ಆ್ಯಪ್ನಗರ

ಶಬರಿಮಲೆಯಲ್ಲಿ ರಾಜ್ಯದ ಭಕ್ತರಿಗೆ ಸೌಕರ್ಯ

ಯಾತ್ರಾರ್ಥಿಗಳಿಗೆ 'ನಿಲಕ್ಯಲ್‌' ಪ್ರದೇಶವನ್ನು ಬೇಸ್‌ ಕ್ಯಾಂಪ್‌ ಮಾಡಲಾಗಿದೆ. ಇಲ್ಲಿ ಭಕ್ತರಿಗೆ ವಿಶ್ರಾಂತಿ ತಾಣ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ.

Vijaya Karnataka 30 Dec 2018, 7:54 am
ಬೆಂಗಳೂರು: ರಾಜ್ಯದಿಂದ ಶಬರಿಮಲೆಗೆ ತೆರಳುವ ಯಾತ್ರಾರ್ಥಿಗಳಿಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೇರಳ ಸರಕಾರ ಅಗತ್ಯ ಸೌಲಭ್ಯ ಕಲ್ಪಿಸಿದೆ.
Vijaya Karnataka Web sabarimala


ಯಾತ್ರಾರ್ಥಿಗಳಿಗೆ 'ನಿಲಕ್ಯಲ್‌' ಪ್ರದೇಶವನ್ನು ಬೇಸ್‌ ಕ್ಯಾಂಪ್‌ ಮಾಡಲಾಗಿದೆ. ಇಲ್ಲಿ ಭಕ್ತರಿಗೆ ವಿಶ್ರಾಂತಿ ತಾಣ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ.

ಭಕ್ತರ ಸಂಖ್ಯೆ ಹೆಚ್ಚಿರುವ ದಿನಗಳಲ್ಲಿ ಚೆಂಗನ್ನೂರು, ಪಟ್ಟಣಂತಿಟ್ಟ, ಕೊಟ್ಟಾಯಂ, ವಂಡಿಪೆರಿಯಾರ್‌, ಎರುಮೇಲಿ ಮತ್ತಿತರ ಸ್ಥಳಗಳಲ್ಲಿ ಭಕ್ತರು ಕಾಯಬೇಕಾಗುತ್ತದೆ. ಯಾತ್ರಾರ್ಥಿಗಳು ನಿಲಕ್ಯಲ್‌ನಿಂದ ಪಂಪಾ ಕ್ಷೇತ್ರಕ್ಕೆ ಹೋಗಲು ಖಾಸಗಿ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಹೀಗಾಗಿ ಕೇರಳ ಸರಕಾರ ಕಲ್ಪಿಸಿರುವ ಬಸ್‌ ಸೌಕರ್ಯವನ್ನು ಪಡೆದು ಪಂಪಾದಿಂದ ಕಾಲ್ನಡಿಗೆಯಲ್ಲಿ ಸನ್ನಿಧಾನಕ್ಕೆ ತೆರಳಿ ದೇವರ ದರ್ಶನ ಪಡೆಯಬೇಕು. ಹೀಗಾಗಿ ಭಕ್ತರು ದೇವಾಲಯಕ್ಕೆ ಹೋಗಲು ಮೂಲಕ sabarimala.keralartc.com ಟಿಕೆಟ್‌ ಮುಂಗಡವಾಗಿ ಕಾಯ್ದಿರಿಸಿಕೊಳ್ಳಬಹುದಾಗಿದೆ ಎಂದು ರಾಜ್ಯ ಮುಜರಾಯಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಶಬರಿಮಲೆ ಕ್ಷೇತ್ರವನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಲು ಕ್ಷೇತ್ರದಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್‌ ನಿಷೇಧಿಸಲಾಗಿದ್ದು, ಯಾತ್ರಿಕರು ಪ್ಲಾಸ್ಟಿಕ್‌ನಿಂದ ತಯಾರಿಸುವ ಯಾವುದೇ ವಸ್ತುಗಳನ್ನು ಬಳಸದಂತೆ ಸೂಚನೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ