ಕಣ್ಣಿಗೆ ಎರವಾದ ಪಟಾಕಿ: ಹನ್ನೊಂದು ಪ್ರಕರಣಗಳು ದಾಖಲು
ದೀಪಾವಳಿ ಹಬ್ಬದ ಸಂಭ್ರಮಕ್ಕೆ ಮೆರುಗು ನೀಡಬೇಕಾಗಿದ್ದ ಪಟಾಕಿ ಇಬ್ಬರ ಕಣ್ಣಿಗೆ ಮಾರಕವಾಗಿ ಪರಿಣಮಿಸಿದೆ.
Vijaya Karnataka Web 19 Oct 2017, 1:43 pm
ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮಕ್ಕೆ ಮೆರುಗು ನೀಡಬೇಕಾಗಿದ್ದ ಪಟಾಕಿ ಇಬ್ಬರ ಕಣ್ಣಿಗೆ ಮಾರಕವಾಗಿ ಪರಿಣಮಿಸಿದೆ.
ಮಾರ್ಕೆಟ್ ಸಮೀಪದ ನಿವಾಸಿ ಏಳು ವರ್ಷದ ಭವೇಶ್ ಮತ್ತು ಆಡುಗೋಡಿ ಸಮೀಪದ ನಿವಾಸಿ 22 ವರ್ಷದ ಶಾರುಖ್ ಎಂಬವರ ಎಡದ ಕಣ್ಣುಗಳಿಗೆ ಪಟಾಕಿಯಿಂದ ಗಂಭೀರ ಗಾಯಗಳಾಗಿವೆ. ಇಬ್ಬರೂ ಮಿಂಟೊ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಿಂಟೊದಲ್ಲಿ ಎರಡು , ಮೋದಿ ಆಸ್ಪತ್ರೆಯಲ್ಲಿ5, ನಾರಾಯಣ ಆಸ್ಪತ್ರೆಯಲ್ಲಿ ನಾಲ್ಕು ಪ್ರಕರಣಗಳು ಸೇರಿ ಒಟ್ಟು ಹನ್ನೊಂದು ಪ್ರಕರಣಗಳು ದಾಖಲಾಗಿವೆ.
ಮಾರ್ಕೆಟ್ ಸಮೀಪದ ನಿವಾಸಿ ಏಳು ವರ್ಷದ ಭವೇಶ್ ಮತ್ತು ಆಡುಗೋಡಿ ಸಮೀಪದ ನಿವಾಸಿ 22 ವರ್ಷದ ಶಾರುಖ್ ಎಂಬವರ ಎಡದ ಕಣ್ಣುಗಳಿಗೆ ಪಟಾಕಿಯಿಂದ ಗಂಭೀರ ಗಾಯಗಳಾಗಿವೆ. ಇಬ್ಬರೂ ಮಿಂಟೊ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಿಂಟೊದಲ್ಲಿ ಎರಡು , ಮೋದಿ ಆಸ್ಪತ್ರೆಯಲ್ಲಿ5, ನಾರಾಯಣ ಆಸ್ಪತ್ರೆಯಲ್ಲಿ ನಾಲ್ಕು ಪ್ರಕರಣಗಳು ಸೇರಿ ಒಟ್ಟು ಹನ್ನೊಂದು ಪ್ರಕರಣಗಳು ದಾಖಲಾಗಿವೆ.