ಆ್ಯಪ್ನಗರ

ಮಳೆ - ಪ್ರವಾಹದ ನಡುವೆ 49 ತಾಲೂಕುಗಳು ಬರಪೀಡಿತ!

ಆಗಸ್ಟ್‌ 30ರವರೆಗಿನ ಮಳೆ ಕೊರತೆ ಆಧರಿಸಿ ರಾಜ್ಯದ 18 ಜಿಲ್ಲೆಗಳ 49 ತಾಲೂಕನ್ನು ಬರಪೀಡಿತ ಎಂದು ರಾಜ್ಯ ಸರಕಾರ ಘೋಷಣೆ ಮಾಡಿದೆ. ಅವುಗಳ ಪೂರ್ಣ ಪಟ್ಟಿ ಇಲ್ಲಿದೆ.

Vijaya Karnataka 22 Oct 2019, 9:19 pm
ಬೆಂಗಳೂರು: ಒಂದೆಡೆ ರಾಜ್ಯದಲ್ಲಿ ಸತತ ಪ್ರವಾಹ ಜನರನ್ನು ಕಂಗೆಡಿಸುತ್ತಿದೆ. ಇನ್ನೊಂದೆಡೆ ಅದಕ್ಕೆ ತದ್ವಿರುದ್ಧವಾಗಿ ಜನರು ಬರದಿಂದ ತತ್ತರಿಸುತ್ತಿದ್ದಾರೆ. 18 ಜಿಲ್ಲೆಯ 49 ತಾಲೂಕುಗಳಲ್ಲಿ ಮುಂಗಾರು ಕೊರತೆ ಉಂಟಾಗಿದ್ದು, ಬರ ಪರಿಸ್ಥಿತಿ ನಿರ್ಮಾಣವಾಗಿದೆ.
Vijaya Karnataka Web DroughtInKarnataka


ಆಗಸ್ಟ್‌ 30ರವರೆಗಿನ ಮಳೆ ಕೊರತೆ ಆಧರಿಸಿ ರಾಜ್ಯದ 18 ಜಿಲ್ಲೆಗಳ 49 ತಾಲೂಕನ್ನು ಬರಪೀಡಿತ ಎಂದು ರಾಜ್ಯ ಸರಕಾರ ಘೋಷಣೆ ಮಾಡಿದೆ. ಅವುಗಳ ವಿವರ ಹೀಗಿದೆ.

* ಬೆಂಗಳೂರು ನಗರ- ಅನೇಕಲ್‌, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ

* ಬೆಂಗಳೂರು ಗ್ರಾಮಾಂತರ- ದೇವನಹಳ್ಳಿ, ಹೊಸಕೋಟೆ, ನೆಲಮಂಗಲ

* ರಾಮನಗರ- ಕನಕಪುರ, ರಾಮನಗರ

* ಕೋಲಾರ- ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ

* ಚಿಕ್ಕಬಳ್ಳಾಪುರ- ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ

* ತುಮಕೂರು- ಗುಬ್ಬಿ, ಕೊರಟಗೆರೆ, ಕುಣಿಗಲ್‌, ಮಧುಗಿರಿ, ಪಾವಗಡ, ತುಮಕೂರು, ತುರುವೇಕರೆ

* ಚಿತ್ರದುರ್ಗ- ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮೂರು

* ದಾವಣಗೆರೆ- ಜಗಳೂರು

* ಚಾಮರಾಜನಗರ- ಕೊಳ್ಳೇಗಾರ, ಬಳ್ಳಾರಿ, ಹೊಸಪೇಟೆ, ಸಂಡೂರು, ಸಿರಗುಪ್ಪ

* ಕೊಪ್ಪಳ- ಗಂಗಾವತಿ, ಮಾನ್ವಿ, ರಾಯಚೂರು, ಸಿಂಧನೂರು

* ಕಲಬುರಗಿ- ಚಿಂಚೋಳಿ, ಜೇವರ್ಗಿ, ಸೇಡಂ

* ಯಾದಗಿರಿ- ಯಾದಗಿರಿ

* ಬೆಳಗಾವಿ- ಅಥಣಿ

* ಬಾಗಲಕೋಟೆ- ಬಾದಾಮಿ, ಬೀಳಗಿ, ಜಮಖಂಡಿ

* ವಿಜಯಪುರ- ಬಸವನಬಾಗೇವಾಡಿ, ವಿಜಯಪುರ, ಇಂಡಿ, ಸಿಂಧಗಿ

* ಗದಗ- ನರಗುಂದ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ