ಆ್ಯಪ್ನಗರ

ಎಲ್ಲರಿಗೂ ಎಣ್ಣೆ ಕುಡಿಸಲು ಮಂತ್ರಿಯಾಗಬೇಕಾ? - ಅಸಮಧಾನ ಹೊರಹಾಕಿದ ಎಂ.ಟಿ.ಬಿ

ಮೈತ್ರಿ ಸರಕಾರದಲ್ಲಿ ವಸತಿ ಸಚಿವ ಸ್ಥಾನ ತ್ಯಾಗ ಮಾಡಿ ಬಂದವನು ನಾನು. ವಸತಿ ಇಲಾಖೆಯಲ್ಲಾದರೆ ಬಡವರಿಗೆ ಮನೆ ಕಟ್ಟಿಸಿ ಕೊಡಬಹುದು. ಅಬಕಾರಿ ಖಾತೆ ತೆಗೆದುಕೊಂಡು ಏನು ಮಾಡಲಿ? ಎಂದು ಎಂಟಿಬಿ ನಾಗರಾಜ್‌ ಪ್ರಶ್ನಿಸಿದ್ದಾರೆ.

Vijaya Karnataka 21 Jan 2021, 11:25 pm
ಬೆಂಗಳೂರು : ಎಲ್ಲರಿಗೂ ಎಣ್ಣೆ ಕುಡಿಸಲು ನಾನು ಮಂತ್ರಿಯಾಗಬೇಕಾ? - ಹೀಗಂತ ಖಾತೆ ಹಂಚಿಕೆ ಬಳಿಕ ಅಸಮಧಾನ ವ್ಯಕ್ತಪಡಿಸಿದವರು ಸಚಿವ ಎಂಟಿಬಿ ನಾಗರಾಜ್.
Vijaya Karnataka Web MTB Nagaraj


ಅಬಕಾರಿ ಖಾತೆ ನಿರ್ವಹಿಸಲು ಸ್ಪಷ್ಟವಾಗಿ ನಿರಾಕರಿಸಿದ ಅವರು, "ಎಲ್ಲರಿಗೂ ಎಣ್ಣೆ ಕುಡಿಸಲು ನಾನು ಮಂತ್ರಿಯಾಗಬೇಕಾ? ಮೈತ್ರಿ ಸರಕಾರದಲ್ಲಿ ವಸತಿ ಸಚಿವನ ಸ್ಥಾನ ತ್ಯಾಗ ಮಾಡಿ ಬಂದವನು ನಾನು. ವಸತಿ ಇಲಾಖೆಯಲ್ಲಾದರೆ ಬಡವರಿಗೆ ಮನೆ ಕಟ್ಟಿ ಕೊಡಬಹುದು. ಅಬಕಾರಿ ಖಾತೆ ತೆಗೆದುಕೊಂಡು ಏನು ಮಾಡಲಿ?" ಎನ್ನುವ ಮೂಲಕ ವಸತಿ ಖಾತೆಯನ್ನೇ ಅಪೇಕ್ಷಿಸಿರುವ ಬಗ್ಗೆ ಪರೋಕ್ಷವಾಗಿ ಹೇಳಿದರು.

ಈ ಮಧ್ಯೆ ಸಿಎಂ ತುಮಕೂರಿನಿಂದ ಬಂದ ಬಳಿಕ ಸಚಿವರಾದ ಆರ್‌ ಅಶೋಕ್‌, ಬಸವರಾಜ್‌ ಬೊಮ್ಮಾಯಿ ಅವರು ಎಂ.ಟಿ.ಬಿ.ನಾಗರಾಜ್‌ ಅವರನ್ನು ಭೇಟಿ ಮಾಡಿಸಿದರು.

ರಾಜಕಾರಣದಲ್ಲಿ ಸಮಯಕ್ಕೆ ತಕ್ಕಂತೆ ಬದಲಾವಣೆ ಸಹಜ: ಖಾತೆ ಕ್ಯಾತೆಗೆ ಬಸವರಾಜ್‌ ಬೊಮ್ಮಾಯಿ ಉತ್ತರ

ನಂತರ ಅಶೋಕ್‌, ಬೊಮ್ಮಾಯಿ ಜತೆಗೆ ಹೊರಗೆ ಬಂದ ಎಂ.ಟಿ.ಬಿ. ನಾಗರಾಜ್‌, "ಯಾವುದೇ ಅಸಮಾಧಾನವಿಲ್ಲ. ಕೊಟ್ಟ ಜವಾಬ್ದಾರಿ ನಿರ್ವಹಿಸಲಾಗುವುದು," ಎಂದರು. ಆದರೆ, ಅಶೋಕ್‌ ಮತ್ತು ಬೊಮ್ಮಾಯಿ ಆಚೆ ಹೋದ ಬಳಿಕ ಮತ್ತೆ ಮಾಧ್ಯಮದ ಮುಂದೆ ಬಂದ ನಾಗರಾಜ್‌, ಅಬಕಾರಿ ಖಾತೆ ಒಲ್ಲೆಯೆಂದರು. 'ಈ ವಿಚಾರವನ್ನು ಸಿಎಂ ಗಮನಕ್ಕೂ ತರಲಾಗಿದೆ,’’ ಎಂದು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ