ಆ್ಯಪ್ನಗರ

ಡಾ.ಎ.ಕೆ. ಶಾಸ್ತ್ರಿ ಅವರಿಗೆ ಚಿದಾನಂದ ಪ್ರಶಸ್ತಿ

ಕೈಬರಹದ ಚಾರಿತ್ರಿಕ ದಾಖಲೆಗಳ ಕುರಿತು ವಿಶೇಷ ಅಧ್ಯಯನ ನಡೆಸಿರುವ ಹಿರಿಯ ಸಂಶೋಧಕ ಹಾಗು ಇತಿಹಾಸತಜ್ಞ ಡಾ. ಎ.ಕೆ. ಶಾಸ್ತ್ರಿ (ಅನಂತ ಕೃಷ್ಣ ಶಾಸ್ತ್ರಿ) ಅವರು 2019ನೇ ಸಾಲಿನ 'ಚಿದಾನಂದ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.

Vijaya Karnataka 21 May 2019, 5:00 am
ಬೆಂಗಳೂರು : ಕೈಬರಹದ ಚಾರಿತ್ರಿಕ ದಾಖಲೆಗಳ ಕುರಿತು ವಿಶೇಷ ಅಧ್ಯಯನ ನಡೆಸಿರುವ ಹಿರಿಯ ಸಂಶೋಧಕ ಹಾಗು ಇತಿಹಾಸತಜ್ಞ ಡಾ. ಎ.ಕೆ. ಶಾಸ್ತ್ರಿ (ಅನಂತ ಕೃಷ್ಣ ಶಾಸ್ತ್ರಿ) ಅವರು 2019ನೇ ಸಾಲಿನ 'ಚಿದಾನಂದ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.
Vijaya Karnataka Web dr e k shastri have got chidananda award
ಡಾ.ಎ.ಕೆ. ಶಾಸ್ತ್ರಿ ಅವರಿಗೆ ಚಿದಾನಂದ ಪ್ರಶಸ್ತಿ


ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ ವತಿಯಿಂದ ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಹೆಸರಿನಲ್ಲಿ ಕಳೆದ 26 ವರ್ಷಗಳಿಂದ ಪ್ರತಿ ವರ್ಷ ಒಬ್ಬ ಸಂಶೋಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು 10 ಸಾವಿರ ರೂ. ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಜೂ. 9ರಂದು ಬೆಳಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಿತಿ ಕಾರ್ಯದರ್ಶಿ ಡಾ. ಎಸ್‌.ಎಲ್‌. ಶ್ರೀನಿವಾಸ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ