ಆ್ಯಪ್ನಗರ

ಕೊಡಗು ಪ್ರವಾಹ: ಭೂ ವಿಜ್ಞಾನಿಗಳಿಗೂ ನಿಖರ ಕಾರಣ ತಿಳಿದಿಲ್ಲ

ಕೊಡಗಿನಲ್ಲಿ ಭಾರೀ ಭೂಕುಸಿತ ಮತ್ತು ಪ್ರವಾಹ ಉಂಟಾಗಿ 15 ದಿನ ಕಳೆದರೂ ಅದಕ್ಕೆ ನಿಖರ ಕಾರಣ ಏನು ಎನ್ನುವುದು ಇನ್ನೂ ಪತ್ತೆಯಾಗಿಲ್ಲ. ಜತೆಗೆ ಭೂಗರ್ಭಶಾಸ್ತ್ರಜ್ಞರಿಗೂ ಅದಕ್ಕೆ ಸೂಕ್ತ ಕಾರಣ ಏನು ಎನ್ನುವುದನ್ನು ಸರಿಯಾಗಿ ಪತ್ತೆಮಾಡಲು ಸಾಧ್ಯವಾಗಿಲ್ಲ.

Vijaya Karnataka Web 2 Sep 2018, 6:13 pm
ಬೆಂಗಳೂರು: ಕೊಡಗಿನಲ್ಲಿ ಭಾರೀ ಭೂಕುಸಿತ ಮತ್ತು ಪ್ರವಾಹ ಉಂಟಾಗಿ 15 ದಿನ ಕಳೆದರೂ ಅದಕ್ಕೆ ನಿಖರ ಕಾರಣ ಏನು ಎನ್ನುವುದು ಇನ್ನೂ ಪತ್ತೆಯಾಗಿಲ್ಲ. ಜತೆಗೆ ಭೂಗರ್ಭಶಾಸ್ತ್ರಜ್ಞರಿಗೂ ಅದಕ್ಕೆ ಸೂಕ್ತ ಕಾರಣ ಏನು ಎನ್ನುವುದನ್ನು ಸರಿಯಾಗಿ ಪತ್ತೆಮಾಡಲು ಸಾಧ್ಯವಾಗಿಲ್ಲ. ಸ್ಥಳೀಯರು ಕೊಡಗಿನ ಪರಿಸ್ಥಿತಿಗೆ ಸಮೀಪದ ಅಣೆಕಟ್ಟೆಗಳೇ ಕಾರಣ ಎಂದರೂ, ಒಟ್ಟಾರೆ ಕೊಡಗಿನಲ್ಲಿ ಏಕಾಏಕಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಮತ್ತು ಪ್ರವಾಹ ಉಂಟಾಗಲು ಕಾರಣವೇನು ಎಂದು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ.
Vijaya Karnataka Web Coorgblast


ಕೊಡಗಿನ ಗಾಳಿಬೀಡುವಿನ ನವೋದಯ ವಿದ್ಯಾಲಯದಲ್ಲಿ ಅಳವಡಿಸಲಾಗಿರುವ ಭೂಕಂಪ ಮಾಪನ ಕೇಂದ್ರದ ಉಪಕರಣ ಆ. 27 ಮತ್ತು 28ರಂದು ಸುತ್ತಲಿನ ಪ್ರದೇಶದಲ್ಲಿ ಎರಡು ಸಣ್ಣ ಕಂಪನಗಳು ಉಂಟಾಗಿರುವುದನ್ನು ದಾಖಲಿಸಿವೆ. ಅವು ಹೈದರಾಬಾದ್‌ನ ರಾಷ್ಟ್ರೀಯ ಜಿಯೋಫಿಸಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್‌ನಲ್ಲಿ ದಾಖಲಾಗಿವೆ. ಆದರೆ ಅಲ್ಲಿನ ತಜ್ಞರು ಕೂಡ ಭೂಕಂಪನದ ಕೇಂದ್ರ ಎಲ್ಲಿತ್ತು ಮತ್ತು ಅದಕ್ಕೆ ಕಾರಣವೇನು ಎಂದು ಬಹಿರಂಗಪಡಿಸಿಲ್ಲ.

ಗಾಳಿಬೀಡಿನಲ್ಲಿ ಕಾಫಿ ಪ್ಲಾಂಟರ್ ಆಗಿರುವ ಕೆವಿನ್ ಕಾರ್ಯಪ್ಪ ಪ್ರಕಾರ, ಎರಡು ದಿನವೂ ಸಣ್ಣ ಪ್ರಮಾಣದ ಕಂಪನ ಮತ್ತು ಶಬ್ಧ ಕೇಳಿದೆ.

ರಾಜ್ಯ ನೈಸರ್ಗಿಕ ವಿಪತ್ತು ಪರಿವೀಕ್ಷಣಾ ಕೇಂದ್ರದ ನಿರ್ದೇಶಕ ಜಿಎಸ್‌ ಶ್ರೀನಿವಾಸ್ ರೆಡ್ಡಿ ಪ್ರಕಾರ, ಮೇಘಸ್ಫೋಟ ಮತ್ತು ನದಿಗಳಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಿದ್ದರಿಂದ ಪ್ರವಾಹ ಉಂಟಾಗಿದೆ. ನಿರೀಕ್ಷಿತ ಮಟ್ಟಕ್ಕಿಂತ ಅತ್ಯಧಿಕ ಪ್ರಮಾಣದ ಮಳೆ ಅಲ್ಲಿ ಬಿದ್ದಿದೆ.

ಜತೆಗೆ ಕೊಡಗಿನ ಪರಿಸ್ಥಿತಿಯ ನಿಖರ ಕಾರಣ ತಿಳಿಯಲು ಇಸ್ರೋ ನೆರವಿನೊಂದಿಗೆ ರಾಜ್ಯದ ಸಂಸ್ಥೆಗಳು, ತಜ್ಞರು ಶ್ರಮಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ