ಆ್ಯಪ್ನಗರ

Sabarimala: ಸುಪ್ರೀಂ ತೀರ್ಪಿನಿಂದ ಹೆಣ್ಮಕ್ಕಳಿಗೆ ನ್ಯಾಯ - ಡಾ. ಜಯಮಾಲಾ

ಇದಕ್ಕಿಂತ ಸಂತೋಷ ಬೇರೊಂದಿಲ್ಲ. ಅಂಬೇಡ್ಕರ್ ಕೊಟ್ಟ ಸಂವಿಧಾನಕ್ಕೆ ನಾವು ಚಿರಋಣಿ, ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಗಂಡು, ಹೆಣ್ಣು ಇಬ್ಬರೂ ಸಮಾನರೆನ್ನುವ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Vijaya Karnataka Web 28 Sep 2018, 1:16 pm
ಉಡುಪಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ಸುಪ್ರೀಂಕೋರ್ಟು ಐತಿಹಾಸಿಕ ತೀರ್ಪು ನೀಡಿದ್ದು ದೇಶದ ಹೆಣ್ಣು ಮಕ್ಕಳಿಗೆ ನ್ಯಾಯ ಸಿಕ್ಕಿದಂತಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಹೇಳಿದ್ದಾರೆ.
Vijaya Karnataka Web jayamala


ಇದಕ್ಕಿಂತ ಸಂತೋಷ ಬೇರೊಂದಿಲ್ಲ. ಅಂಬೇಡ್ಕರ್ ಕೊಟ್ಟ ಸಂವಿಧಾನಕ್ಕೆ ನಾವು ಚಿರಋಣಿ, ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಗಂಡು, ಹೆಣ್ಣು ಇಬ್ಬರೂ ಸಮಾನರೆನ್ನುವ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಹಿಂದಿನ ಘಟನೆಯಿಂದ ನನಗೆ ಮಾತ್ರವಲ್ಲ ಇಡೀ ಹೆಣ್ಣು ಕುಲಕ್ಕೇ ನೋವಾಗಿತ್ತು. ಸುಪ್ರೀಂ ಕೋರ್ಟು ತೀರ್ಪು ಈ ಎಲ್ಲಾ ನೋವನ್ನು ಮರೆಸಿದೆ. ಜಯ ಸಿಗುವ ವಿಶ್ವಾಸ, ನಿರೀಕ್ಷೆ ಈಗ ನಿಜವಾಗಿದೆ ಎಂದು ಸಚಿವೆ ಡಾ. ಜಯಮಾಲಾ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ವಿವಾದದ ಕೇಂದ್ರ ಬಿಂದುವಾಗಿದ್ದ ಜಯಮಾಲಾ ಶಬರಿಮಲೆಯಲ್ಲಿ ಅಯ್ಯಪ್ಪ ಪ್ರತಿಮೆಯನ್ನು ಸ್ಪರ್ಶಿಸಿದ್ದಾಗಿ ಜಯಮಾಲಾ ನೀಡಿದ್ದ ಹೇಳಿಕೆಯು 10ರಿಂದ 50 ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ಪ್ರವೇಶಕ್ಕೆ ನಿರ್ಬಂಧವಿರುವ ಹಿನ್ನೆಲೆಯಲ್ಲಿ ವಿವಾದಕ್ಕೀಡಾಗಿತ್ತು.

ಮಾಧ್ಯಮದಲ್ಲಿ ಪರ, ವಿರೋಧ ಚರ್ಚೆಗೀಡಾಗಿ ಬಳಿಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಜಯಮಾಲಾ ಬಳಿಕ ವಿಷಾದ ವ್ಯಕ್ತಪಡಿಸಿದ್ದಲ್ಲದೆ ಭಕ್ತರ ನೂಕುನುಗ್ಗಲಲ್ಲಿ ತಾನು ವಿಗ್ರಹದ ಬಳಿ ತಳ್ಳಲ್ಪಟ್ಟಿದ್ದೆ ಎಂದು ಸ್ಪಷ್ಟನೆ ನೀಡಿದ್ದರೆ ಶಬರಿಮಲೆಯ ಮುಖ್ಯ ಅರ್ಚಕ ಕುಂಟಾರು ಮಹೇಶ್ವರ ಅವರು ಜಯಮಾಲಾ ಹೇಳಿಕೆಯನ್ನು ತಳ್ಳಿಹಾಕಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ