ಆ್ಯಪ್ನಗರ

ಹಸು ಮಾರಿ ಅಪಹರಣಕಾರರಿಗೆ ಹಣ ನೀಡಿದ್ದ ವರ್ತೂರು ಪ್ರಕಾಶ್: ತನಿಖೆಗೆ ಹಿನ್ನೆಡೆ

ಹಣಕಾಸು ವಿಚಾರದಲ್ಲಿಯೇ ಮಾಜಿ ಸಚಿವ ವರ್ತೂರು ಪ್ರಕಾಶ್‌ ಅಪಹರಣವಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಅಪಹರಣ ಮಾಡಿದವರು ಯಾರೆಂದು ಗೊತ್ತಿದ್ದರೂ ಮಾಹಿತಿ ನೀಡಿದೆ ಮಾಜಿ ಸಚಿವರು ತನಿಖೆಗೆ ಅಸಹಕಾರ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮಹಾರಾಷ್ಟ್ರ ಟೈಮ್ಸ್ 3 Dec 2020, 10:33 pm
ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್‌ ಅಪಹರಣ ಪ್ರಕರಣದಲ್ಲಿ ಹಣಕಾಸು ವಿಚಾರದಲ್ಲಿಯೇ ಮಾಜಿ ಸಚಿವರ ಅಪಹರಣವಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಅಪಹರಣ ಮಾಡಿದವರು ಯಾರೆಂದು ಗೊತ್ತಿದ್ದರೂ ಮಾಹಿತಿ ನೀಡಿದೆ ಮಾಜಿ ಸಚಿವರು ತನಿಖೆಗೆ ಅಸಹಕಾರ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Vijaya Karnataka Web varthur Prakash


ಪರಿಚಯಿಸ್ಥರಿಂದಲೇ ಅಪಹರಣವಾಗಿದ್ದು, ಮರ್ಯಾದೆಗೆ ಅಂಜಿ ಅಥವಾ ಭಯದಿಂದ ಕೆಲವೊಂದು ಮಾಹಿತಿಯನ್ನು ಪೊಲೀಸರಿಗೆ ಮಾಹಿತಿ ನೀಡುತ್ತಿಲ್ಲ ಎನ್ನಲಾಗಿದೆ.

ಹಸು ಮಾರಿ ಹಣ ಕೊಟ್ಟ ವರ್ತೂರು: ಫಾರ್ಮ್‌ಹೌಸ್‌ನಲ್ಲಿದ್ದ 100 ಹಸುಗಳನ್ನು ಮಾರಿ 48 ಲಕ್ಷ ರೂ.ಗಳನ್ನು ಅಪಹರಣ ಮಾಡಿದವರಿಗೆ ನರಸಾಪುರ ಬಳಿಯಿರುವ ಕಾಫಿ ಡೇ ಬಳಿ ಕೊಡಿಸಿದರು ಎಂದು ಹಸು ವ್ಯಾಪಾರಸ್ಥ ನಯಾಜ್‌ ಸಹೋದರ ಸಿರಾಜ್‌ ತಿಳಿಸಿದ್ದಾರೆ.

ನನ್ನ ಕಾರ್‌ನಲ್ಲಿ ಖಾರದ ಪುಡಿ, ಹುಡುಗಿ ವೇಲ್‌ ಸಿಕ್ಕಿದೆ - ಸಮಗ್ರ ತನಿಖೆಗೆ ವರ್ತೂರ್‌ ಪ್ರಕಾಶ್‌ ಆಗ್ರಹ

ಹೇಳಿಕೆ ಗೊಂದಲ: ವರ್ತೂರು ಹೇಳಿಕೆಗಳು ಬದಲಾಗುತ್ತಿರುವುದು ತನಿಖೆಗೆ ಹಿನ್ನೆಡೆಯಾಗಿದೆ. ಈ ಹಿಂದೆ ಮೊಬೈಲ್‌ನ್ನು ಆಫ್‌‌ ಮಾಡಿಸಿದ್ದರು ಎಂದವರು, ನಂತರ ನಿರಂತರವಾಗಿ ಮೊಬೈಲ್‌ ಆನ್‌ ಆಗಿತ್ತು ಎನ್ನುತ್ತಿದ್ದಾರೆ. ಅವರು ಹೇಳಿದ ಜಂಗಾಲಹಳ್ಳಿಯ ಘಟನಾ ಸ್ಥಳದಲ್ಲಿ ಯಾವುದೇ ಕುರುಹುಗಳು ಕಂಡುಬಂದಿಲ್ಲಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವರ್ತೂರು ಪ್ರಕಾಶ್ ಅಪಹರಣ: ಪ್ರಕರಣದ ಸುತ್ತ ಅನುಮಾನದ ಹುತ್ತ!

ಅಪರಿಚಿತರಿಂದ ಕರೆಗಳು: ವರ್ತೂರು ಕಾಲ್‌ ರೆಕಾರ್ಡ್‌ ಪರಿಶೀಲನೆ ವೇಳೆ ಅಪರಿಚಿತ ಸಂಖ್ಯೆಗಳಿಂದ ಕರೆಗಳು ಬಂದಿವೆ. ಐದಾರು ಸಂಖ್ಯೆಗಳಿದ್ದರೂ, ಕೇವಲ ಒಂದು ಮೊಬೈಲ್‌ ಸಂಖ್ಯೆ ನೀಡಿರುವುದು ಮತ್ತು ಸಿಡಿಆರ್‌ ಮಾಹಿತಿಗೂ ತಾಳೆಯಾಗುತ್ತಿಲ್ಲ ಎಂದು ಪೊಲೀಸ್‌ ಮೂಲಗಳು ವಿಕಗೆ ತಿಳಿಸಿವೆ.

"ಮಾಜಿ ಸಚಿವರ ಅಪಹರಣ ಪ್ರಕರಣ ತನಿಖೆಗೆ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದ್ದು, ಈಗಾಗಲೇ ಕೆಲ ಸುಳಿವು ಸಿಕ್ಕಿದೆ."
- ಕಾರ್ತಿಕ್‌ರೆಡ್ಡಿ, ಕೋಲಾರ ಎಸ್ಪಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ