ಆ್ಯಪ್ನಗರ

ನೋಟಿಸ್‌ಗೆ ಡೋಂಟ್‌ಕೇರ್‌ ಎಂದ ಯತ್ನಾಳ್‌, ಬಿಎಸ್‌ವೈ ಪರ ಬ್ಯಾಟಿಂಗ್‌ ನಿರಂತರ

ಕಲಾಪಕ್ಕೆ ಮಾಧ್ಯಮ ನಿರ್ಬಂಧಿಸಿದ ವಿಚಾರವನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದಾಗ ಸಚಿವ ಮಾಧುಸ್ವಾಮಿ ಆಕ್ಷೇಪಿಸಿದರು. ಆ ಸಂದರ್ಭದಲ್ಲಿ ಯತ್ನಾಳ್‌ ಸಿದ್ದರಾಮಯ್ಯ ನಿಲುವುನ್ನು ಬೆಂಬಲಿಸಿದರು.

Vijaya Karnataka 12 Oct 2019, 9:01 pm

ಬೆಂಗಳೂರು: "ಐ ಆ್ಯಮ್‌ ರೈಟ್‌ ಮ್ಯಾನ್‌. ಯಾರಿಗೂ ಹೆದರಲ್ಲ. ಇನ್ನೂ ಮೂರೂವರೆ ವರ್ಷ ಯಡಿಯೂರಪ್ಪ ಪರ ಬ್ಯಾಟಿಂಗ್‌ ಮಾಡೋದೆ..." ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.
Vijaya Karnataka Web basanagouda patil yatnal


ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಬಿಜೆಪಿ ಶಿಸ್ತು ಸಮಿತಿಯ ನೋಟಿಸ್‌ ಪಡೆದಿರುವ ಯತ್ನಾಳ್‌ ವಿಧಾನಸಭೆಯಲ್ಲಿ ಶನಿವಾರ ಮತ್ತೊಮ್ಮೆ ತಮ್ಮ ದಿಟ್ಟ ನಿಲುವು ಪ್ರದರ್ಶಿಸಿದ್ದಾರೆ.

ಕಲಾಪಕ್ಕೆ ಮಾಧ್ಯಮ ನಿರ್ಬಂಧಿಸಿದ ವಿಚಾರವನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದಾಗ ಸಚಿವ ಮಾಧುಸ್ವಾಮಿ ಆಕ್ಷೇಪಿಸಿದರು. ಆ ಸಂದರ್ಭದಲ್ಲಿ ಯತ್ನಾಳ್‌ ಸಿದ್ದರಾಮಯ್ಯ ನಿಲುವುನ್ನು ಬೆಂಬಲಿಸಿದರು.

ವಿಧಾನಸಭೆಯಲ್ಲಿ ಸಿಎಂ-ಸಿದ್ದು ಕುಚುಕೂ; ಬಿಎಸ್‌ವೈ ಇನ್ನು ಗುಡುಗಲ್ಲ, ಮಿಂಚಷ್ಟೇ..!

ಇದರಿಂದ ಖುಷಿಯಾದ ಸಿದ್ದರಾಮಯ್ಯ "ಯತ್ನಾಳ್‌ ಯಾವಾಗಲೂ ರೈಟ್‌ ಟ್ರ್ಯಾಕ್‌ನಲ್ಲೇ ಇರ್ತಾರೆ. ಆದರೆ, ರೈಟ್‌ ಮ್ಯಾನ್‌ ಇನ್‌ ದಿ ರಾಂಗ್‌ ಪಾರ್ಟಿ. ನಿಮ್ಮ ಚಿಂತನೆ, ಮಾತುಗಳೆಲ್ಲಾ ಪ್ರಗತಿಪರ," ಎಂದು ಪ್ರಶಂಸಿಸಿದರು.

ಇದಕ್ಕೆ ಯತ್ನಾಳ್‌ "ಬಿಜೆಪಿಯಿಂದ ನನ್ನನ್ನು ಆದಷ್ಟು ಬೇಗ ಹೊರಹಾಕಿಸಬೇಕು ಎಂದು ತೀರ್ಮಾನ ಮಾಡಿದ್ದೀರಾ?," ಎಂದರು. "ಬಿಜೆಪಿಯಿಂದ ಹೊರಹಾಕಿದ್ರೂ ಡೋಂಟ್‌ ಕೇರ್‌ ಅಂದಿದ್ದೀರಿ. ನೀವು ಬಿಎಸ್‌ವೈ ಪರ ಬ್ಯಾಟಿಂಗ್‌ ಮುಂದುವರಿಸಿ'' ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ