ಆ್ಯಪ್ನಗರ

ಕೊಡಗಿಗೆ ತಲಾ 25 ಲಕ್ಷ ದೇಣಿಗೆ ಕೊಡಲು ಶಾಸಕರಿಗೆ ಪತ್ರ

ಮಹಾಮಳೆ, ಭೂಕುಸಿತದಿಂದ ಹಾನಿಗೊಳಗಾಗಿರುವ ಕೊಡಗು ಪುನರ್‌ ನಿರ್ಮಾಣಕ್ಕಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ 25 ಲಕ್ಷ ರೂ. ದೇಣಿಗೆ ನೀಡುವಂತೆ ಎಲ್ಲ ಶಾಸಕರಿಗೆ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಮನವಿ ಮಾಡಿದ್ದಾರೆ.

Vijaya Karnataka 1 Sep 2018, 8:49 am
ಬೆಂಗಳೂರು: ಮಹಾಮಳೆ, ಭೂಕುಸಿತದಿಂದ ಹಾನಿಗೊಳಗಾಗಿರುವ ಕೊಡಗು ಪುನರ್‌ ನಿರ್ಮಾಣಕ್ಕಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ 25 ಲಕ್ಷ ರೂ. ದೇಣಿಗೆ ನೀಡುವಂತೆ ಎಲ್ಲ ಶಾಸಕರಿಗೆ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಮನವಿ ಮಾಡಿದ್ದಾರೆ.
Vijaya Karnataka Web kodagu


ಶಾಸಕರು ಕ್ಷೇತ್ರದ ಭೌಗೋಳಿಕ ವ್ಯಾಪ್ತಿ ಮೀರಿ ತಮ್ಮ ಪ್ರದೇಶಾಭಿವೃದ್ಧಿ ನಿಧಿ ಹಣವನ್ನು ವೆಚ್ಚ ಮಾಡಲು ಸಂಬಂಧಪಟ್ಟ ನಿಯಮಾವಳಿಯಲ್ಲಿ ಅಗತ್ಯ ತಿದ್ದುಪಡಿ ಮಾಡುವಂತೆ ಅವರು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸಲಹೆ ಮಾಡಿದ್ದಾರೆ.

ಶಾಸಕರಿಗೆ ಪತ್ರ ಬರೆದಿರುವ ಸ್ಪೀಕರ್‌ ''ದೇಶಕ್ಕೆ ಇಬ್ಬರು ಮಹಾದಂಡ ನಾಯಕರನ್ನು ಕೊಡುಗೆಯಾಗಿ ನೀಡಿದ ಕೊಡಗು ಜಿಲ್ಲೆ ಪ್ರಸ್ತುತ ಪ್ರಕೃತಿ ವಿಕೋಪದಿಂದ ನಲುಗಿಹೋಗಿದೆ. ಜಿಲ್ಲೆಯ ಜನರ ನೋವು ಹಂಚಿಕೊಳ್ಳುವುದು ನಮ್ಮ ಕರ್ತವ್ಯ. ರಾಜ್ಯದ ಎಲ್ಲ ಭಾಗಗಳ ಜನರ ನೋವಿಗೆ ಸ್ಪಂದಿಸಬೇಕಾದ ಸಂವಿಧಾನಿಕ ಹೊಣೆ ನಮ್ಮ ಮೇಲಿದ್ದು, ಎಲ್ಲ ಶಾಸಕರಲ್ಲೂ ಮಾನವೀಯ ಗುಣವಿದೆ. ಹೀಗಾಗಿ, ಕೊಡಗಿನ ಜನರಿಗೆ ಸಾಮಾನ್ಯ ಬದುಕು ಕಟ್ಟಿಕೊಡಲು ಎಲ್ಲ ಶಾಸಕರು ತಮ್ಮ ನಿಧಿಯಿಂದ ತಲಾ 25 ಲಕ್ಷ ರೂ.ಗಳನ್ನು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಬೇಕು'' ಎಂದು ಮನವಿ ಮಾಡಿದ್ದಾರೆ.

ಮನವಿ ಆಧರಿಸಿ ಪತ್ರ

ಕೊಡಗು ಜಿಲ್ಲೆಯನ್ನು ಪ್ರತಿನಿಧಿಸುವ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌ ಅವರು ಸಹೋದ್ಯೋಗಿ ಶಾಸಕರಿಂದ ದೇಣಿಗೆ ಕೊಡಿಸುವಂತೆ ಮನವಿ ಮಾಡಿ ಸ್ಪೀಕರ್‌ ರಮೇಶ್‌ಕುಮಾರ್‌ ಅವರಿಗೆ ಮನವಿ ಮಾಡಿದ್ದರು.

''ಜಿಲ್ಲೆಯಲ್ಲಿ ಪೃಕೃತಿ ವಿಕೋಪದಿಂದ ಕುಸಿದ ಮನೆ, ಹಾಳಾದ ರಸ್ತೆ ಸರಿಪಡಿಸಿ ಜಿಲ್ಲೆಯ ಪುನರ್‌ ನಿರ್ಮಾಣಕ್ಕೆ ಕೋಟ್ಯಾಂತರ ಅನುದಾನದ ಅಗತ್ಯವಿದ್ದು, ಎಲ್ಲ ಶಾಸಕರು ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ 50 ಲಕ್ಷ ರೂ. ದೇಣಿಗೆ ಕೊಡಬೇಕು'' ಎಂದು ಕೋರಿದ್ದರು. ಈ ಮನವಿ ಆಧರಿಸಿ ಸಭಾಧ್ಯಕ್ಷರು ಈ ಪತ್ರಗಳನ್ನು ಬರೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ