ಆ್ಯಪ್ನಗರ

ಪತ್ನಿ ಪೀಡಿತನಿಂದ ಅರಳಿ ಮರಕ್ಕೆ ವಟ ಸಾವಿತ್ರಿ ಪೂಜೆ!

ಯಾವ ಜನ್ಮದಲ್ಲೂ ಇಂಥ ಹೆಂಡತಿ ಬೇಡ ಎಂದು ಮೊರೆ ಇಟ್ಟ ಪತಿ

Vijaya Karnataka Web 27 Jun 2018, 9:45 pm
ಚಿಕ್ಕೋಡಿ: ವಟ ಸಾವಿತ್ರಿ ಹುಣ್ಣಿಮೆ ನಿಮಿತ್ತ ಮಹಿಳೆಯರು ಪತಿಗೆ ಆಯುರಾರೋಗ್ಯ ಹಾಗೂ ತಮಗೆ ಪ್ರತಿ ಜನ್ಮದಲ್ಲೂ ಇದೇ ಗಂಡ ಸಿಗಬೇಕೆಂದು ಅರಳಿ ಮರಕ್ಕೆ ಪೂಜೆ ಮಾಡಿ, ಪ್ರದಕ್ಷಿಣೆ ಹಾಕಿ, ಗಿಡಕ್ಕೆ ದಾರ ಕಟ್ಟುವುದು ಸಂಪ್ರದಾಯ. ಆದರೆ, ಇಲ್ಲೊಬ್ಬರು ತಮಗೆ ಯಾವ ಜನ್ಮದಲ್ಲೂ ಇಂಥ ಹೆಂಡತಿಯೇ ಬೇಡ ಎಂದು ಅರಳಿ ಮರಕ್ಕೆ ದಾರ ಕಟ್ಟಿದ್ದಾರೆ!
Vijaya Karnataka Web ಅರಳಿ ಮರಕ್ಕೆ ಪೂಜೆ
ಅರಳಿ ಮರಕ್ಕೆ ಪೂಜೆ


ಪತ್ನಿಯಿಂದ ಪೀಡಿತನಾಗಿದ್ದೇನೆಂದು ಹೇಳುವ ಚಿಕ್ಕೋಡಿಯ ಶಶಿಧರ ರಾಮಚಂದ್ರ ಕೋಪರ್ಡೆ ಎಂಬುವರು ಇಲ್ಲಿನ ಪುರುಷ ಸಾಂತ್ವನ ಕೇಂದ್ರದ ಸದಸ್ಯರ ಸಮ್ಮುಖ ಅರಳಿ ಮರಕ್ಕೆ ದಾರ ಕಟ್ಟಿ ಮಂಗಳವಾರ ಪೂಜೆ ನೆರವೇರಿಸಿದರು.

‘‘ಹೆಂಡತಿ ನನಗೆ ಹಾಗೂ ನನ್ನ ತಂದೆ-ತಾಯಿ, ಅಕ್ಕ ತಂಗಿ, ಅಣ್ಣ-ತಮ್ಮಂದಿರ ಮೇಲೆ ಸುಳ್ಳು ವರದಕ್ಷಿಣೆ ಪ್ರಕರಣ ದಾಖಲಿಸಿ ತೊಂದರೆ ಕೊಟ್ಟಿದ್ದಾಳೆ. ಮುಂದಿನ ಜನ್ಮದಲ್ಲಿ ನನ್ನ ಮದುವೆ ಆಗದೆ ಕುಮಾರನಾಗಿ ಬದುಕಿದರೂ ಚಿಂತೆ ಇಲ್ಲ; ಆದರೆ ಇಂತಹ ಕಿರುಕುಳ ನೀಡುವ ಹೆಂಡತಿ ಬೇಡವೇ ಬೇಡ. ಈ ಕೋರಿಕೆಯೊಂದಿಗೆ ಮರಕ್ಕೆ ದಾರ ಕಟ್ಟುವ ಸಂಪ್ರದಾಯ ನೆರವೇರಿಸಿದ್ದೇನೆ’’, ಎಂದು ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ