ಆ್ಯಪ್ನಗರ

ಬರ ಪರಿಹಾರಕ್ಕಾಗಿ ಪ್ರತಿ ತಾಲೂಕಿನಲ್ಲಿ ಸಹಾಯವಾಣಿ: ಪರಮೇಶ್ವರ್‌

ತುಮಕೂರಿನಲ್ಲಿ ಮಧುಗಿರಿ, ಪಾವಗಡ, ಸಿರಾ, ಗುಬ್ಬಿ, ಕುಣಿಗಲ್, ಕೊರಟಗೆರೆ ತಾಲೂಕಿನಲ್ಲಿ ಮಳೆಯಾಗದೇ ಕುಡಿಯುವ ನೀರಿನ‌ ಸಮಸ್ಯೆ ತಲೆದೂರಿದೆ. ಈ ಸಮಸ್ಯೆಗೆಂದೇ ಜನರಿಗಾಗಿ ಸಹಾಯವಾಣಿ ತೆರೆಯಲಾಗಿದ್ದು, ಆ ಸಂಖ್ಯೆಗಳನ್ನು ಪ್ರಚುರ ಪಡಿಸಲಾಗಿದೆ

Vijaya Karnataka Web 10 May 2019, 8:30 pm
ತುಮಕೂರು: ಕುಡಿಯುವ ನೀರು, ಮೇವು, ಗುಳೆ ಹೋಗುವ ಜನರಿಗೆ ಉದ್ಯೋಗ ಕೊಡಿಸುವುದು ಸೇರಿ ಇತರೆ ಸಮಸ್ಯೆಗಳನ್ನು ಪರಿಹರಿಸಲು ಬರಗಾಲ ಇರುವ ಪ್ರತಿ ತಾಲೂಕು ಹಾಗೂ ಹೋಬಳಿಯಲ್ಲಿ ಕಂಟ್ರೋಲ್ ರೂಂ ತೆರೆಯಲು ಸೂಚಿಸಲಾಗಿದೆ. ಈ ಸಹಾಯವಾಣಿಗೆ ಜನರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.
Vijaya Karnataka Web ಪರಮೇಶ್ವರ್‌
ಪರಮೇಶ್ವರ್‌


ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಪರಮೇಶ್ವರ್‌ ಮಾತನಾಡಿದರು.

ತುಮಕೂರಿನಲ್ಲಿ ಮಧುಗಿರಿ, ಪಾವಗಡ, ಸಿರಾ, ಗುಬ್ಬಿ, ಕುಣಿಗಲ್, ಕೊರಟಗೆರೆ ತಾಲೂಕಿನಲ್ಲಿ ಮಳೆಯಾಗದೇ ಕುಡಿಯುವ ನೀರಿನ‌ ಸಮಸ್ಯೆ ತಲೆದೂರಿದೆ. ಈ ಸಮಸ್ಯೆಗೆಂದೇ ಜನರಿಗಾಗಿ ಸಹಾಯವಾಣಿ ತೆರೆಯಲಾಗಿದ್ದು, ಆ ಸಂಖ್ಯೆಗಳನ್ನು ಪ್ರಚುರ ಪಡಿಸಲಾಗಿದೆ ಎಂದರು.

ಜನರು ಬರಗಾಲ ಸಂಬಂಧ ಏನೇ ಸಮಸ್ಯೆ ಇದ್ದರೂ ಈ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ತೋಡಿಕೊಳ್ಳಬಹುದು. ಇದರ ಜವಾಬ್ಧಾರಿಯನ್ನು ಆಯಾ ಹೋಬಳಿ ಹಾಗೂ ತಾಲೂಕಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ.

ಶುದ್ಧ ಕುಡಿಯುವ ನೀರಿನ ಘಟಕ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಪ್ರತಿನಿತ್ಯ ಪರಿಶೀಲಿಸಲು ಪ್ರತಿ ಹೋಬಳಿಗೆ ಜಿಲ್ಲಾ ನೋಡಲ್ ಅಧಿಕಾರಿ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತಿ ವಾರ ಸಿಇಒ ಅವರು ಟಾಸ್ಕ್‌ ಫೋರ್ಸ್‌ ಸಮಿತಿಯನ್ನು ರಿವ್ಯೂ ಮಾಡಲಿದ್ದಾರೆ. ಬೋರ್‌ವೆಲ್ ಕೊರೆದ ಕೂಡಲೇ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಡಿಸಿಎಂ ತಿಳಿಸಿದರು.

312 ಬೋರ್‌ವೆಲ್‌ ಹೊಸದಾಗಿ ಕೊರೆಯಲಾಗಿದ್ದು, 186 ಪ್ರೈವೇಟ್ ಬೋರ್‌ವೆಲ್ ಮೂಲಕವೂ 18 ಸಾವಿರ ಹಣ ನೀಡಿ ನೀರು ಪಡೆದುಕೊಳ್ಳಲಾಗುತ್ತಿದೆ. 122 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಪರಮೇಶ್ವರ್‌ ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ