ಬೆಂಗಳೂರು: ಡಿವೈಎಸ್ಪಿ ಗಣಪತಿ ಸಾವಿನ ರಹಸ್ಯ ಅರಿತುಕೊಳ್ಳುವ ಆಸೆ ನನಗೂ ಇದೆ ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಬಿಡಿಎ ನೆಲಮಂಗಲ ರಸ್ತೆಯ ಆಲೂರಿನಲ್ಲಿ ನಿರ್ಮಿಸಿರುವ ವಸತಿ ಸಮುಚ್ಛಯ ಪರಿಶೀಲನೆ ಬಳಿಕ ಮಂಗಳವಾರ ಮಾತನಾಡಿದ ಅವರು ''ಸಿಬಿಐ ತನಿಖೆಗೆ ವಹಿಸಿದ್ದನ್ನು ಸ್ವಾಗತಿಸುತ್ತೇನೆ. ನೋಟಿಸ್ ನೀಡಿದ್ದಲ್ಲಿ ಏನು ಮಾಹಿತಿ ನೀಡಬೇಕೋ ಅದನ್ನು ತಿಳಿಸುವೆ,'' ಎಂದರು.
''ನನ್ನ ಮೇಲೆ ಗುರುತರ ಆರೋಪ ಇಲ್ಲದಿದ್ದರೂ, ಸುಖಾಸುಮ್ಮನೆ ಪದತ್ಯಾಗಕ್ಕೆ ಬಿಜೆಪಿ ಮುಖಂಡರು ಪಟ್ಟು ಹಿಡಿದಿದ್ದಾರೆ,'' ಎಂದು ಸಚಿವರು ತಿಳಿಸಿದರು.