ಆ್ಯಪ್ನಗರ

ಬೆಂಗಳೂರ್‌ ಕಡೆ ನೋಡಿ ಸಿಎಂ: ಅಡ್ಡಾದಿಡ್ಡಿ ಬೆಳೆಯುತ್ತಿರುವ ರಾಜಧಾನಿಗೆ ಪ್ಲ್ಯಾನಿಂಗ್‌ನದೇ ಕೊರತೆ

ಬಿಎಂಪಿಸಿ ಸಭೆ ಕರೆದು ನಗರದ ಅಭಿವೃದ್ಧಿ ಸಂಬಂಧಿಸಿದಂತೆ ಚರ್ಚೆ ನಡೆಸುತ್ತಾರೆ ಎಂದು ನಗರ ಯೋಜನಾ ತಜ್ಞರು ಹಾಗೂ ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಎದುರು ನೋಡುತ್ತಿದ್ದಾರೆ.

Vijaya Karnataka 14 Oct 2019, 8:36 am
ಶ್ರೀಕಾಂತ್‌ ಹುಣಸವಾಡಿ
Vijaya Karnataka Web Banglore

ಬೆಂಗಳೂರು: ರಾಜಧಾನಿಯ ಯೋಜಿತ ಅಭಿವೃದ್ಧಿ ಮತ್ತು ದೂರದೃಷ್ಟಿಯ ಯೋಜನೆಗಳ ನೀಲ ನಕ್ಷೆ ರೂಪಿಸುವ ಉದ್ದೇಶದಿಂದ ರಚನೆಯಾಗಿರುವ ಬೆಂಗಳೂರು
ಮಹಾನಗರ ಯೋಜನಾ ಸಮಿತಿ (ಬಿಎಂಪಿಸಿ) ಕಳೆದ ಐದು ವರ್ಷಗಳಲ್ಲಿ ನಡೆಸಿರುವುದು ಕೇವಲ ಎರಡು ಸಭೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯ ಹೊಣೆಯನ್ನೂ ಹೊತ್ತಿರುವ, ನಗರದ ಅಭಿವೃದ್ಧಿ ಬಗ್ಗೆ ಅಪಾರ ನಿರೀಕ್ಷೆಗಳನ್ನು ಹೊಂದಿರುವ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರಾದರೂ ಬಿಎಂಪಿಸಿ ಸಭೆ ನಡೆಸುವರೇ ಎಂಬ ನಿರೀಕ್ಷೆ
ಹುಟ್ಟಿಕೊಂಡಿದೆ.

ಪ್ರಸಕ್ತ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಡ್ಡಾದಿಡ್ಡಿ ಕಾಮಗಾರಿಗಳು, ಅದರಿಂದಾಧಿಗುತ್ತಿರುವ ಅಪಾರ ತೊಂದರೆಗಳಿಗೆ ಪ್ಲ್ಯಾನಿಂಗ್‌ ಕೊರತೆ ಕಾರಣ ಎಂಬ ದೂರಿದೆ. ಈ ನಿಟ್ಟಿನಲ್ಲಿ ಬಿಎಂಪಿಸಿಯ ಪಾತ್ರ ಪ್ರಧಾನವಾಗಿದೆ. ಹಾಗಾಗಿ, ಬಿಎಂಪಿಸಿ ಸಭೆ ಕರೆದು ನಗರದ ಅಭಿವೃದ್ಧಿ ಸಂಬಂಧಿಸಿದಂತೆ ಚರ್ಚೆ ನಡೆಸುತ್ತಾರೆ ಎಂದು ನಗರ ಯೋಜನಾ ತಜ್ಞರು ಹಾಗೂ ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಎದುರು ನೋಡುತ್ತಿದ್ದಾರೆ.

ಬೆಂಗಳೂರು ಅಭಿವೃದ್ಧಿಗೆ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚನೆಗೆ ಚಿಂತನೆ

ಹೈಕೋರ್ಟ್‌ನಲ್ಲಿ ಅರ್ಜಿ ಬಾಕಿ

ಬಿಎಂಪಿಸಿ ರಚನೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್‌ನಲ್ಲಿ ಬಾಕಿ ಇದೆ. ಸರಕಾರವು ವಿಚಾರಣೆ ವೇಳೆ ಒಂದಲ್ಲಾ ಒಂದು ಕಾರಣ ನೀಡಿ ಅರ್ಜಿಯನ್ನು ಮುಂದೂಡಿಸಿಕೊಳ್ಳುತ್ತಿದೆ.

ಸಮಿತಿಯಲ್ಲಿ ಯಾರಿದ್ದಾರೆ: ಸಿಎಂ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರು ಉಪಾಧ್ಯಕ್ಷ. ಬೆಂಗಳೂರಿನ ಎಲ್ಲ ಶಾಸಕರು, ಸಂಸದರು,
ಪಾಲಿಕೆಯಿಂದ ಚುನಾಯಿತವಾದ 18 ಮಂದಿ ಸದಸ್ಯರು ಸೇರಿ ಒಟ್ಟು 88 ಮಂದಿ ಸದಸ್ಯರಿರುತ್ತಾರೆ.

ಬಿಎಂಪಿಸಿ ಸಭೆ ನಡೆಯದಿರುವ ವಿಷಯ ಸಿಎಂ ಗಮನಕ್ಕೆ ಬಂದಿದೆ. ನೆರೆ ಪರಿಹಾರಧಿಲ್ಲಿ ತೊಡಗಿದ ಕಾರಣ ಸಭೆ ನಡೆಸಿಲ್ಲ. ನವೆಂಬರ್‌ ಅಥವಾ ಡಿಸೆಂಬರ್‌ ಒಳಗೆ ಮಹಾನಗರ ಯೋಜನಾ ಸಮಿತಿ ಸಭೆ ನಡೆಸುವ ವಿಶ್ವಾಸವಿದೆ-
ಉಮೇಶ್‌ ಶೆಟ್ಟಿ ಪಾಲಿಕೆ ಮತ್ತು ಬಿಎಂಪಿಸಿ ಸದಸ್ಯರು

ಚರ್ಚೆ ಆಗಬೇಕಿರುವ ಪ್ರಮುಖ ವಿಷಯ

■ ಬೆಂಗಳೂರು ಮಹಾನಗರ ಕ್ರಿಯಾ ಯೋಜನೆ 2031 ಅಂತಿಮ

■ ಮತ್ತೆ ಬಿಗಡಾಯಿಸಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ ನಿವಾರಣೆ

■ ರಸ್ತೆ, ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವುದು.

■ ಸಂಚಾರ ದಟ್ಟಣೆ ತಪ್ಪಿಸಲು ಸಮಗ್ರ ಕಾರ‍್ಯಯೋಜನೆ ರೂಪಿಸುವುದು.

■ ಬೆಳ್ಳಂದೂರು ಕೆರೆ ನೊರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು

ಸಮಿತಿ ಕಾರ್ಯಗಳೇನು?

■ ಮಹಾನಗರದ ಆಡಳಿತ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಗಳ ನಡುವೆ ಸಮನ್ವಯತೆ ಸಾಧಿಸುವುದು

■ ನಗರ ಯೋಜನೆ ಸಂಬಂಧ ಪ್ರತಿ ಐದು ವರ್ಷಕ್ಕೊಮ್ಮೆ ಕರಡು ಅಭಿವೃದ್ಧಿ ಯೋಜನೆ ರೂಪಿಸುವುದು

■ ನಗರ ಯೋಜನೆಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸುವುದು

■ ನಗರಾಭಿವೃದ್ಧಿಯ ನೀಲನಕ್ಷೆ, ಮೂಲ ಸೌಕರ್ಯ ವೃದ್ಧಿ, ನಗರ ಸಾರಿಗೆ, ಮಾಲಿನ್ಯ ನಿಯಂತ್ರಣ

■ ನಗರದ ಅಭ್ಯುದಯಕ್ಕೆ ಅಗತ್ಯ ಯೋಜನೆಗಳನ್ನು ರೂಪಿಸುವುದು

■ ನಗರಾಡಳಿತ ಸಂಸ್ಥೆಗಳು ಸಲ್ಲಿಸುವ ಅಭಿವೃದ್ಧಿ ಯೋಜನೆಗಳನ್ನು ಪರಿಷ್ಕರಿಸಿ ಅಂತಿಮಗೊಳಿಸುವುದು

■ ಹಿಂದಿನ ಅಭಿವೃದ್ಧಿ ಯೋಜನೆಗಳ ಭೌತಿಕ ಮತ್ತು ಆರ್ಥಿಕ ಪ್ರಗತಿ ಪರಿಶೀಲನೆ ನಡೆಸುವುದು

■ ಸ್ಥಳೀಯ ಅಭಿವೃದ್ಧಿ ಯೋಜನೆಗಳಿಗಾಗಿ ನಗರಾಡಳಿತ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡುವ ಏಜೆನ್ಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ