ಆ್ಯಪ್ನಗರ

ಎತ್ತಿನಹೊಳೆ ನೀರು ಕೊಡದೆ ಪ್ರಾಣ ಬಿಡಲ್ಲ: ಮೊಯ್ಲಿ

ನಾನು ಸುಳ್ಳುಗಾರನಲ್ಲ...

Vijaya Karnataka 4 Apr 2019, 5:00 am
ಸೂಲಿಬೆಲೆ: ನಾನು ಸುಳ್ಳುಗಾರನಲ್ಲ. ಕೊಟ್ಟ ಮಾತಿನಂತೆ ಎತ್ತಿನಹೊಳೆ ಯೋಜನೆಯನ್ನು ತರಲು ಸಾಕಷ್ಟು ಶ್ರಮಿಸಿದ್ದು, ಕೆಲವರು ಹಸಿರು ಪೀಠ ಮತ್ತು ಸುಪ್ರಿಂ ಕೋರ್ಟ್‌ನಲ್ಲಿ ಇದರ ಬಗ್ಗೆ ದಾವೆ ಹೂಡಿದ್ದಾರೆ. ಇದಕ್ಕೆ ಹಣಕಾಸಿನ ನೆರವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ನಾನು ನೀರು ಕೊಡದೆ ಪ್ರಾಣ ಬಿಡಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಹೇಳಿದರು.
Vijaya Karnataka Web veerappa


ಸೂಲಿಬೆಲೆ ಸಂತೆ ಮೈದಾನದಲ್ಲಿ ನಡೆದ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು, ''ನನ್ನ ಅಧಿಕಾರ ಅವಧಿಯಲ್ಲಿ ಕಳಂಕ ರಹಿತನಾಗಿ ಸತ್ಯ ಧರ್ಮದಿಂದ ನಡೆದುಕೊಂಡಿದ್ದು, ತಪಿಸ್ವಿಯಂತೆ ಮಹಾಕಾವ್ಯಗಳನ್ನು ರಚನೆ ಮಾಡಿರುವ ನನ್ನನ್ನು ಸುಳ್ಳುಗಾರ ಎಂದು ಪ್ರಚಾರ ಮಾಡಲಾಗುತ್ತಿದೆ. ನೀರು ತರುವ ವಿಚಾರದಲ್ಲಿ ಈಗಲೂ ಬದ್ಧನಾಗಿದ್ದೇನೆ. ಪ್ರತಿ ಮನೆಗೆ ಉದ್ಯೋಗ, ಜಲ ಸಮೃದ್ಧಿ ಮಾಡಿ ಜನರ ಜೀವನ ಮಟ್ಟ ಬದಲಾವಣೆಯೇ ನನ್ನ ಧ್ಯೇಯವಾಗಿದೆ. ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಿಲ್ಲ ,''ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ