ಆ್ಯಪ್ನಗರ

ಪೋಷಕರೇ ಎಚ್ಚರ! ಕೊರೊನಾ ಅಬ್ಬರದಲ್ಲಿ ಮಕ್ಕಳ ಲಸಿಕೆ ಮರೀಬೇಡಿ

ಕೋವಿಡ್‌ ಮೂರನೇ ಅಲೆ ಮಕ್ಕಳನ್ನು ಬಾಧಿಸುತ್ತದೆ ಎಂಬ ಭಯ ಹಾಗೂ ಕೋವಿಡ್‌ ಲಸಿಕೆ ಪಡೆಯುವ ಭರಾಟೆಯಲ್ಲಿ ಪೋಷಕರು ಚಿಕ್ಕ ಮಕ್ಕಳಿಗೆ ಕಾಲಕಾಲಕ್ಕೆ ನೀಡಬೇಕಿರುವ ಲಸಿಕೆ ಬಗ್ಗೆ ಮೈ ಮರೆಯುವ ಅಪಾಯ ಹೆಚ್ಚಿದೆ.

Vijaya Karnataka 5 Jul 2021, 4:35 pm
ಆರ್‌. ಶ್ರೀಧರ್‌ ರಾಮನಗರ
Vijaya Karnataka Web child immunization vaccine

ಕೋವಿಡ್‌ ಮೂರನೇ ಅಲೆ ಮಕ್ಕಳನ್ನು ಬಾಧಿಸುತ್ತದೆ ಎಂಬ ಭಯ ಹಾಗೂ ಕೋವಿಡ್‌ ಲಸಿಕೆ ಪಡೆಯುವ ಭರಾಟೆಯಲ್ಲಿ ಪೋಷಕರು ಚಿಕ್ಕ ಮಕ್ಕಳಿಗೆ ಕಾಲಕಾಲಕ್ಕೆ ನೀಡಬೇಕಿರುವ ಲಸಿಕೆ ಬಗ್ಗೆ ಮೈ ಮರೆಯುವ ಅಪಾಯ ಹೆಚ್ಚಿದೆ.

ಯಾವುದೇ ಕಾರಣಕ್ಕೂ ಚಿಕ್ಕ ಮಕ್ಕಳಿರುವ ಪೋಷಕರು ತಮ್ಮ ಮಕ್ಕಳಿಗೆ ಹುಟ್ಟಿನಿಂದ ಹದಿನಾರು ವರ್ಷದವರೆಗೆ ಹಾಕಿಸಬೇಕಿರುವ ಲಸಿಕೆಗಳನ್ನು ತಪ್ಪಿಸಬಾರದು ಎಂದು ಆರೋಗ್ಯ ತಜ್ಞರು ಕಿವಿ ಮಾತು ಹೇಳಿದ್ದಾರೆ. ಮಕ್ಕಳಿಗೆ 16 ವರ್ಷದವರೆಗೆ ನಾನಾ ರೀತಿ ಲಸಿಕೆಗಳನ್ನು ನೀಡಬೇಕಿದೆ. ಇವುಗಳಲ್ಲಿ ಒಂದು ತಪ್ಪಿದರೂ, ಭವಿಷ್ಯದಲ್ಲಿ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಸಕಾಲದಲ್ಲಿ ಲಸಿಕೆ ಕೊಡಿಸುವುದನ್ನು ತಪ್ಪಿಸಬಾರದು ಎನ್ನುತ್ತಾರೆ ಆರ್‌ಸಿಎಚ್‌ ಅಧಿಕಾರಿ ಡಾ.ಪದ್ಮ.

3ನೇ ಅಲೆ ತಡೆಗೆ ಚಿತ್ರದುರ್ಗ ಜಿಲ್ಲಾಡಳಿತದ ಸಿದ್ಧತಾ ಕ್ರಮಗಳಿಗೆ ಮೆಚ್ಚುಗೆ

ಅನಗತ್ಯ ಭಯ ಬೇಡ: ಮಕ್ಕಳಿಗೆ ಕೋವಿಡ್‌ನಿಂದ ಅಪಾಯ ಎದುರಾಗುತ್ತದೆ ಎಂಬ ಅನಗತ್ಯ ಭಯ ಬೇಡ. ಪ್ರತಿ ತಿಂಗಳು ರಾಜ್ಯದಲ್ಲಿ ಕನಿಷ್ಠ 65 ಸಾವಿರ ಮಕ್ಕಳು ಜನಿಸುತ್ತಿದ್ದಾರೆ. ಏಪ್ರಿಲ್‌ ತಿಂಗಳಿನಲ್ಲಿ ರಾಮನಗರ ಜಿಲ್ಲೆಯೊಂದರಲ್ಲಿಯೇ 772 ಮಕ್ಕಳು ಜನಿಸಿದ್ದಾರೆ. ಕೋವಿಡ್‌ 2ನೇ ಅಲೆಯಲ್ಲಿ 1 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಕೋವಿಡ್‌ ಸೋಂಕು ತಗುಲಿತ್ತು. ಈ ಪೈಕಿ ಒಂದೇ ಒಂದು ಮಗು ಮಾತ್ರ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದೆ.

ಕೋವಿಡ್ ಕಾಲದಲ್ಲಿ ಮಕ್ಕಳೇ ಸ್ಟ್ರಾಂಗು ಗುರೂ..! 3ನೇ ಅಲೆ ಭಯ ಬೇಡವೇ ಬೇಡ..!

ಉಳಿದ ಎಲ್ಲಾ ಮಕ್ಕಳೂ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಆದ್ದರಿಂದ ಸಮೀಪದ ಆರೋಗ್ಯ ಕೇಂದ್ರಕ್ಕೆ ಮಕ್ಕಳೊಂದಿಗೆ ತೆರಳಿದರೆ ಅಲ್ಲಿನ ಸಂಪರ್ಕದಿಂದ ಮಕ್ಕಳಿಗೆ ಕೊರೊನಾ ಬರಬಹುದೆಂಬ ಆತಂಕ ಪಡುವ ಅಗತ್ಯವಿಲ್ಲ ಎನ್ನುತ್ತಾರೆ ಅವರು. ಕಾಲಕಾಲದ ಲಸಿಕೆಗಳು ಮಕ್ಕಳನ್ನು ಪೋಲಿಯೊ, ಸಿಡುಬು, ದಡಾರ, ಕ್ಷಯ ಮತ್ತಿತರ ರೋಗಗಳಿಂದ ರಕ್ಷಿಸುವುದರಿಂದ ಅದರ ಬಗ್ಗೆ ಮೈಮರೆಯಬಾರದು ಎನ್ನುತ್ತಾರೆ ವೈದ್ಯರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ