ಆ್ಯಪ್ನಗರ

ರೆಸಾರ್ಟ್‌ನಲ್ಲಿ ಬರ ಅಧ್ಯಯನ: ಊಟ, ವಸತಿಗೆ 2.66 ಲಕ್ಷ ರೂ.!

ಬರ ಅಧ್ಯಯನ ನೆಪದಲ್ಲಿ ಅಧಿಕಾರಿಗಳ ರೆಸಾರ್ಟ್ ಸಭೆ ಬಗ್ಗೆ ಜ.25 ರಂದು ವಿಜಯ ಕರ್ನಾಟಕ 'ಜಂಗಲ್‌ ಲಾಡ್ಜ್‌ನಲ್ಲಿ ಬರ ಅಧ್ಯಯನ' ಎಂಬ ವಿಶೇಷ ವರದಿ ಪ್ರಕಟಿಸಿತ್ತು

Vijaya Karnataka 15 Mar 2019, 10:22 am
ಮೈಸೂರು: ಬರಗಾಲದಿಂದ ತತ್ತರಿಸಿರುವ ರಾಜ್ಯದಲ್ಲಿ ಅಧಿಕಾರಿಗಳು ಕಬಿನಿ ಜಂಗಲ್‌ ಲಾಡ್ಜ್‌ನಲ್ಲಿ ನಡೆಸಿದ್ದ ಬರ ಅಧ್ಯಯನ ಹಾಗೂ ಕಾರ್ಯಾಗಾರಕ್ಕೆ ಊಟ ಹಾಗೂ ವಸತಿಗೆ ಸರಕಾರದಿಂದ 2.66 ಲಕ್ಷ ರೂ.ಗಳನ್ನು ವೆಚ್ಚ ಮಾಡಿರುವುದು ಬಹಿರಂಗವಾಗಿದೆ.
Vijaya Karnataka Web resort


ಬರ ಅಧ್ಯಯನ ನೆಪದಲ್ಲಿ ಅಧಿಕಾರಿಗಳ ರೆಸಾರ್ಟ್ ಸಭೆ ಬಗ್ಗೆ ಜ.25 ರಂದು ವಿಜಯ ಕರ್ನಾಟಕ 'ಜಂಗಲ್‌ ಲಾಡ್ಜ್‌ನಲ್ಲಿ ಬರ ಅಧ್ಯಯನ' ಎಂಬ ವಿಶೇಷ ವರದಿ ಪ್ರಕಟಿಸಿತ್ತು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಭೈರೇಗೌಡ ಅವರ ಅಧ್ಯಕ್ಷತೆಯಲ್ಲಿಯೇ ನಡೆದ ಈ ಐಷಾರಾಮಿ ಸಭೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಉತ್ತರ ಕರ್ನಾಟಕ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಭೀಮಪ್ಪ ಗುಂಡಪ್ಪ ಗಡಾದ ಅವರು ಮಾಹಿತಿ ಹಕ್ಕಿನಡಿ 'ರೆಸಾರ್ಟ್ಸ್ ಬರ ಅಧ್ಯಯನ' ಸಭೆಯ ಕುರಿತು ಮಾಹಿತಿ ಪಡೆದಿದ್ದು, ಅದರಿಂದ ಸಭೆಯ ಖರ್ಚಿನ ವಿವರ ಬೆಳಕಿಗೆ ಬಂದಿದೆ.

''ಜ. 24ರಂದು ಕಬಿನಿ ಜಂಗಲ್‌ ಲಾಡ್ಜ್‌ನಲ್ಲಿ ಒಂದು ದಿನದ ಕಾರ್ಯಾಗಾರ ನಡೆಸಲಾಗಿದೆ. ಇದರಲ್ಲಿ ರಾಜ್ಯದ 30 ಜಿಲ್ಲೆಗಳ ಜಿ.ಪಂ. ಸಿಇಒಗಳು ಭಾಗವಹಿಸಿದ್ದರು. ಇವರ ವಸತಿ ಹಾಗೂ ಊಟೋಪಚಾರಕ್ಕೆ 2,66,461 ರೂ.ಗಳನ್ನು ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಯ ಆರ್‌ಜಿಎಸ್‌ಎ ಅನುದಾನದಿಂದ ಭರಿಸಲಾಗುವುದು,'' ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.

ಜ. 23ರಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮೊದಲ ದಿನ ಸಭೆ ನಡೆದಿದ್ದು, ಮರುದಿನ ಅಧಿಕಾರಿಗಳು ಜಂಗಲ್‌ ಲಾಡ್ಜ್‌ಗೆ ತೆರಳಿದ್ದರು. ಜ. 25ರ ಬೆಳಗ್ಗೆ 7ರಿಂದ 9ರವರೆಗೆ ಅಲ್ಲಿ ಸಫಾರಿ ನಡೆಸಿದ ಅಧಿಕಾರಿಗಳು ಬಳಿಕ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ