ಆ್ಯಪ್ನಗರ

ರಾಜಕೀಯ ಕಾರಣಗಳಿಂದ ನಮ್ಮ ಉತ್ತಮ ಕೆಲಸಕ್ಕೆ ಪ್ರಚಾರ ದೊರಕುತ್ತಿಲ್ಲ: ಕುಮಾರಸ್ವಾಮಿ

ರಾಜಕೀಯ ಸಮಸ್ಯೆಗಳಿಂದ ತಮ್ಮ ಸರಕಾರ ಮಾಡಿರುವ ಒಳ್ಳೆಯ ಕೆಲಸಗಳು ಪ್ರಚಾರಕ್ಕೆ ಬರುತ್ತಿಲ್ಲ ಎಂದು ಸಿಎಂ ವಿಷಾದ ವ್ಯಕ್ತ ಪಡಿಸಿದ್ದಾರೆ.

Vijaya Karnataka Web 10 Jul 2019, 2:26 pm
ಬೆಂಗಳೂರು: ರಾಜಕೀಯ ಕಾರಣಗಳಿಂದ, ನಮ್ಮ ಸರಕಾರ ಮಾಡುವ ಒಳ್ಳೆಯ ಕಾರ್ಯಕ್ರಮಕ್ಕೆ ಪ್ರಚಾರ ದೊರೆಯುತ್ತಿಲ್ಲ, ಎಂದು ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಹೇಳಿದ್ದಾರೆ.
Vijaya Karnataka Web Kumaraswamy


ಬಾಗಲಗುಂಟೆಯಲ್ಲಿ ಕರ್ನಾಟಕ ಕಾರ್ಮಿಕ‌‌ ಅಧ್ಯಯನ ಸಂಸ್ಥೆಯ ಹೊಸ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಕೆಲ ರಾಜಕೀಯ ಕಾರಣಗಳಿಂದಾಗಿ ರಾಜ್ಯ ಸರಕಾರ ಮಾಡುತ್ತಿರುವ ಉತ್ತಮ ಕಾರ್ಯಕ್ರಮ, ಅನುಷ್ಠಾನ ಮಾಡುತ್ತಿರುವ ಯೋಜನೆಗಳ ಬಗ್ಗೆ ಸರಿಯಾದ ಪ್ರಚಾರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಪ್ರಸ್ತುತ ನಡೆಯುತ್ತಿರುವ ರಾಜಕೀಯ ಹೈಡ್ರಾಮಾದ ಬಗ್ಗೆ ಹೆಚ್ಚಿಗೆ ಮಾತನಾಡಲು ನಿರಾಕರಿಸಿದ ಅವರು, ರಾಜಕೀಯ ಬೆಳವಣಿಗೆ ಬಗ್ಗೆ ನಾನು ಇದುವರೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿಲ್ಲ. ನೀಡುವ ಅವಶ್ಯಕತೆಯೂ ಇಲ್ಲ. 12 ರಿಂದ ನಡೆಯುವ ಅಧಿವೇಶನದಲ್ಲಿ ಎಲ್ಲ ವಿಷಯಗಳನ್ನು ಚರ್ಚಿಸಲು ಜನಪ್ರತಿನಿಧಿಗಳಿಗೆ ಅವಕಾಶವಿದೆ. ಪ್ರತಿಪಕ್ಷದವರು ಬೇಕಾದಂತೆ ಮಾತಾಡುತ್ತಿದ್ದಾರೆ. ಜನರು ಇವೆಲ್ಲವನ್ನೂ ತೀರ್ಮಾನ ಮಾಡಬೇಕು. ರಾಜ್ಯದ ಉತ್ತಮ ಭವಿಷ್ಯಕ್ಕೆ ಯಾವುದು ಸರಿ ಎಂದು ಜನರೇ ನಿರ್ಧಾರ ಮಾಡಬೇಕು ಎಂದರು.

ಸಚಿವ ವೆಂಕಟರಮಣಪ್ಪ ಮಾತನಾಡಿ, ಯಡಿಯೂರಪ್ಪ ಜೈಲಿಗೆ ಹೋಗಿದ್ದನ್ನು ನೆನಪಿಸಿಕೊಳ್ಳಲಿ. ಅವರು ನಮಗೆ ನೀತಿ ಹೇಳಲು ಬರುತ್ತಾರೆ. ಮುಖ್ಯಮಂತ್ರಿ ಗಳು ಎಂದು ಕೆಲಸ ಆಗಲ್ಲ ಎಂದು ಶಾಸಕರಿಗೆ ಹೇಳಿಲ್ಲ. ಮಾಡಬಾರದ್ದನ್ನು ಮಾಡಿಕೊಡಿ ಎಂದರೆ ಅವರು ಮಾಡಲು ಆಗುವುದಿಲ್ಲ. ಶಾಸಕರು ವಾಪಸ್ ಬನ್ನಿ , ನಿಮ್ಮನ್ನೂ ಮಂತ್ರಿಗಳಾಗಿ ಮಾಡೋಣ. 5 ವರ್ಷ ಸರಕಾರ ನಡೆಸೋಣ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ