ಬೆಂಗಳೂರು: ಮೈಷುಗರ್ ಕಾರ್ಖಾನೆ ಜತೆ ಮಂಡ್ಯ ಜಿಲ್ಲೆಯ ಜನರಿಗೆ ಭಾವನಾತ್ಮಕ ಸಂಬಂಧ ಇದೆ. ಈ ನಿಟ್ಟಿನಲ್ಲಿ ಮೈಷುಗರ್ ಖಾಸಗೀಕರಣ ಮಾಡಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಮೈಷುಗರ್ ಕಾರ್ಖಾನೆ ವಿಚಾರವಾಗಿ ವಿಧಾನಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಕಾರ್ಖಾನೆ ಖಾಸಗೀಕರಣ ಮಾಡಬಾರದು ಎಂಬುದು ಮಂಡ್ಯದ ಜನರ ಒತ್ತಾಯವಾಗಿದೆ. ಇದಕ್ಕಾಗಿ ಮಂಡ್ಯ ಜಿಲ್ಲೆಯ ರೈತರು ಹೋರಾಟ ನಡೆಸುತ್ತಿದ್ದಾರೆ. ನಾನು ಸಿಎಂ ಆಗಿದ್ದಾಗ ಈ ಸಕ್ಕರೆ ಕಾರ್ಖಾನೆಗೆ 145 ಕೋಟಿ ರೂ. ಕೊಟ್ಟಿದ್ದೆ ಎಂದರು.
ಕಾರ್ಖಾನೆಯಲ್ಲಿ 235 ಎಕರೆ ಆಸ್ತಿ ಇದೆ. ಅದನ್ನು ಅಭಿವೃದ್ಧಿಪಡಿಸಿ ಆದಾಯ ಬರುವಂತೆ ಮಾಡಿದರೆ ಸಕ್ಕರೆ ಕಾರ್ಖಾನೆಗೆ ಅನುಕೂಲವಾಗುತ್ತದೆ. ಜೊತೆಗೆ ಕೋ ಜನರೇಷನ್ ಮಾಡುವ ಪ್ರಸ್ತಾಪ ಇದೆ. ಜೊತೆಗೆ ಡಿಸ್ಟಿಲರಿ ಮಾಡಬೇಕು ಎಂಬ ಅಭಿಪ್ರಾಯ ಇದೆ.
ಇದರಿಂದ ಕಾರ್ಖಾನೆ ಲಾಭದಾಯಕ ಮಾಡಲು ಸಾಧ್ಯ. ಅಷ್ಟೇ ಅಲ್ಲದೆ ಹೊಸತಾಗಿ ಯಂತ್ರೋಪಕರಣಗಳು ಬೇಕಿವೆ. ಹೆಚ್ಚು ಇಳುವರಿ ಬರುವ ಕಬ್ಬು ಬೆಳೆಯಬೇಕು ಎಂದರು.
ಮೈಷುಗರ್ ಬಗ್ಗೆ ಭಾವನಾತ್ಮಕ ಸಂಬಂಧ ಇರುವುದಿಂದ ಖಾಸಗೀಕರಣ ಮಾಡಬಾರದು. ಹಾಗಾದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆಯನ್ನೂ ನೀಡಿದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ಇರುವ ಕಾರ್ಖಾನೆಗೆ ಸಂಬಂಧಿಸಿದ ಜಮೀನಿನಲ್ಲಿ ಮಾಲ್ ಅಥವಾ ಕಾಂಪ್ಲೆಕ್ಸ್ ಮಾಡಿ, ಈ ಮೂಲಕ ಆದಾಯ ಬರುವಂತೆ ಮಾಡಿದರೆ ಲಾಭದಾಯಕ ಮಾಡಲು ಸಾಧ್ಯ ಎಂದು ಮಾಜಿ ಸಿಎಂ ಅಭಿಪ್ರಾಯಪಟ್ಟರು.
ಮೈಷುಗರ್ ಕಾರ್ಖಾನೆಯ ನಿರ್ಲಕ್ಷ್ಯದ ಬಗ್ಗೆ ಡಾ. ಕೆ ಅನ್ನದಾನಿ ಮಾತನಾಡಿ, ಮೈಷುಗರ್ ಕಾರ್ಖಾನೆ 1933ರಲ್ಲಿ ಆರಂಭವಾಗಿದೆ. ಏಷ್ಯಾದಲ್ಲಿ ಮೊದಲ ಬಾರಿ ಆರಂಭಗೊಂಡ ಈ ಕಾರ್ಖಾನೆ ಉಳಿಸಿಕೊಳ್ಳಲು ಹೋರಾಟ ನಡೆಯುತ್ತಿದೆ. ಸರ್ಕಾರದ ಸಾಮ್ಯದಲ್ಲಿ ಕಾರ್ಖಾನೆ ಮುನ್ನಡೆಸಲು ಹೋರಾಟ ಮಾಡುತ್ತಿದ್ದೇವೆ. 65 ಸಕ್ಕರೆ ಕಾರ್ಖಾನೆಗಳು ಇವೆ, ಈ ಪೈಕಿ ಮೈಷುಗರ್ ಮಾತ್ರ ಸರ್ಕಾರದ ಸಾಮ್ಯದಲ್ಲಿ ಇದೆ. ಇದನ್ನು ಯಾಕೆ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.
2,000 ಕೋಟಿ ಬೆಲೆಬಾಳುವ ಆಸ್ತಿಯನ್ನು ಮೈಷುಗರ್ ಕಾರ್ಖಾನೆ ಹೊಂದಿದೆ. ಕಾರ್ಖಾನೆ ಯಾಕೆ ನಷ್ಟದಲ್ಲಿ ಇದೆ? ಇದಕ್ಕೆ ಕಾರಣ ಏನು? ಯಾರಿಗೂ ಲಾಭದಲ್ಲಿ ನಡೆಸಲು ಸಾಧ್ಯವಾಗಿಲ್ವಾ? ಎಂದ ಅವರು ಮೈಷುಗರ್ ಕಾರ್ಖಾನೆ ಮಂಡ್ಯದ ಜನರ ಸ್ವಾಭಿಮಾನದ ಪ್ರತೀಕ ಎಂದು ಹೇಳಿದರು.
ರಕ್ತಪಾತದ ಎಚ್ಚರಿಕೆ ಕೊಟ್ಟ ಸುರೇಶ್ ಗೌಡ
ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಮಾತನಾಡಿ, ಯಾವುದೇ ಕಾರಣಕ್ಕೂ ಮೈಷುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದು. ಬದಲಾಗಿ ಸರ್ಕಾರದ ಸಾಮ್ಯದಲ್ಲಿ ನಡೆಯಬೇಕು. ಒಂದು ವೇಳೆ ಖಾಸಗೀಕರಣ ಮಾಡಿದರೆ ರಕ್ತಪಾತವಾಗುತ್ತದೆ ಎಂದು ಸರ್ಕಾರಕ್ಕೆ ಕಟು ಎಚ್ಚರಿಕೆ ನೀಡಿದರು.
ಇದಕ್ಕೆ ಉತ್ತರ ನೀಡಿದ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಈ ಸಂಬಂಧ ಒಂದು ತಿಂಗಳಲ್ಲಿ ಎರಡು ಬಾರಿ ಕೇಂದ್ರ ಸಕ್ಕರೆ ಸಚಿವರನ್ನು ಭೇಟಿ ಮಾಡಿ ಬಂದಿದ್ದೇನೆ. ರೈತರ ಹಿತದೃಷ್ಟಿಯಿಂದ ಕಾರ್ಖಾನೆಯನ್ನು ಮತ್ತೆ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಕಾರ್ಖಾನೆ ಮತ್ತೆ ಪ್ರಾರಂಭ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಕಾರ್ಖಾನೆಯಲ್ಲಿ 235 ಎಕರೆ ಆಸ್ತಿ ಇದೆ. ಅದನ್ನು ಅಭಿವೃದ್ಧಿಪಡಿಸಿ ಆದಾಯ ಬರುವಂತೆ ಮಾಡಿದರೆ ಸಕ್ಕರೆ ಕಾರ್ಖಾನೆಗೆ ಅನುಕೂಲವಾಗುತ್ತದೆ. ಜೊತೆಗೆ ಕೋ ಜನರೇಷನ್ ಮಾಡುವ ಪ್ರಸ್ತಾಪ ಇದೆ. ಜೊತೆಗೆ ಡಿಸ್ಟಿಲರಿ ಮಾಡಬೇಕು ಎಂಬ ಅಭಿಪ್ರಾಯ ಇದೆ.
ಇದರಿಂದ ಕಾರ್ಖಾನೆ ಲಾಭದಾಯಕ ಮಾಡಲು ಸಾಧ್ಯ. ಅಷ್ಟೇ ಅಲ್ಲದೆ ಹೊಸತಾಗಿ ಯಂತ್ರೋಪಕರಣಗಳು ಬೇಕಿವೆ. ಹೆಚ್ಚು ಇಳುವರಿ ಬರುವ ಕಬ್ಬು ಬೆಳೆಯಬೇಕು ಎಂದರು.
ಮೈಷುಗರ್ ಬಗ್ಗೆ ಭಾವನಾತ್ಮಕ ಸಂಬಂಧ ಇರುವುದಿಂದ ಖಾಸಗೀಕರಣ ಮಾಡಬಾರದು. ಹಾಗಾದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆಯನ್ನೂ ನೀಡಿದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ಇರುವ ಕಾರ್ಖಾನೆಗೆ ಸಂಬಂಧಿಸಿದ ಜಮೀನಿನಲ್ಲಿ ಮಾಲ್ ಅಥವಾ ಕಾಂಪ್ಲೆಕ್ಸ್ ಮಾಡಿ, ಈ ಮೂಲಕ ಆದಾಯ ಬರುವಂತೆ ಮಾಡಿದರೆ ಲಾಭದಾಯಕ ಮಾಡಲು ಸಾಧ್ಯ ಎಂದು ಮಾಜಿ ಸಿಎಂ ಅಭಿಪ್ರಾಯಪಟ್ಟರು.
ಮೈಷುಗರ್ ಕಾರ್ಖಾನೆಯ ನಿರ್ಲಕ್ಷ್ಯದ ಬಗ್ಗೆ ಡಾ. ಕೆ ಅನ್ನದಾನಿ ಮಾತನಾಡಿ, ಮೈಷುಗರ್ ಕಾರ್ಖಾನೆ 1933ರಲ್ಲಿ ಆರಂಭವಾಗಿದೆ. ಏಷ್ಯಾದಲ್ಲಿ ಮೊದಲ ಬಾರಿ ಆರಂಭಗೊಂಡ ಈ ಕಾರ್ಖಾನೆ ಉಳಿಸಿಕೊಳ್ಳಲು ಹೋರಾಟ ನಡೆಯುತ್ತಿದೆ. ಸರ್ಕಾರದ ಸಾಮ್ಯದಲ್ಲಿ ಕಾರ್ಖಾನೆ ಮುನ್ನಡೆಸಲು ಹೋರಾಟ ಮಾಡುತ್ತಿದ್ದೇವೆ. 65 ಸಕ್ಕರೆ ಕಾರ್ಖಾನೆಗಳು ಇವೆ, ಈ ಪೈಕಿ ಮೈಷುಗರ್ ಮಾತ್ರ ಸರ್ಕಾರದ ಸಾಮ್ಯದಲ್ಲಿ ಇದೆ. ಇದನ್ನು ಯಾಕೆ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.
2,000 ಕೋಟಿ ಬೆಲೆಬಾಳುವ ಆಸ್ತಿಯನ್ನು ಮೈಷುಗರ್ ಕಾರ್ಖಾನೆ ಹೊಂದಿದೆ. ಕಾರ್ಖಾನೆ ಯಾಕೆ ನಷ್ಟದಲ್ಲಿ ಇದೆ? ಇದಕ್ಕೆ ಕಾರಣ ಏನು? ಯಾರಿಗೂ ಲಾಭದಲ್ಲಿ ನಡೆಸಲು ಸಾಧ್ಯವಾಗಿಲ್ವಾ? ಎಂದ ಅವರು ಮೈಷುಗರ್ ಕಾರ್ಖಾನೆ ಮಂಡ್ಯದ ಜನರ ಸ್ವಾಭಿಮಾನದ ಪ್ರತೀಕ ಎಂದು ಹೇಳಿದರು.
ರಕ್ತಪಾತದ ಎಚ್ಚರಿಕೆ ಕೊಟ್ಟ ಸುರೇಶ್ ಗೌಡ
ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಮಾತನಾಡಿ, ಯಾವುದೇ ಕಾರಣಕ್ಕೂ ಮೈಷುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದು. ಬದಲಾಗಿ ಸರ್ಕಾರದ ಸಾಮ್ಯದಲ್ಲಿ ನಡೆಯಬೇಕು. ಒಂದು ವೇಳೆ ಖಾಸಗೀಕರಣ ಮಾಡಿದರೆ ರಕ್ತಪಾತವಾಗುತ್ತದೆ ಎಂದು ಸರ್ಕಾರಕ್ಕೆ ಕಟು ಎಚ್ಚರಿಕೆ ನೀಡಿದರು.
ಇದಕ್ಕೆ ಉತ್ತರ ನೀಡಿದ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಈ ಸಂಬಂಧ ಒಂದು ತಿಂಗಳಲ್ಲಿ ಎರಡು ಬಾರಿ ಕೇಂದ್ರ ಸಕ್ಕರೆ ಸಚಿವರನ್ನು ಭೇಟಿ ಮಾಡಿ ಬಂದಿದ್ದೇನೆ. ರೈತರ ಹಿತದೃಷ್ಟಿಯಿಂದ ಕಾರ್ಖಾನೆಯನ್ನು ಮತ್ತೆ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಕಾರ್ಖಾನೆ ಮತ್ತೆ ಪ್ರಾರಂಭ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.