ಆ್ಯಪ್ನಗರ

IT Raid: ಅಣ್ಣಾವ್ರ ಮದ್ರಾಸ್ ಮನೆ ಮೇಲೂ ನಡೆದಿತ್ತು ದಾಳಿ; ತೊಂದರೆಗೆ ಕ್ಷಮೆ ಇರಲಿ ಎಂದಿದ್ದ ಅಧಿಕಾರಿಗಳು!

ರಾಜ್‌ ಮನೆ ಮೇಲೆ ಐಟಿ ದಾಳಿ ನಡೆದಾಗ ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಪಾರ್ವತಮ್ಮ ಅವರೇ ಉತ್ತರಿಸಿದ್ದರು. ಆಗ ಅಣ್ಣಾವ್ರ ಎಲ್ಲ ಲೆಕ್ಕಗಳನ್ನು ವಿಕ್ರಮ್‌ ಶ್ರೀನಿವಾಸ್‌ ಎಂಬುವವರು ನೋಡಿಕೊಳ್ಳುತ್ತಿದ್ದರು. ಮನೆಯಿಂದ ಹೊರಡುವಾಗ ಪ್ರತಿಯೊಬ್ಬ ಅಧಿಕಾರಿಯೂ ರಾಜ್‌ ಅವರನ್ನು ವಿಶೇಷವಾಗಿ ಮಾತನಾಡಿಸಿ, ಅವರ ಕೈ ಕುಲುಕಿ ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆ ಇರಲಿ ಎಂದು ಅಲ್ಲಿಂದ ನಿರ್ಗಮಿಸಿದ್ದರು.

Vijaya Karnataka 4 Jan 2019, 12:20 am
ಬೆಂಗಳೂರು: ಎಂಬತ್ತರ ದಶಕದ ಆರಂಭದಲ್ಲಿ ಡಾ. ರಾಜ್‌ಕುಮಾರ್‌ ವಾಸವಿದ್ದ ಅಂದಿನ ಮದ್ರಾಸ್‌(ಚೆನ್ನೈ)ನಲ್ಲಿನ ಮನೆಯ ಮೇಲೂ ಐಟಿ ದಾಳಿ ನಡೆದಿತ್ತು. ಐಟಿ ಅಧಿಕಾರಿಗಳು ಮನೆ ಮೇಲೆ ದಾಳಿ ಮಾಡಿದಾಗ ಡಾ. ರಾಜ್‌ ಮನೆಯ ಮಹಡಿಯ ಮೇಲೆ ಯೋಗ ಮಾಡುತ್ತಿದ್ದರಂತೆ. ವಿಷಯ ತಿಳಿದು ಅಧಿಕಾರಿಗಳ ಬಳಿ ಬಂದ ರಾಜ್‌, ತಮ್ಮ ಕುಟುಂಬ ನಿಮಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡುತ್ತದೆ ಎಂದು ಹೇಳಿ ಮತ್ತೆ ಯೋಗದಲ್ಲಿ ಮಗ್ನರಾಗಿದ್ದರು ಎಂದು ಅಂದಿನ ಡಾ. ರಾಜ್‌ ಕುಮಾರ್‌ ಅಭಿಮಾನಿಗಳ ಸಂಘದ ಪ್ರಧಾನ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಟಿ. ವೆಂಕಟೇಶ್‌ 'ವಿಕ'ಗೆ ತಿಳಿಸಿದರು.
Vijaya Karnataka Web Dr Raj


''ವಿಷಯ ಗೊತ್ತಾದ ತಕ್ಷಣ ನಾನು ಮತ್ತು ಸಾ.ರಾ.ಗೋವಿಂದು ಮದ್ರಾಸ್‌ಗೆ ಧಾವಿಸಿದೆವು. ಮೊದಲ ಮಹಡಿಯಲ್ಲಿ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದರೆ, ನೆಲಮಹಡಿಯ ಹುಲ್ಲು ಹಾಸಿನ ಮೇಲೆ ರಾಜ್‌ ಅವರು ಮಕ್ಕಳ ಜತೆ ಆಟವಾಡುತ್ತಿದ್ದರು. ನನ್ನ ಜತೆ ಸುದೀಪ್‌ ಅವರ ತಂದೆ ಸರೋವರ ಸಂಜೀವ ಕೂಡ ಇದ್ದರು. ನಮ್ಮನ್ನು ಕಂಡ ಅಣ್ಣಾವ್ರು 'ಆತಂಕ ಏನೂ ಇಲ್ಲ. ಮೇಲೆ ಅವರೇನೂ ಹುಡುಕಾಡ್ತವ್ರೆ. ನನಗೇನೂ ಗೊತ್ತಿಲ್ಲ' ಎಂದು ಮಗುವಿನಂತೆ ನಕ್ಕರು. ಇದು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಆದರೆ ಆ ವೇಳೆಯಲ್ಲಿ ರಾಜ್‌ಕುಮಾರ್‌ ಮನೆಯಲ್ಲಿ ಯಾವುದೇ ಕಪ್ಪು ಹಣ ದೊರೆಯಲಿಲ್ಲ,'' ಎಂದು ಅವರು ನೆನಪಿಸಿದರು. ಡಾ. ರಾಜ್‌ ಮನೆಯ ಮೇಲೆ ದಾಳಿ ನಡೆದಾಗ ಕೇಂದ್ರದಲ್ಲಿ ಕಾಂಗ್ರೆಸ್‌ ಸರಕಾರವಿತ್ತು. ಇಂದಿರಾ ಗಾಂಧಿ ಪ್ರಧಾನಿ ಆಗಿದ್ದರು. ದಾಳಿಯ ಹಿಂದೇ ಅವರೇ ಇದ್ದಾರೆ ಎಂಬ ಮಾತು ಕೂಡ ಕೇಳಿ ಬಂದಿತ್ತು.

ರಾಜ್‌ ಮನೆ ಮೇಲೆ ಐಟಿ ದಾಳಿ ನಡೆದಾಗ ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಪಾರ್ವತಮ್ಮ ಅವರೇ ಉತ್ತರಿಸಿದ್ದರು. ಆಗ ಅಣ್ಣಾವ್ರ ಎಲ್ಲ ಲೆಕ್ಕಗಳನ್ನು ವಿಕ್ರಮ್‌ ಶ್ರೀನಿವಾಸ್‌ ಎಂಬುವವರು ನೋಡಿಕೊಳ್ಳುತ್ತಿದ್ದರು. ಮನೆಯಿಂದ ಹೊರಡುವಾಗ ಪ್ರತಿಯೊಬ್ಬ ಅಧಿಕಾರಿಯೂ ರಾಜ್‌ ಅವರನ್ನು ವಿಶೇಷವಾಗಿ ಮಾತನಾಡಿಸಿ, ಅವರ ಕೈ ಕುಲುಕಿ ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆ ಇರಲಿ ಎಂದು ಅಲ್ಲಿಂದ ನಿರ್ಗಮಿಸಿದ್ದರು.
- ಟಿ.ವೆಂಕಟೇಶ್‌, ಹಿರಿಯ ಪತ್ರಕರ್ತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ