ಆ್ಯಪ್ನಗರ

'ಕಳ್ಳ ಹಕ್ಕಿ'ಯಿಂದ ಕಷ್ಟದಲ್ಲಿ ನೆರವಾಗಿದ್ದ ಜೆಡಿಎಸ್‌ಗೆ ವಂಚನೆ: ಸಾರಾ ಮಹೇಶ್‌ ವಾಗ್ದಾಳಿ

ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹಾಗೂ ಮಾಜಿ ಸಚಿವ ಸಾರಾ ಮಹೇಶ್‌ ನಡುವಿನ ಜಂಗೀಕುಸ್ತಿ ಮುಂದುವರೆದಿದೆ. ಕಷ್ಟದಲ್ಲಿ ಕೈಹಿಡಿದ ಪಕ್ಷಕ್ಕೆ ವಂಚಿಸಿ ಆತ್ಮ ಮತ್ತು ದೇಹ ಮಾರಿಕೊಂಡವರು ನುಡಿದ ಭವಿಷ್ಯ ಎಂದಿಗೂ ನಿಜವಾಗಲ್ಲ ಎಂದು ಸಾ.ರಾ.ಮಹೇಶ್‌ ವಾಗ್ದಾಳಿ ನಡೆಸಿದ್ದಾರೆ.

Vijaya Karnataka Web 19 Oct 2020, 9:32 pm
ಬೆಂಗಳೂರು: ಜೆಡಿಎಸ್ ಪಕ್ಷ ನಾಯಕರನ್ನು ಸೃಷ್ಟಿಸುವ ಕಾರ್ಖಾನೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಷ್ಟದಲ್ಲಿ ಕೈಹಿಡಿದ ಪಕ್ಷಕ್ಕೆ ವಂಚಿಸಿ ಆತ್ಮ ಮತ್ತು ದೇಹ ಮಾರಿಕೊಂಡವರು ನುಡಿದ ಭವಿಷ್ಯ ಎಂದಿಗೂ ನಿಜವಾಗಲ್ಲ ಎಂದು ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ವಿರುದ್ಧ ಮಾಜಿ ಸಚಿವ ಸಾ.ರಾ.ಮಹೇಶ್‌ ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web ex minister sara mahesh slams h vishwanath
'ಕಳ್ಳ ಹಕ್ಕಿ'ಯಿಂದ ಕಷ್ಟದಲ್ಲಿ ನೆರವಾಗಿದ್ದ ಜೆಡಿಎಸ್‌ಗೆ ವಂಚನೆ: ಸಾರಾ ಮಹೇಶ್‌ ವಾಗ್ದಾಳಿ


ಹಳ್ಳಿಹಕ್ಕಿ ಎಚ್‌.ವಿಶ್ವನಾಥ್‌ ವಿರುದ್ಧ ಸರಣಿ ಟ್ವೀಟ್‌ ಮಾಡಿರುವ ಸಾ.ರಾ.ಮಹೇಶ್‌, ರಾಜಕೀಯವಾಗಿ ನೆಲೆ ಕಳೆದುಕೊಂಡಿದ್ದ, ರೆಕ್ಕೆ-ಪುಕ್ಕ ಇಲ್ಲದಂತಾಗಿದ್ದ ಎಚ್. ವಿಶ್ವನಾಥ್ ಅವರಿಗೆ ಜೆಡಿಎಸ್ ಪಕ್ಷ ಆಸರೆ ನೀಡಿ ಶಾಸಕನಾಗಿ ಮಾಡಿತ್ತು. ಮಂಡ್ಯ ಲೋಕಸಭೆ ಚುನಾವಣೆ ನಂತರ ಜೆಡಿಎಸ್ ಪತನದ ಹಾದಿ ಹಿಡಿಯಲಿದೆ ಎಂದು ವ್ಯಾಖ್ಯಾನ ಮಾಡಿದ್ದ ಅವರ ಮಾತು ನೈತಿಕ ಅಧಃಪತನದ ಸಂಕೇತ ಎಂದು ಹೇಳಿದ್ದಾರೆ.

ಜೆಡಿಎಸ್ ಪಕ್ಷ ನಾಯಕರನ್ನು ಸೃಷ್ಟಿಸುವ ಕಾರ್ಖಾನೆ ಎಂಬುದು ನಿಮಗೂ ಗೊತ್ತಿದೆ. ರಾಜಕೀಯ ಕಡುಕಷ್ಟಕಾಲದಲ್ಲಿ ಕೈ ಹಿಡಿದ ಪಕ್ಷಕ್ಕೆ ವಂಚನೆ ಮಾಡಿ ಈಗ ಆತ್ಮ ಮತ್ತು ದೇಹ ಮಾರಿಕೊಂಡ ಅವರು ನುಡಿಯುವ ತಿರುಕನ ಕನಸಿನ ಭಾಷ್ಯ ಎಂದಿಗೂ ನಿಜವಾಗದು. ಸಿದ್ಧಾಂತ ತತ್ವ ಎಂದು ನಾಜೂಕಾಗಿ ಮಾತನಾಡುತ್ತಿದ್ದವರು ಈಗ ಜ್ಯೋತಿಷಿಯಂತೆ ಭವಿಷ್ಯ ಹೇಳುವವರಾಗಿದ್ದಾರೆ ಎಂದು ಕಿಡಿಕಾರಿದರು.


ತಮಗೆ ಪುನರ್ ನೆಲೆ ಕೊಟ್ಟ ಜೆಡಿಎಸ್ ಪಕ್ಷಕ್ಕೆ ಮಾತಿನ ಚಾಟಿ ಬೀಸುವ ವಿಶ್ವನಾಥ್‌ ಅವರನ್ನು ರಾಜ್ಯದ ಜನತೆ ರೈತ ಬಿತ್ತಿದ ಫಸಲನ್ನು ನುಂಗುವ 'ಕಳ್ಳ ಹಕ್ಕಿ'ಯಂತೆ ನೋಡುತ್ತಿದ್ದಾರೆ. ಸಮಯ, ಸಂದರ್ಭ, ರಾಜಕೀಯ ಲಾಭಗಳಿಗೆ ತಕ್ಕಂತೆ ಮಾತು ಮತ್ತು ವಾದ ಸರಣಿ ಬದಲಿಸುವ ಅವರಂತಹ ಅನೇಕರನ್ನು ಜೆಡಿಎಸ್ ಪಕ್ಷ ಜೀರ್ಣಿಸಿಕೊಂಡಿದೆ. ಇನ್ನು, ವಿಶ್ವನಾಥ್‌ ಅವರಂತಹ ಗೋಸುಂಬೆ ರಾಜಕಾರಣಿ ಯಾವ ಲೆಕ್ಕ..? ಎಂದು ಪ್ರಶ್ನಿಸಿದ್ದಾರೆ.

ಶಾಸಕ ಸಾ ರಾ ಮಹೇಶ್‌ ಹೇಳಿಕೆಗೆ ಟಾಂಗ್‌ ನೀಡಿದ ಸಚಿವ ಕೋಟಾ ಶ್ರೀನಿವಾಸ್‌ ಪೂಜಾರಿ

ಮಂತ್ರಿಯಾಗುವ ಕನಸಿನಲ್ಲಿ ತೇಲುತ್ತಿರುವ ಅವರು ಉಪ್ಪು ತಿಂದ ಮನೆಗೆ ದ್ರೋಹ ಎಸಗಿ, ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಭಾಸವಾಗುತ್ತಿದೆ ಎಂದು ಎಚ್‌.ವಿಶ್ವನಾಥ್‌ ವಿರುದ್ಧ ಟ್ವೀಟ್‌ ಪ್ರಹಾರ ನಡೆಸಿದ್ದಾರೆ.

ಆಂಧ್ರದ ಮಹಿಳೆಗಾಗಿ ಕನ್ನಡಿಗನಿಗೆ ಅವಮಾನ, ಜಿಲ್ಲಾಧಿಕಾರಿ ಶರತ್‌ ವರ್ಗಾವಣೆಗೆ ಸಾರಾ ಮಹೇಶ್‌ ಆಕ್ರೋಶ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ