ಆ್ಯಪ್ನಗರ

ತಲೆಗೆ ಹೊಲಿಗೆ ಹಾಕಿಲ್ಲ, ಬಿರಿಯಾನಿ ತರಿಸಿದ್ದಾರೆ

ಡಿ ಕೆ ಎಸ್‌ ಸಹೋದರರು ರೆಸಾರ್ಟ್‌ನಲ್ಲಿ ಗಲಾಟೆ ಆಗಿಯೇ ಇಲ್ಲ ಎಂದು ಮತ್ತೆ ಮತ್ತೆ ಹೇಳುತ್ತಿರುವಾಗಲೇ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಸ್ನೇಹಿತರ ...

Vijaya Karnataka 21 Jan 2019, 5:00 am
ಬೆಂಗಳೂರು: ಡಿ ಕೆ ಎಸ್‌ ಸಹೋದರರು ರೆಸಾರ್ಟ್‌ನಲ್ಲಿ ಗಲಾಟೆ ಆಗಿಯೇ ಇಲ್ಲ ಎಂದು ಮತ್ತೆ ಮತ್ತೆ ಹೇಳುತ್ತಿರುವಾಗಲೇ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಸ್ನೇಹಿತರ ನಡುವೆ ಸಣ್ಣ ವಿಚಾರಕ್ಕೆ ಗಲಾಟೆಯಾಗಿದೆ ಎಂದು ದೃಢಪಡಿಸಿದರು.
Vijaya Karnataka Web congress- zameer ahamed


ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,''ಆನಂದ್‌ ಸಿಂಗ್‌, ಭೀಮಾ ನಾಯ್ಕ್‌ ಹಾಗೂ ಗಣೇಶ್‌ ಉತ್ತಮ ಸ್ನೇಹಿತರು. ಯಾವುದೋ ಸಣ್ಣ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಸ್ನೇಹಿತರ ನಡುವೆ ಇವೆಲ್ಲ ಸಹಜ. ಆನಂದ್‌ ಸಿಂಗ್‌ಗೆ ಅಚಾನಕ್ಕಾಗಿ ಕಣ್ಣಿಗೆ ಸಣ್ಣ ಗಾಯವಾಗಿದೆ. ಅದಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಲೆಗೆ 12 ಹೊಲಿಗೆ ಹಾಕಲಾಗಿದೆ ಎಂಬುದೆಲ್ಲ ಸುಳ್ಳು,'' ಎಂದರು.

''ಆನಂದ್‌ ಸಿಂಗ್‌ ಅವರಿಗೆ ಗಂಭೀರ ಗಾಯವಾಗಿಲ್ಲ. ಇಂದು ಭಾನುವಾರವಾಗಿರುವುದರಿಂದ ಬಿರಿಯಾನಿ ತಿನ್ನಬೇಕು ಎಂದು ಹೇಳಿದ್ದರು. ಆಪ್ತರಿಂದ ಬಿರಿಯಾನಿ ತರಿಸಿಕೊಂಡು ತಿಂದು ಆರಾಮವಾಗಿದ್ದಾರೆ. ಸೋಮವಾರ ಬೆಳಗ್ಗೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಾಗಿ ವೈದ್ಯರು ಹೇಳಿದ್ದಾರೆ,'' ಎಂದು ಜಮೀರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ