ಆ್ಯಪ್ನಗರ

ಪವನ್‌ ಕಲ್ಯಾಣ್‌ ಭೇಟಿ ಮಾಡಿದ ಎಚ್ಡಿಕೆ

ಮುಂದಿನ 2018ರ ವಿಧಾನಸಭೆ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡಲು ಪೂರ್ವತಾಲೀಮು ಆರಂಭಿಸಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಶನಿವಾರ ಹೈದರಾಬಾದ್‌ನಲ್ಲಿ ಜನಸೇನಾ ಪಕ್ಷದ ಸಂಸ್ಥಾಪಕ ಹಾಗೂ ನಟ ಪವನ್‌ ಕಲ್ಯಾಣ್‌ ಅವರನ್ನು ಭೇಟಿ ಮಾಡಿದ್ದಾರೆ.

ವಿಕ ಸುದ್ದಿಲೋಕ 21 Aug 2016, 4:00 am

ಪುತ್ರನ ಸಿನಿಮಾ, ಚುನಾವಣೆ ಸಹಕಾರಕ್ಕೆ ಮನವಿ

Vijaya Karnataka Web ex karnataka cm kumaraswamy meets pawan kalyan
ಪವನ್‌ ಕಲ್ಯಾಣ್‌ ಭೇಟಿ ಮಾಡಿದ ಎಚ್ಡಿಕೆ


ಬೆಂಗಳೂರು: ಮುಂದಿನ 2018ರ ವಿಧಾನಸಭೆ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡಲು ಪೂರ್ವತಾಲೀಮು ಆರಂಭಿಸಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಶನಿವಾರ ಹೈದರಾಬಾದ್‌ನಲ್ಲಿ ಜನಸೇನಾ ಪಕ್ಷದ ಸಂಸ್ಥಾಪಕ ಹಾಗೂ ನಟ ಪವನ್‌ ಕಲ್ಯಾಣ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಗಮನ ಸೆಳೆದಿದೆ.

ಅ. 6ಕ್ಕೆ ದಕ್ಷಿಣದ ನಾಲ್ಕೂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಪುತ್ರ ನಿಖಿಲ್‌ ಅಭಿನಯದ 'ಜಾಗ್ವಾರ್‌' ಚಿತ್ರ ಪ್ರಚಾರದ ಭಾಗವಾಗಿ ಹೈದರಾಬಾದ್‌ಗೆ ತೆರಳಿರುವ ಅವರು, ಪವನ್‌ ಕಲ್ಯಾಣ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಹೊಸ ನೆಲೆ ಕಂಡುಕೊಳ್ಳಲು ವಿಶೇಷ ಆಸಕ್ತಿ ವಹಿಸಿರುವ ಕುಮಾರಸ್ವಾಮಿ, ತೆಲುಗುಭಾಷಿಕ ಪ್ರದೇಶಗಳಲ್ಲಿ ಪ್ರಾದೇಶಿಕ ಶಕ್ತಿಯಾಗಿ ಜೆಡಿಎಸ್‌ ಬಲಪಡಿಸಲು ಪವನ್‌ ಕಲ್ಯಾಣ್‌ ಸಹಕಾರವನ್ನು ಬಯಸಿದ್ದಾರೆ ಎನ್ನಲಾಗಿದೆ.

ಮೂಲತಃ ಚಿತ್ರ ನಿರ್ಮಾಪಕರಾದ ಮೇಲ್ಮನೆ ಸದಸ್ಯ ಸಿ.ಆರ್‌.ಮನೋಹರ್‌ ಮಧ್ಯಸ್ಥಿಕೆಯಲ್ಲಿ ಪವನ್‌ ಕಲ್ಯಾಣ್‌ರನ್ನು ಭೇಟಿ ಮಾಡಿದ ಕುಮಾರಸ್ವಾಮಿ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಹೈದರಾಬಾದ್‌ ಕರ್ನಾಟಕದ ಗಡಿಭಾಗದ ತೆಲುಗು ಭಾಷಿಕರನ್ನು ಜೆಡಿಎಸ್‌ನತ್ತ ಸೆಳೆಯಲು ಮುಂದಿನ ದಿನಗಳಲ್ಲಿ ಪವನ್‌ ಕಲ್ಯಾಣ್‌ ಬೆಂಬಲ ಮತ್ತು ಸಹಕಾರ ಬಯಸಿದ್ದಾರೆ. ಗಡಿಭಾಗದಲ್ಲಿ ಪಕ್ಷದ ಪರ ಪ್ರಚಾರಕ್ಕೆ ಕರೆತರುವ ಉದ್ದೇಶವೂ ಕುಮಾರಸ್ವಾಮಿ ಅವರಿಗಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ