ಆ್ಯಪ್ನಗರ

ಡಿಕೆಶಿ ಶಕುನಿ:ಶ್ರೀರಾಮುಲು ಟಾಂಗ್‌

ಮಹಾಭಾರತದ ಶಕುನಿಯ ರೀತಿ ಮೈತ್ರಿ ಸರಕಾರ ಪತನವಾದ ನಂತರ ಇದಕ್ಕೆ ಕಾರಣರಾದವರು ಯಾರು ? ಎಂಬುದು ಕಾಂಗ್ರೆಸ್‌ ಮುಖಂಡರಿಗೆ ಗೊತ್ತಾಗುತ್ತದೆ ಎಂದು ಮಾಜಿ ...

Vijaya Karnataka 23 Jun 2019, 5:00 am
ಬೆಂಗಳೂರು: ಮಹಾಭಾರತದ ಶಕುನಿಯ ರೀತಿ ಮೈತ್ರಿ ಸರಕಾರ ಪತನವಾದ ನಂತರ ಇದಕ್ಕೆ ಕಾರಣರಾದವರು ಯಾರು ? ಎಂಬುದು ಕಾಂಗ್ರೆಸ್‌ ಮುಖಂಡರಿಗೆ ಗೊತ್ತಾಗುತ್ತದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web sriramulu


ಬಿಜೆಪಿ ಸೇರುವಂತೆ ತಮಗೆ ವಿಮಾನ ನಿಲ್ದಾಣದಲ್ಲಿ ಶ್ರೀರಾಮುಲು ಆಫರ್‌ ನೀಡಿದ್ದರು ಎಂದು ಸಚಿವ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ''ಮಹಾಭಾರತ ಯುದ್ಧದಲ್ಲಿ ಶಕುನಿ ಆಟ ಏನು ಎಂಬುದು ಕೊನೆಯಲ್ಲಿ ಗೊತ್ತಾಯಿತು. ಶಕುನಿ ಮಾಮಾನಿಂದಲೇ ಕೌರವರು ಯುದ್ಧದಲ್ಲಿ ಸೋತರು. ಅದೇ ರೀತಿ ರಾಜ್ಯದ ಮೈತ್ರಿ ಸರಕಾರವೂ ಸದ್ಯದಲ್ಲೇ ಪತನಗೊಳ್ಳಲಿದ್ದು, ಕಾಂಗ್ರೆಸ್‌ನ ಯಾವ ನಾಯಕ ಶಕುನಿ ಆಟ ಆಡಿದ ಎಂಬುದು ಕೊನೆಯಲ್ಲಿ ಗೊತ್ತಾಗುತ್ತದೆ. ಈ ಶಕುನಿ ಆಟ ಹೆಚ್ಚು ದಿನ ನಡೆಯುವುದಿಲ್ಲ,'' ಎಂದು ವ್ಯಂಗ್ಯವಾಡಿದ್ದಾರೆ.

'ನಾನು ಯಾರ ವಿರುದ್ಧವೂ ವೈಯಕ್ತಿವಾಗಿ ಟೀಕೆ ಮಾಡುವುದಿಲ್ಲ. ಕೆಲವರು ನೆಗೆಟಿವ್‌ ಪಬ್ಲಿಸಿಟಿ ಪಡೆದು ಬೀಗುತ್ತಾರೆ. ನನಗೆ ಅಂಥ ಯಾವುದೇ ಅಗತ್ಯವಿಲ್ಲ. ಬಳ್ಳಾರಿಯಲ್ಲಿ ನಾನೇ ಸುಪ್ರೀಂ ಎಂದು ಪೋಸು ಕೊಟ್ಟವರು ಈಗ ಮೂಲೆ ಸೇರಿದ್ದಾರೆ,''' ಎಂದು ಶ್ರೀರಾಮುಲು ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ