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ಮನವಿ ಆಲಿಸುತ್ತಿರುವ ನ್ಯಾ.ಅರವಿಂದ್‌ ಕುಮಾರ್‌ ಅವರಿದ್ದ ಏಕಸದಸ್ಯಪೀಠ, ಮಂಗಳವಾರ ವಾದ ಆಲಿಸಿದ ಬಳಿಕ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

ಜಾರಿ ನಿರ್ದೇಶನಾಲಯದ ಪರ ಎಎಸ್‌ಜಿ ಪ್ರಭುಲಿಂಗ ನಾವದಗಿ ''ಹಣ ದುರ್ಬಳಕೆ ಕಾಯಿದೆ ಅಡಿ ಇನ್ನೂ ತನಿಖೆ ನಡೆಯುತ್ತಿದೆ. ಸದ್ಯಕ್ಕೆ 120 ಬಿ ಅಡಿ ಒಳಸಂಚು ಆರೋಪ ಹೊರಿಸಲಾಗಿದೆ. ತನಿಖೆಯ ವೇಳೆ ಇನ್ನೂ ಬೇರೆ ರೂಪದ ಅಪರಾಧಗಳು ಹೊರಬರಬಹುದು. ಆರೋಪಿ ಹಣ ದುರ್ಬಳಕೆ ಮಾತ್ರವಲ್ಲದೆ, ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಅಕ್ರಮವಾಗಿ ಹಳೆಯ ನೋಟುಗಳ ವಿನಿಮಯ ಕಾರ‍್ಯದಲ್ಲೂ ಸಹ ಭಾಗಿಯಾಗಿದ್ದರು, ''ಎಂದರು.

ಬೆಂಗಳೂರು, ದಿಲ್ಲಿ ಹೀಗೆ ಬೇರೆಡೆ ತಮ್ಮ ಜಾಲ ಹೊಂದಿರುವ ಆರೋಪಿಗಳಿಗೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್‌ ಸರಿ ಇದೆ. ಅವರ ವಿರುದ್ಧ ಸಾಕಷ್ಟು ಸಾಕ್ಷ್ಯವಿದೆ,'' ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ನ್ಯಾಯಪೀಠ, ''ಅಕ್ರಮ ಆಸ್ತಿ ಪ್ರಕರಣಗಳಲ್ಲಿ ಆದಾಯ ತೆರಿಗೆ ದಾಳಿ ನಡೆಸಿದ ಎಲ್ಲ ಪ್ರಕರಣಗಳಲ್ಲೂ ಇ.ಡಿ. ಪಿಎಂಎಲ್‌ ಎ ಅಡಿಯಲ್ಲಿ ಪ್ರತ್ಯೇಕ ಕೇಸ್‌ ದಾಖಲಿಸಿಕೊಳ್ಳುತ್ತದೆಯೇ, ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ,'' ಎಂದು ಪ್ರಶ್ನಿಸಿತು. ಅದಕ್ಕೆ ವಕೀಲರು, ಆ ಬಗ್ಗೆ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ತಿಳಿಸುವುದಾಗಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ