ಆ್ಯಪ್ನಗರ

ಗನ್‌ ಸಹಿತ ವಿಮಾನ ಪ್ರಯಾಣಕ್ಕೆ ಯತ್ನಿಸಿದ ಆನಂದ ಅಸ್ನೋಟಿಕರ್‌

ವಿಮಾನದಲ್ಲಿ ಯಾರೇ ಗನ್ ಸಾಗಿಸಬೇಕಿದ್ದರೆ ಅದಕ್ಕೆ ಸಿಐಎಸ್ಎಫ್‌ನಿಂದ ಪೂರ್ವಾನುಮತಿ ಪಡೆಯಬೇಕು. ತಾಯಿಗೆ ಅನಾರೋಗ್ಯದ ಕಾರಣ ತುರ್ತಾಗಿ ಊರಿಗೆ ಹೊರಟಿದ್ದೆ. ಹ್ಯಾಂಡ್ ಬ್ಯಾಗೇಜ್‌ನಲ್ಲಿ ಗನ್ ಗಮನಿಸದೆ ಅವಸರದಲ್ಲಿ ಬಂದಿದ್ದಾಗಿ ಆನಂದ ಅಸ್ನೋಟಿಕರ್ ತಿಳಿಸಿದ್ದಾರೆ.

Vijaya Karnataka Web 19 Sep 2020, 3:48 pm
ಬೆಂಗಳೂರು: ಅನುಮತಿ ಇಲ್ಲದೇ ಗನ್ ಸಹಿತ ವಿಮಾನ ಪ್ರಯಾಣಕ್ಕೆ ಯತ್ನಿಸಿದ ಮಾಜಿ ಸಚಿವ ಆನಂದ ಆಸ್ನೋಟಿಕರ್ ಅವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
Vijaya Karnataka Web ವಿಮಾನ ನಿಲ್ದಾಣ
ವಿಮಾನ ನಿಲ್ದಾಣ


ಆನಂದ ಅವರ ಹ್ಯಾಂಡ್ ಬ್ಯಾಗೇಜ್‌ನಲ್ಲಿ ಇದ್ದ ಗನ್ ಜಪ್ತಿ ಮಾಡಿ ವಿಮಾನ ನಿಲ್ದಾಣ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

"ವಿಚಾರಣೆ ವೇಳೆ ಗನ್‌ಗೆ ಲೈಸನ್ಸ್ ಇದೆ ಎಂದು ಆನಂದ ತಿಳಿಸಿದ್ದಾರೆ. ಲೈಸನ್ಸ್‌ನ ಸಾಫ್ಟ್ ಕಾಪಿ ತೋರಿಸಿದ್ದಾರೆ. ಹೀಗಾಗಿ, ಮೂಲ ಪ್ರತಿ ತಂದು ತೋರಿಸುವಂತೆ ತಿಳಿಸಲಾಗಿದೆ" ಎಂದು ಈಶಾನ್ಯ ವಿಭಾಗ ಡಿಸಿಪಿ ಸಿ.ಕೆ ಬಾಬಾ ತಿಳಿಸಿದರು.

ವಿಮಾನದಲ್ಲಿ ಯಾರೇ ಗನ್ ಸಾಗಿಸಬೇಕಿದ್ದರೆ ಅದಕ್ಕೆ ಸಿಐಎಸ್ಎಫ್‌ನಿಂದ ಪೂರ್ವಾನುಮತಿ ಪಡೆಯಬೇಕು. ತಾಯಿಗೆ ಅನಾರೋಗ್ಯದ ಕಾರಣ ತುರ್ತಾಗಿ ಊರಿಗೆ ಹೊರಟಿದ್ದೆ. ಹ್ಯಾಂಡ್ ಬ್ಯಾಗೇಜ್‌ನಲ್ಲಿ ಗನ್ ಗಮನಿಸದೆ ಅವಸರದಲ್ಲಿ ಬಂದಿದ್ದಾಗಿ ಆನಂದ ಅಸ್ನೋಟಿಕರ್ ತಿಳಿಸಿದ್ದಾರೆ.

ಆದರೆ, ಲೈಸನ್ಸ್ ಪ್ರತಿ ನೋಡಿದ ಬಳಿಕ ಬರವಣಿಗೆಯಲ್ಲಿ ಅವರಿಂದ ಮಾಹಿತಿ ಪಡೆದುಕೊಂಡು ಕಳುಹಿಸಿಕೊಡಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ