ಆ್ಯಪ್ನಗರ

ರೇವಣ್ಣರಿಗೆ ಮಾತ್ರ ಬಾಗಿಲು ತೆರೆದ ಅಧಿಕಾರಿಗಳು

ರಾಜ್ಯ ಸಮ್ಮಿಶ್ರ ಸರಕಾರದಲ್ಲಿ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಎಲ್ಲಾ ಇಲಾಖೆಗಳಲ್ಲಿ ಮೂಗು ತೂರಿಸುತ್ತಿರುವುದು ಈಗ ಉಳಿದ ಸಚಿವರಿಗೆ ತೀವ್ರ ಇರಿಸು-ಮುರಿಸುಂಟು ಮಾಡುತ್ತಿದೆ.

Vijaya Karnataka 22 Jun 2018, 8:11 am
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರಕಾರದಲ್ಲಿ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಎಲ್ಲಾ ಇಲಾಖೆಗಳಲ್ಲಿ ಮೂಗು ತೂರಿಸುತ್ತಿರುವುದು ಈಗ ಉಳಿದ ಸಚಿವರಿಗೆ ತೀವ್ರ ಇರಿಸು-ಮುರಿಸುಂಟು ಮಾಡುತ್ತಿದೆ.
Vijaya Karnataka Web HD Revanna


ಇದುವರೆಗೆ ಕಾಂಗ್ರೆಸ್‌ ಸಚಿವರಿಗೆ ಮಾತ್ರ ಆಗುತ್ತಿದ್ದ ಈ ಅನುಭವ ಈಗ ಜೆಡಿಎಸ್‌ ಸಚಿವರಿಗೂ ಕಾಡುತ್ತಿದ್ದು, ತಮ್ಮ ಇಲಾಖೆಯಲ್ಲಿ ರೇವಣ್ಣ ಹಸ್ತಕ್ಷೇಪ ನಡೆಸುತ್ತಿರುವ ಬಗ್ಗೆ ಅಲ್ಲಲ್ಲಿ ಅಸಮಾಧಾನಗಳು ಮೂಡಲಾರಂಭಿಸಿದೆ. ಸೂಪರ್‌ ಸಿಎಂ ರೀತಿ ರೇವಣ್ಣ ವರ್ತಿಸುತ್ತಿರುವುದರಿಂದ ಅಧಿಕಾರಿಗಳು ಹಾಗೂ ಪೊಲೀಸ್‌ ಸಿಬ್ಬಂದಿಯೂ ಇದಕ್ಕೆ ತಕ್ಕಂತೆ ತಾಳ ಹಾಕಲಾರಂಭಿಸಿದ್ದಾರೆ.

ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಶಕ್ತಿ ಭವನದಲ್ಲಿನ ಬಜೆಟ್‌ ಪೂರ್ವಭಾವಿ ಸಭೆ ಸಂದರ್ಭದಲ್ಲಿ ಇದಕ್ಕೆ ಪುಷ್ಠಿ ಕೊಡುವ ಸಂಗತಿ ಗುರುವಾರ ನಡೆದಿದೆ. ಸಭೆ ಹಿನ್ನೆಲೆಯಲ್ಲಿ ಶಕ್ತಿಭವನದ ಗೇಟ್‌ ಹಾಕಲಾಗಿತ್ತು. ಯಾವುದೇ ಸಚಿವರು ಬಂದರೂ ಪೊಲೀಸರು ಬಾಗಿಲು ತೆರೆದಿರಲಿಲ್ಲ. ಕಂದಾಯ ಸಚಿವ ಆರ್‌.ವಿ,ದೇಶಪಾಂಡೆಯವರ ಕಾರನ್ನೂ ಒಳಗೆ ಬಿಡಲಿಲ್ಲ. ಹೀಗಾಗಿ ಅವರು ಗೇಟ್‌ ಮುಂದೆ ವಾಹನ ನಿಲ್ಲಿಸಿ ನಡೆದುಕೊಂಡೇ ಹೋದರು. ಆದರೆ ಕೆಲವೇ ಹೊತ್ತಿನಲ್ಲಿ ರೇವಣ್ಣ ಆಗಮಿಸುತ್ತಿದ್ದಂತೆ ಓಡೋಡಿ ಬಂದ ಪೊಲೀಸ್‌ ಸಿಬ್ಬಂದಿ ಗೇಟ್‌ ಬೀಗ ತೆರೆದು ಅವರ ವಾಹನ ಒಳಕ್ಕೆ ಬರುವುದಕ್ಕೆ ಅವಕಾಶ ಮಾಡಿಕೊಟ್ಟರು. ತಮ್ಮ ಖಾತೆಗೆ ಸಂಬಂಧಿತ ಚರ್ಚೆ ಇಲ್ಲದಿದ್ದರೂ ಆಹ್ವಾನವಿಲ್ಲದೆಯೂ ರೇವಣ್ಣ ಆಗಮಿಸಿದ್ದರು. ಹೀಗಾಗಿ ಸಮ್ಮಿಶ್ರ ಸರಕಾರದಲ್ಲಿ ರೇವಣ್ಣ ಸೂಪರ್‌ ಸಿಎಂ ಎಂಬ ವಿಚಾರ ಮತ್ತೆ ಚರ್ಚೆಗೆ ಕಾರಣವಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ