ಜಮೀರ್ ಅಹ್ಮದ್ ಕೋಟೆಗೆ ನುಗ್ಗುವ ಮುನ್ನ ಇಡಿ ಅಧಿಕಾರಿಗಳ ತಯಾರಿ ಹೇಗಿತ್ತು? ಇಲ್ಲಿದೆ ಮಾಹಿತಿ
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಬೆಳ್ಳಂ ಬೆಳಗ್ಗೆ ಇಡಿ ಶಾಕ್ ಕೊಟ್ಟಿದೆ. ಆದರೆ ಜಮೀರ್ ಅಹ್ಮದ್ ಕೋಟೆಗೆ ನುಗ್ಗಲು ಇಡಿ ಅಧಿಕಾರಿಗಳು ಭರ್ಜರಿ ತಯಾರಿ ಮಾಡಿಕೊಂಡಿದ್ದರು. ಒಂದು ವಾರಕ್ಕಿಂತ ಮುಂಚೆಯೇ ಬೆಂಗಳೂರಿಗೆ ದಿಲ್ಲಿಯಿಂದ ಬಂದಿದ್ದ ಅಧಿಕಾರಿಗಳು ಇಲ್ಲಿ ಭರ್ಜರಿಯಾಗಿ ತಯಾರಿ ನಡೆಸಿದ್ದರು. ಯಾವ ರೀತಿ ತಯಾರಿ ನಡೆಸಿದ್ದು, ಒಂದು ವಾರಕ್ಕಿಂತಹ ಮುಂಚೆ ಇಲ್ಲಿ ಬೀಡು ಬಿಟ್ಟಿದ್ದೇಕೆ? ಇಲ್ಲಿದೆ ಈ ಬಗ್ಗೆ ಮಾಹಿತಿ.
Vijaya Karnataka Web 5 Aug 2021, 2:34 pm
ಹೈಲೈಟ್ಸ್:
- ಭರ್ಜರಿ ತಯಾರಿಯೊಂದಿಗೆ ಜಮೀರ್ ಕೋಟೆಗೆ ನುಗ್ಗಿದ ಇಡಿ
- ಒಂದು ವಾರಕ್ಕಿಂತ ಮುಂಚೆಯೇ ಬೆಂಗಳೂರಿಗೆ ಬಂದಿದ್ದರು
- ಅಷ್ಟಕ್ಕೂ ಜಮೀರ್ ಮನೆ ಮೇಲೆ ದಾಳಿ ನಡೆಸಲು ಕಾರಣವೇನು?
ಬೆಂಗಳೂರು: ಬೆಳ್ಳಂಬೆಳಗ್ಗೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಇಡಿ ಶಾಕ್ ಕೊಟ್ಟಿದೆ. ಏಕಕಾಲದಲ್ಲಿ ಇಡಿ ಅಧಿಕಾರಿಗಳ ತಂಡ ವಿವಿಧೆಡೆ ದಾಳಿ ನಡೆಸಿ ಬಿಸಿ ಮುಟ್ಟಿಸಿದೆ. ಆದರೆ ಈ ದಾಳಿ ಹಿಂದೆ ದೊಡ್ಡ ಮಟ್ಟದ ತಯಾರಿಯನ್ನೇ ಇಡಿ ಅಧಿಕಾರಿಗಳು ನಡೆಸಿದ್ದರು ಎನ್ನುವುದು ಇದೀಗ ಬೆಳಕಿಗೆ ಬಂದಿದೆ. ಹಾಗಾದರೆ ಅದು ಏನು? ಇಲ್ಲಿದೆ ಈ ಬಗ್ಗೆ ಎಕ್ಸ್ಕ್ಲೂಸಿವ್ ಮಾಹಿತಿ. ದಾಳಿಗೆ ಕಾರಣವೇನು?
ಜಮೀರ್ ಅಹ್ಮದ್ ಖಾನ್ ತಮ್ಮ ಮಗಳ ಮದುವೆಯ ಸಂದರ್ಭದಲ್ಲಿ ಮನ್ಸೂರ್ ಬಳಿ 9 ಕೋಟಿ ಹಣ ಪಡೆದಿದ್ದಾರೆ. ಉಳಿದಿದ್ದ ಹಣವನ್ನು ಚಿನ್ನದ ರೂಪದಲ್ಲಿ ಪಡೆದುಕೊಂಡಿದ್ದರು. ಐಎಂಎ ಗೋಲ್ಡ್ನಿಂದ 5 ಕೋಟಿ ಮೌಲ್ಯದ ಚಿನ್ನಾಭರಣ ಪಡೆದಿದ್ದ ಜಮೀರ್, ಬಡ್ಡಿಯ ರೂಪದಲ್ಲಿಯೂ ಕೂಡ ಹಣ ಪಡೆದುಕೊಂಡಿದ್ದರೆಂಬ ಮಾಹಿತಿ ತಿಳಿದುಬಂದಿದೆ. ಅಲ್ಲದೇ ಅಕ್ರಮ ಹಣ ಹೊಂದಿರುವ ಬಗ್ಗೆಯೂ ಮಾಹಿತಿ ಇದೆ.
1 ವಾರಕ್ಕೂ ಮುನ್ನ ಬೆಂಗಳೂರಿಗೆ ಬಂದಿದ್ದ ಇಡಿ ಅಧಿಕಾರಿಗಳು!
ಐಎಂಎ ಪ್ರಕರಣದ ಸಂಬಂಧ ಇದೀಗ ಜಮೀರ್ ಅಹ್ಮದ್ ನಿವಾಸದ ಮೇಲೆ ದಾಳಿ ನಡೆಸಿರುವುದು ಖಚಿತವಾಗಿದೆ. ಐಎಂಎ ಕೇಸ್ಗೆ ಸಂಬಂಧಪಟ್ಟಂತೆ ಮನ್ಸೂರ್ ಅಲಿ ಹಾಗೂ ರೋಶನ್ ಬೇಗ್ ಜಮೀರ್ ಸಂಬಂಧ ಕೆಲ ಹೇಳಿಕೆ ನೀಡಿದ್ದರಿಂದ ಪೂರ್ವ ನಿಯೋಜಿತವಾಗಿ ದಾಳಿ ನಡೆದಿದೆ. ದಿಲ್ಲಿಯ ಅಧಿಕಾರಿಗಳು ಬಂದು ದಾಳಿ ನಡೆಸಿದ್ದಾರೆ. ದಾಳಿಗೂ ಮುನ್ನ ಕಳೆದ ಒಂದು ತಿಂಗಳಿನಿಂದ ಜಮೀರ್ ಅಹ್ಮದ್ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿದ್ದರು ಎಂದು ತಿಳಿದುಬಂದಿದೆ. ಜಮೀರ್ ಆಸ್ತಿ, ವ್ಯವಹಾರದ ಬಗ್ಗೆ ಮಾಹಿತಿ ಕಲೆ ಹಾಕಿದ್ದರು ಎನ್ನಲಾಗಿದೆ. ಇನ್ನು ಇದರ ಭಾಗವಾಗಿ ಒಂದು ವಾರಕ್ಕಿಂತ ಮೊದಲೇ ಬಂದು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದ ಇಡಿ ಅಧಿಕಾರಿಗಳು ಜಮೀರ್ ಅಹ್ಮದ್ ಅವರ ಚಲನವಲನಗಳನ್ನು ವೀಕ್ಷಿಸುತ್ತಿದ್ದರಂತೆ. ಅಲ್ಲದೇ ಅವರ ಆಸ್ತಿ, ಕಚೇರಿಗಳ ಬಗ್ಗೆಯೂ ಸ್ಥಳೀಯ ಹಾಗೂ ಬಲ್ಲ ಮೂಲಗಳಿಂದ ಮಾಹಿತಿ ಕಲೆ ಹಾಕಿ, ಎಲ್ಲ ದಾಖಲೆಗಳನ್ನು ಹಿಡಿದುಕೊಂಡು, ಪೊಲೀಸರ ಸಹಾಯದೊಮದಿಗೆ 45ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿವಿಧೆಡೆ ಇಡಿ ದಾಳಿ ನಡೆಸಿದೆ ಇನ್ನು ಜಮೀರ್ ಇರುವ ಸಮಯ ನೋಡಿಕೊಂಡೆ ನಿವಾಸದ ಮೇಕೆ ದಾಳಿ ನಡೆಸಿದ್ದಾರೆ. ಸದ್ಯ ಮನೆ, ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಎಲ್ಲೆಲ್ಲಿ ದಾಳಿ?
ರಿಚ್ಮಂಡ್ ಟೌನ್ ನಿವಾಸ, ವಸಂತ ನಗರ ಹಳೆ ಮನೆ, ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಬಳಿಯಲ್ಲಿರುವ ನೂತನ ಬಂಗಲೆ, ಯುಬಿಸಿಟಿಯಲ್ಲಿರು ಫ್ಲ್ಯಾಟ್, ಕಲಾಸಿಪಾಳ್ಯದಲ್ಲಿಯ ನ್ಯಾಷನಲ್ ಟ್ರಾವೆಲ್ ಕಚೇರಿ ಮತ್ತು ದೆಹಲಿ, ಮುಂಬೈನಲ್ಲಿರುವ ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿದೆ. ಇದಕ್ಕೆ ಬೇಕಾದ ತಯಾರಿಗಳನ್ನು ನಡೆಸಿಯೇ ದಾಳಿ ನಡೆದಿರುವುದು ರುಜುವಾತು ಆಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ. ಮುನ್ನೆಚ್ಚರಿಕಾ ಕ್ರಮಕ್ಕಾಗಿ ಸಿಆರ್ಪಿಎಫ್ ಪೊಲೀಸರನ್ನು ನಿಯೋಜಿಸಿಕೊಂಡಿದೆ.
ಜಮೀರ್ಗೆ ಮುಳುವಾಯ್ತ ಅರಮನೆಯಂತಹ ನಿವಾಸ? ಕೋಟಿ ಖರ್ಚಿನ ಮಗಳ ಮದುವೆ?: ಐಟಿ ದಾಳಿಗೆ ಕಾರಣವೇನು?
ಜಮೀರ್ ಅಹ್ಮದ್ ಖಾನ್ ತಮ್ಮ ಮಗಳ ಮದುವೆಯ ಸಂದರ್ಭದಲ್ಲಿ ಮನ್ಸೂರ್ ಬಳಿ 9 ಕೋಟಿ ಹಣ ಪಡೆದಿದ್ದಾರೆ. ಉಳಿದಿದ್ದ ಹಣವನ್ನು ಚಿನ್ನದ ರೂಪದಲ್ಲಿ ಪಡೆದುಕೊಂಡಿದ್ದರು. ಐಎಂಎ ಗೋಲ್ಡ್ನಿಂದ 5 ಕೋಟಿ ಮೌಲ್ಯದ ಚಿನ್ನಾಭರಣ ಪಡೆದಿದ್ದ ಜಮೀರ್, ಬಡ್ಡಿಯ ರೂಪದಲ್ಲಿಯೂ ಕೂಡ ಹಣ ಪಡೆದುಕೊಂಡಿದ್ದರೆಂಬ ಮಾಹಿತಿ ತಿಳಿದುಬಂದಿದೆ. ಅಲ್ಲದೇ ಅಕ್ರಮ ಹಣ ಹೊಂದಿರುವ ಬಗ್ಗೆಯೂ ಮಾಹಿತಿ ಇದೆ.
1 ವಾರಕ್ಕೂ ಮುನ್ನ ಬೆಂಗಳೂರಿಗೆ ಬಂದಿದ್ದ ಇಡಿ ಅಧಿಕಾರಿಗಳು!
ಐಎಂಎ ಪ್ರಕರಣದ ಸಂಬಂಧ ಇದೀಗ ಜಮೀರ್ ಅಹ್ಮದ್ ನಿವಾಸದ ಮೇಲೆ ದಾಳಿ ನಡೆಸಿರುವುದು ಖಚಿತವಾಗಿದೆ. ಐಎಂಎ ಕೇಸ್ಗೆ ಸಂಬಂಧಪಟ್ಟಂತೆ ಮನ್ಸೂರ್ ಅಲಿ ಹಾಗೂ ರೋಶನ್ ಬೇಗ್ ಜಮೀರ್ ಸಂಬಂಧ ಕೆಲ ಹೇಳಿಕೆ ನೀಡಿದ್ದರಿಂದ ಪೂರ್ವ ನಿಯೋಜಿತವಾಗಿ ದಾಳಿ ನಡೆದಿದೆ. ದಿಲ್ಲಿಯ ಅಧಿಕಾರಿಗಳು ಬಂದು ದಾಳಿ ನಡೆಸಿದ್ದಾರೆ. ದಾಳಿಗೂ ಮುನ್ನ ಕಳೆದ ಒಂದು ತಿಂಗಳಿನಿಂದ ಜಮೀರ್ ಅಹ್ಮದ್ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿದ್ದರು ಎಂದು ತಿಳಿದುಬಂದಿದೆ. ಜಮೀರ್ ಆಸ್ತಿ, ವ್ಯವಹಾರದ ಬಗ್ಗೆ ಮಾಹಿತಿ ಕಲೆ ಹಾಕಿದ್ದರು ಎನ್ನಲಾಗಿದೆ. ಇನ್ನು ಇದರ ಭಾಗವಾಗಿ ಒಂದು ವಾರಕ್ಕಿಂತ ಮೊದಲೇ ಬಂದು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದ ಇಡಿ ಅಧಿಕಾರಿಗಳು ಜಮೀರ್ ಅಹ್ಮದ್ ಅವರ ಚಲನವಲನಗಳನ್ನು ವೀಕ್ಷಿಸುತ್ತಿದ್ದರಂತೆ. ಅಲ್ಲದೇ ಅವರ ಆಸ್ತಿ, ಕಚೇರಿಗಳ ಬಗ್ಗೆಯೂ ಸ್ಥಳೀಯ ಹಾಗೂ ಬಲ್ಲ ಮೂಲಗಳಿಂದ ಮಾಹಿತಿ ಕಲೆ ಹಾಕಿ, ಎಲ್ಲ ದಾಖಲೆಗಳನ್ನು ಹಿಡಿದುಕೊಂಡು, ಪೊಲೀಸರ ಸಹಾಯದೊಮದಿಗೆ 45ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿವಿಧೆಡೆ ಇಡಿ ದಾಳಿ ನಡೆಸಿದೆ ಇನ್ನು ಜಮೀರ್ ಇರುವ ಸಮಯ ನೋಡಿಕೊಂಡೆ ನಿವಾಸದ ಮೇಕೆ ದಾಳಿ ನಡೆಸಿದ್ದಾರೆ. ಸದ್ಯ ಮನೆ, ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಎಲ್ಲೆಲ್ಲಿ ದಾಳಿ?
ರಿಚ್ಮಂಡ್ ಟೌನ್ ನಿವಾಸ, ವಸಂತ ನಗರ ಹಳೆ ಮನೆ, ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಬಳಿಯಲ್ಲಿರುವ ನೂತನ ಬಂಗಲೆ, ಯುಬಿಸಿಟಿಯಲ್ಲಿರು ಫ್ಲ್ಯಾಟ್, ಕಲಾಸಿಪಾಳ್ಯದಲ್ಲಿಯ ನ್ಯಾಷನಲ್ ಟ್ರಾವೆಲ್ ಕಚೇರಿ ಮತ್ತು ದೆಹಲಿ, ಮುಂಬೈನಲ್ಲಿರುವ ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿದೆ. ಇದಕ್ಕೆ ಬೇಕಾದ ತಯಾರಿಗಳನ್ನು ನಡೆಸಿಯೇ ದಾಳಿ ನಡೆದಿರುವುದು ರುಜುವಾತು ಆಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ. ಮುನ್ನೆಚ್ಚರಿಕಾ ಕ್ರಮಕ್ಕಾಗಿ ಸಿಆರ್ಪಿಎಫ್ ಪೊಲೀಸರನ್ನು ನಿಯೋಜಿಸಿಕೊಂಡಿದೆ.
ಜಮೀರ್ಗೆ ಮುಳುವಾಯ್ತ ಅರಮನೆಯಂತಹ ನಿವಾಸ? ಕೋಟಿ ಖರ್ಚಿನ ಮಗಳ ಮದುವೆ?: ಐಟಿ ದಾಳಿಗೆ ಕಾರಣವೇನು?